ಅಲಹಾಬಾದ್(ವಿಶ್ವಕನ್ನಡಿಗ ನ್ಯೂಸ್): ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿಮಾನ ನಿಲ್ದಾಣದಲ್ಲಿ ಅಲಹಾಬಾದ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯಾಗ್ ರಾಜ್ ನಲ್ಲಿ ಆಲ್ ಇಂಡಿಯಾ ಪೀಪಲ್ಸ್ ಫಾರಂ ನೇತೃತ್ವದಲ್ಲಿ ನಡೆಯುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲು ದಿಲ್ಲಿಯಿಂದ ಆಗಮಿಸಿದ್ದರು.
ಈ ವೇಳೆ ವಿಮಾನ ನಿಲ್ದಾಣದಿಂದ ಗೊರಗೆ ಹೋಗುವಾಗ ಪೊಲೀಸರು ಸುತ್ತುವರೆದು ಹೆಸರನ್ನು ಕೇಳಿ ವಿಐಪಿ ಲಾಂಚ್ ಗೆ ಕರೆದೋಯ್ದು, ಭದ್ರತಾ ಕೋಣೆಗೆ ಕರೆದೊಯ್ಯಲಾಗಿದೆ ಎಂದು ಕಣ್ಣನ್ ತಿಳಿಸಿದ್ದಾರೆ. ಅವರನ್ನು ಅಲ್ಲಿಂದಲೇ ತಿರುಗಿ ದೆಹಲಿಗೆ ಮರುಕಳಿಸಲಾಗಿದೆ ಎಂದು ತಿಳಿದು ಬಂದೆದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.