(www.vknews.com) : ಕೊರೋನ ವೈರಸ್ ಬಂದನಂತರ ಜನಗಳ ಸಂಚಾರ ಸ್ಥಗಿತವಾಯಿತು ವಾಹನಗಳ ಸಂಚಾರ ಸಂಗೀತವಾಯಿತು ವ್ಯಾಪಾರ ವಹಿವಾಟುಗಳು ಸ್ಥಗಿತವಾಯಿತು ಕಾರ್ಖಾನೆಗಳು ಮುಚ್ಚಿತು ಐಟಿ-ಬಿಟಿ ಗಳು ಮುಚ್ಚಿತ್ತು ಎಲ್ಲವು ಸ್ಥಗಿತಗೊಂಡಿತು ಎಲ್ಲೆಲ್ಲೂ ನಿಶಬ್ದತೆ ಆವರಿಸಿತು ಇದೆಲ್ಲವೂ ಎಲ್ಲರಿಗೂ ತಿಳಿದಿರುವಂತಹ ವಿಷಯವೇ ಹಾಗೂ ಇದರಿಂದ ನಷ್ಟಗಳು ನೋವುಗಳನ್ನು ಬಹುತೇಕ ಜನರು ಅನುಭವಿಸುತ್ತಿದ್ದಾರೆ ಇದನ್ನು ಮತ್ತೆ ಪ್ರತ್ಯೇಕವಾಗಿ ನಾನು ಹೇಳಬೇಕೆಂದಿಲ್ಲ ಆದರೆ ನಾನು ಹೇಳಲು ಬಯಸುತ್ತಿರುವ ವಿಷಯವೆಂದರೆ ನನಗೆ ಅರ್ಥ ಆಗದ ನನ್ನನ್ನು ಕಾಡುತ್ತಿರುವ ವಿಷಯ ವಾಗಿದೆ.
ಕೋವಿಡ್ 19 ನಿಂದಾಗಿ ಲಾಕ್ಡೌನ್ ಆದ ಮೊದಲನೆಯ ವಾರದಿಂದಲೇ ಕೋರೋನ ರೋಗಿಗಳ ಸಂಖ್ಯೆ ಹೊರತುಪಡಿಸಿ ದಿನನಿತ್ಯದ ರೋಗದಿಂದ ಬಳಲುತ್ತಿದ್ದ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು. ಯಾವಾಗಲೂ ದಿನಕ್ಕೆ ಕನಿಷ್ಠವೆಂದರೂ ಎರಡರಿಂದ ನಾಲ್ಕು ಬಾರಿ ಆದರೂ ಓಡಾಡುತ್ತಿದ್ದ ಆಂಬುಲೆನ್ಸ್ ಗಳ ಸೈರನ್ ಗಳು ಕೇಳದಂತಾಯಿತು.
ನಾನು ಮೊನ್ನೆಯ ದಿವಸ ನನ್ನ ಮಗುವಿಗೆ ತಿಂಗಳ ಲಸಿಕೆಯನ್ನು ಹಾಕಿಸಲು ಕಾರವಾರದ ಜಿಲ್ಲಾಸ್ಪತ್ರೆಗೆ ಹೋಗಿದ್ದೆ ಹೋಗುವ ಸಮಯದಲ್ಲಿ ಕಾರವಾರದ ರಸ್ತೆಯ ಬದಿಯಲ್ಲಿ ಇರುವ ಮರಗಳು ಹೂವು ಬಿರಿದು ಕಂಗೊಳಿಸುತ್ತಿತ್ತು ವಾಹನಗಳ ಹೋಡಾಟವಿಲ್ಲದೆ ರಸ್ತೆಯಲ್ಲಿ ಬಿದ್ದಿದ್ದ ಹೂಗಳು ಹಾಗೆಯೇ ಇತ್ತು ಅದು ಆಸ್ಪತ್ರೆಯ ವರೆಗೂ ಯಾರೋ ಹೂಗಳನ್ನು ಚೆಲ್ಲಿ ನಮ್ಮನ್ನು ಸ್ವಾಗತಕೋರುವಂತೆ ಕಾಣುತ್ತಿತ್ತು.
ಹಾಗೆ ಆಸ್ಪತ್ರೆಗೆ ಹೋದ ನಮಗೆ ಆಶ್ಚರ್ಯವೆನ್ನಿಸಿದ್ದು ದಿನನಿತ್ಯವೂ ಸಾವಿರಾರು ರೋಗಿಗಳ ಜಂಗುಳಿಯಿಂದ ತುಂಬಿದ ಆಸ್ಪತ್ರೆಯ ಬಿಕೋ ಎನ್ನುತ್ತಿತ್ತು ರೋಗಿಗಳ ನರಳಾಟವಿಲ್ಲ ದೆ ಶಾಂತವಾಗಿತ್ತು ಡಾಕ್ಟರ್ ಗಳ ನರ್ಸ್ಗಳ ಅತ್ತಿಂದ ಇತ್ತ ಇತ್ತಿಂದ ಅತ್ತ ಹೋಡಾಟವಿಲ್ಲದೆ ಆಸ್ಪತ್ರೆಯು ಮೌನವಾಗಿತ್ತು ಹಾಗೆಯೇ ನೋಡುತ್ತ ನಿಂತ ನನಗೆ ಕಾಡಿದ ಪ್ರಶ್ನೆಯೆಂದರೆ ಈ ಕರೋನಾ ವೈರಸ್ ಗು ದಿನನಿತ್ಯದ ರೋಗಕ್ಕೂ ಏನು ಸಂಬಂಧ? ಎಂದು. ಕರೋನ ಬಂದಾಗಿನಿಂದ ದಿನನಿತ್ಯದ ರೋಗಗಳು ಏಕೆ ಮಾಯವಾಯಿತು?ಎಂದು ಈ ಕೋರೋನ ವೈರಸ್ ಗೆ ಬಾಕಿ ಎಲ್ಲಾ ರೋಗಗಳನ್ನು ಮೆಟ್ಟಿನಿಲ್ಲುವ ಶಕ್ತಿ ಇದೆಯಾ? ಎಂದು.
ಇದರಲ್ಲಿ ನನಗೆ ಪ್ರಮುಖವಾಗಿ ಕಾಡಿದ ವಿಷಯವೆಂದರೆ ನಮ್ಮನ್ನು ನಾವೇ ರೋಗಿಗಳನ್ನಾಗಿ ಮಾಡಿಕೊಳ್ಳುತ್ತಿದ್ದೆವು ಮತ್ತು ನಮ್ಮ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿಸಿ ಮತ್ಯಾರು ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಿದ್ದರು ಎಂದು.
ಹೀಗೆ ಹೇಳುತ್ತಲೇ ಒಂದು ಘಟನೆ ನೆನಪಿಗೆ ಬಂತು ಅದು ನನ್ನ ಮನೆಯ ಬಳಿ ನಡೆದಂತಹ ಘಟನೆ ಏನೆಂದರೆ ಸುಮಾರು 55 ವರ್ಷ ಪ್ರಾಯವಿರುವ ಪ್ರಶಾಂತ್ ಎಂಬ ವ್ಯಕ್ತಿಯೊಬ್ಬರಿಗೆ ಲಾಗ್ ಡೌನ್ ಆಗುವ ಮೊದಲು ಹೃದಯದ ನೋವು ಕಾಣಿಸಿಕೊಂಡು ಹಾಸ್ಪಿಟಲ್ಗೆ ತೋರಿಸಿದ್ದರು ಅಲ್ಲಿ ಅವರಿಗೆ ಹೃದಯದಲ್ಲಿ 3 ಬ್ಲಾಕ್ ಇದೆ ಎಂದು ಹೇಳಲಾಗಿತ್ತು ಮತ್ತು ಆದಷ್ಟು ಬೇಗ ಆಪರೇಷನ್ ಆಗಬೇಕು ಇಲ್ಲದಿದ್ದರೆ ಒಂದು ತಿಂಗಳು ಕೂಡ ಸಮಯ ಇರುವುದಿಲ್ಲ ಎಂದು.
ಆ ಮಾತನ್ನು ಕೇಳಿ ಭಯಭೀತರಾದ ಅವರು ಅವರ ಕುಟುಂಬದಲ್ಲಿ ತಿಳಿಸಿ ಅವರೊಂದಿಗೆ ಚರ್ಚಿಸಿ ಸಾಲಸೂಲ ಮಾಡಿ ಆಪರೇಷನ್ ಗೆ ತಯಾರಾಗಿದ್ದರು ಅಷ್ಟೊತ್ತಿಗೆ ಲಾಕ್ ಡೌನ್ ಆಗಿಬಿಟ್ಟಿತ್ತು. ಆ ಕಾರಣದಿಂದಾಗಿ ಇಂದು ನಾಳೆ ಎಂದು ಕಾಯುತ್ತಾ ತಿಂಗಳು ಕಳೆದು ಹಲವು ದಿನಗಳೇ ಉರುಳಿ ಹೋಯಿತು ಆದರೆ ಆ ವ್ಯಕ್ತಿಗೆ ಯಾವುದೇ ನೋವಾಗಲಿ ಯಾವುದೇ ರೀತಿಯ ಅನಾರೋಗ್ಯ ವಾಗಲಿ ಮತ್ತೆ ಕಾಣಿಸಿಕೊಂಡಿಲ್ಲ ಹಾಗೂ ಡಾಕ್ಟರುಗಳು ಹೇಳಿದ ರೀತಿಯಲ್ಲಿ ಸಾವು ಬಂದಿಲ್ಲ ಮೊದಲಿಗಿಂತ ಚೆನ್ನಾಗಿಯೇ ಬದುಕಿದ್ದಾರೆ ಇದನ್ನೆಲ್ಲಾ ನೋಡುತ್ತಿದ್ದರೆ ನನಗೆ ಮತ್ತೆ ಕಾಡುವ ಪ್ರಶ್ನೆಯೆಂದರೆ ಏನಿದರ ಸತ್ಯಾಂಶ ಜನಮರುಳೋ ಜಾತ್ರೆ ಮರುಳೋ ಎಂದು…
ಮನ್ಸೂರ್ ಅಹ್ಮದ್ ಕೌಡಳ್ಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.