(www.vknews.com) : ಮಾರಕವಾದ ಕೊರೋನಾ ವೈರಸ್ ಸೋಂಕಿನಿಂದ ವಿಶ್ವವೇ ತತ್ತರಿಸಿ ಹೋಗಿದೆ. ವಿಶ್ವಾದ್ಯಂತ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಇದ್ದು, ಮೃತರಾಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಅದರಲ್ಲೂ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ದಿನೇ ದಿನೇ ಮೃತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇನು?.
ಸಾರ್ಸ್ ಮೊದಲಾದ ಇತರೆ ವೈರಸ್ ರೋಗಗಳಿಗೆ ಹೋಲಿಸಿದಲ್ಲಿ ಕೊರೋನಾ ವೈರಸ್ ರೋಗದಿಂದ ಮರಣ ಹೊಂದಿರುವವರ ಸಂಖ್ಯೆ ಕಡಿಮೆ. ಯಾವುದೇ ರೋಗವಿಲ್ಲದ ಒಬ್ಬ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ತಗುಲಿದರೆ ಅವನಿಗೆ ಅದರಿಂದ ರೋಗ ಮುಕ್ತನಾಗಬಹುದು. ಆದರೆ ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ಎದೆನೋವು, ಅಸ್ತಮಾ ಮೊದಲಾದ ಕಾಯಿಲೆಗಳಿರುವವರಿಗೆ ಕೊರೋನಾ ವೈರಸ್ ಸೋಂಕು ತಗುಲಿದರೆ ಅವರು ಅತ್ಯಂತ ಜಾಗರೂಕರಾಗಬೇಕು. ಕಾರಣ ಇಂತಹ ರೋಗಗಳಿರುವವರೇ ಹೆಚ್ಚಾಗಿ ಕೊರೋನಾ ಸೋಂಕಿನಿಂದ ಮರಣ ಹೊಂದಿರುವುದು.
ಇನ್ನು ಈಗ ಗಲ್ಫ್ ರಾಷ್ಟ್ರಗಳ ಬಗ್ಗೆ ಹೇಳೋದಾದರೆ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ನಮ್ಮ ಹೆಚ್ಚಿನ ಸಹೋದರರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸವುದಿಲ್ಲ. ಪ್ರವಾಸಿಗಳು ಏನಾದರು ಆರೋಗ್ಯದಲ್ಲಿ ತೊಂದರೆ ಬಂದಲ್ಲಿ “ಪೆನಾಡೊಳ್” ಮೊದಲಾದ ಯಾವುದಾದರೂ ಮಾತ್ರೆಗಳನ್ನು ಕುಡಿದು ಸರಿಮಾಡಿಕೊಳ್ಳುತ್ತಾರೆ. ಹೀಗಾಗಿ 80 ಶತಮಾನ ಪ್ರವಾಸಿಗಳಿಗೂ ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ಎದೆನೋವು, ಅಸ್ತಮಾ ಮೊದಲಾದ ಯಾವುದಾದರೊಂದು ತೊಂದರೆ ಇದ್ದೇ ಇರುತ್ತದೆ. ಹೀಗಾಗಿ ಅಂತವರಿಗೆ ಕೊರೋನಾ ಸೋಂಕು ತಗುಲಿದಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಕೊನೆಯದಾಗಿ ನನ್ನ ಪ್ರವಾಸಿ ಸ್ನೇಹಿತರಿಗೆ ನನ್ನ ಒಂದು ಕಿವಿಮಾತು ಏನೆಂದರೆ ತಾವು ದುಡಿದು ಮೊದಲು ತಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಬಳಿಕ ಊರು, ಕುಟುಂಬ, ಸಂಘಟನೆಗಳನ್ನು ನೋಡಿ. ನಿಮ್ಮಅರೋಗ್ಯ ನಿಮ್ಮ ಕೈಯಲ್ಲಿದೆ.
ಲೇಖನ : Qayan K, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.