ಉಡುಪಿ(ವಿಶ್ವಕನ್ನಡಿಗ ನ್ಯೂಸ್): ಇಡೀ ದೇಶವೇ ಲಾಕ್’ಡೌನ್ ನಿಂದ ಸಂಕಷ್ಟದಲ್ಲಿರುವಾಗ ಪುಟ್ಟ ಹೃದಯವೊಂದು ಬಡವರ ನೋವಿಗೆ ಸ್ಪಂದಿಸಿ ಟ್ಯಾಬ್ ಖರೀದಿಸಲು ಇಟ್ಟ ಹಣವನ್ನು ಸೈಂಟ್ ಸಿಸಿಲಿಯ 4 ನೇ ತರಗತಿಯ ವಿದ್ಯಾರ್ಥಿನಿ ಅನಮ್ ಅನೀಸ್ ದಾನವಾಗಿ ನೀಡಿದ್ದಾರೆ.
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಲಾಕ್’ಡೌನ್ ಆರಂಭವಾದ ದಿನದಿಂದ ರಿಲೀಫ್ ಕೆಲಸದಲ್ಲಿ ತೊಡಗಿಕೊಂಡಿದ್ದು ಅಲ್ಲಿನ ಸಂಚಾಲಕರಿಗೆ 760 ರೂಪಾಯಿಗಳನ್ನು ನೀಡಿ ಬಡವರ ಹಸಿವು ನೀಗಿಸಲು ನನ್ನ ಸಣ್ಣ ಕೊಡುಗೆ ಎಂದು ಅನಮ್ ಹೇಳಿದ್ದಾರೆ. ಪುಟಾಣಿ ಹೃದಯದ ಈ ಮಾನವೀಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.