ರಂಝಾನ್ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ಜಾತಿ,ಧರ್ಮ ಯಾವುದೇ ಆಗಿರಲಿ ಶ್ರೀಮಂತನಾಗಿರಲಿ,ಬಡವನಾಗಿರಲಿ ಅಥವಾ ಕೂಲಿ ಕಾರ್ಮಿಕರಾಗಲಿ, ಕುಬೇರನೇ ಆಗಲಿ ಹೊಸ ಉಡುಗೆ ತೊಡುವುದೆಂದರೆ ಎಲ್ಲರಿಗೂ ಇಷ್ಟ.
ಹೆಚ್ಚು ಹೆಚ್ಚು ಡ್ರೆಸ್ ಶಾಪಿಂಗ್ ಮಾಡುವವರು ಯಾರು ಎಂದು ಕೇಳಿದರೆ ಥಟ್ಟನೆ ಅದಕ್ಕೆ ಉತ್ತರ ಸಿಗುವುದು ಮುಸ್ಲಿಮರು. ಹೆಚ್ಚಿನ ಮುಸ್ಲಿಮರ ಹಣ ಡ್ರೆಸ್ ಶಾಪಿಂಗ್ನ ಹೆಸರಲ್ಲಿ ದುಂದು ವೆಚ್ಚವಾಗುತ್ತಿವೆ. ಪೆರ್ನಾಳ್ ಅಥವಾ ಎರಡು ಈದ್ ಬಂತೆಂದರೆ ತಿಂಗಳ ಹಿಂದೆಯೇ ಡ್ರೆಸ್, ಫ್ಯಾನ್ಸಿ ಐಟಂಗಳಿಗೆಂದು ಸಿದ್ದತೆ ನಡೆಸುತ್ತಾರೆ. ನಗರಗಳಲ್ಲಿ ಸುತ್ತಾಡುತ್ತಿರುತ್ತಾರೆ. ನಗರದ ಡ್ರೆಸ್,ಫ್ಯಾನ್ಸಿ ಅಂಗಡಿಗಳು, ಮಾಲ್ಗಳು ಬುರ್ಖಾದಾರಿಗಳಿಂದ ತುಂಬಿಕೊಂಡಿರುತ್ತವೆ
ಆದರೆ,ಈ ಬಾರಿಯ ಈದ್ ಅದಕ್ಕೆ ಭಿನ್ನವಾಗಿದೆ. ಶಾಪಿಂಗ್ ಪ್ರೀಯರಿಗೆ ಕೊರೋನ ದೊಡ್ಡ ಹೊಡೆತವನ್ನು ಕೊಟ್ಟಿದೆ. ಮನೆಯಿಂದ ಹೊರ ಬಾರದಂತೆ ಮಾಡಿಟ್ಟಿದೆ. ಹೇಗಾದರೂ ಮಾಡಿ ಈದ್ಗೆ ಹೊಸ ಡ್ರೆಸ್ ಖರೀದಿಸಲೇ ಬೇಕೆಂಬ ಪಟ್ಟು ಒಂದಡೆಯಾದರೆ,ಜನರ ಆರೋಗ್ಯದ ಹಿತ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿ ಕೊಡಬಾರದು ಎಂಬುದು ಸಾಮಾಜಿಕ ಕಾರ್ಯಕರ್ತರ ಮನವಿ,ಸ್ವಲ್ಪ ದಿನಗಳ ಮಟ್ಟಿಗೆ ಕರ್ಫ್ಯೂ ಸಡಿಲ ಗೊಳಿಸಲು ತೆರೆಮರೆಯಲ್ಲಿ ಡ್ರೆಸ್ ಉದ್ಯಮಿಗಳಿಂದ ರಾಜಕಾರಣಿಗಳ ಮೇಲೆ ಒತ್ತಡ,ಹಸ್ತಕ್ಷೇಪ. ಒಟ್ಟಾರೆ ಮಹಾಮಾರಿ ಕೊರೋನ ವೈರಸ್ ಜನಸಾಮಾನ್ಯರ ನೆಮ್ಮದಿಯೊಂದಿಗೆ ಚೆಲ್ಲಾಟವಾಡುತ್ತಿದೆ.
ಮೊದಲನೆಯದಾಗಿ ಈ ಉಡುಗೆ ತೊಡುಗೆಗಳ ಉತ್ಪನ್ನ,ಎಲ್ಲಿ ಮತ್ತು ಕೊರೋನ ಸೋಂಕಿತರ ಸಂಖ್ಯೆ ಅಲ್ಲಿ ಎಷ್ಟಿದೆ,ಮತ್ತು ಯಾಕಾಗಿ ದಿನ ನಿತ್ಯ ಕೊರೋನ ಸೋಂಕಿತರ ಸಂಖ್ಯೆ ಅಲ್ಲಿ ಹೆಚ್ಚಳವಾಗುತ್ತಿದೆ ಎಂಬುದರ ಬಗ್ಗೆ ತಿಳಿಯೋಣ.
ಕೊರೋನ ಎಂಬ ಮಹಾಮಾರಿ ಚೀನಾದ ವುಹಾನ್ನಿಂದ ತಪ್ಪಿಸಿಕೊಂಡು ಬಂದಿರುವುದೆಂದು ಜಗತ್ತಿಗೆ ಗೊತ್ತಿದೆ ಅದು ಇರಲಿ ಬಿಡಿ.
ಭಾರತದಲ್ಲಿ ಹೆಚ್ಚಾಗಿ ಕೊರೋನ ಸೋಂಕಿತರು ಇರುವ ಅಥವಾ ಕೊರೋನಾದಿಂದ ಸಾವನ್ನಪ್ಪಿದವರ ಪ್ರದೇಶಗಳ ಪಟ್ಟಿ ನೋಡುತ್ತಾ ಹೋದರೆ ನಮಗೆ ಕಾಣಸಿಗುವುದು ಮಹಾರಾಷ್ಟ್ರದ ಮುಂಬೈ,ದಾದರ್, ಉಲ್ಲಾಸ್ ನಗರ,ಹಂದೇರಿ,ಕಲ್ಬದೇವ್ ಮಾರ್ಕೆಟ್, ಮತ್ತು ಡೊಂಗ್ರಿ. ಗುಜರಾತಿನ ಆಹಮದಬಾದ್,ಸೂರತ್, ಆನಂದ್ ಮತ್ತು ಸಾರನ್ಪುರ್ ಕ್ಲೋತ್ ಮಾರ್ಕೆಟ್ (ಇಲ್ಲಿ ಮೋದಿಯ ಮುಖ್ಯಮಂತ್ರಿಯ ಅವಧಿಯಲ್ಲಿ ಹತ್ತು ಅಂತಸ್ತಿನ ಏಳು ಕಟ್ಟಡಗಳನ್ನು ಡ್ರೆಸ್ ಮಾರ್ಕೆಟಿಂಗ್ಗಾಗಿ ಮೋದಿ ಸರಕಾರ ಮಾಡಿಕೊಟ್ಟಿದೆ)ರಾಜಸ್ಥಾನದ ಬಲೋತ್ರ ಮತ್ತು ಬಿಳ್ವಾರ್. ಪಂಜಾಬ್ನ ಲುಧಿಯಾನ,ಪಶ್ಚಿಮ ಬಂಗಾಳದ ಕೊಲ್ಕತ್ತಾ,ದಿಲ್ಲಿಯ ಗಾಂಧಿ ಮಾರ್ಕೆಟ್ ತಮಿಳುನಾಡಿನ ಕೊಯಂಬತ್ತೂರು, ತಿರ್ಪುರು,ಈರೋಡ್,ತಿರುಚಿರಾಪಳ್ಳಿ, ಚೆನ್ನೈ,ಮತ್ತು ಸೇಲಂ ಡ್ರೆಸ್ ಮಾರ್ಕೆಟ್ ಆಂದ್ರ ಪ್ರದೇಶದ ಹೈದರಾಬಾದ್ ಮತ್ತು ನಲ್ಲೂರು ಕರ್ನಾಟಕದ ಬೆಂಗಳೂರು ಮತ್ತು ಬಳ್ಳಾರಿ ಮತ್ತು ಕೇರಳದ ಪಾಲಕ್ಕಾಡ್,ಕೊಚ್ಚಿ ಇಲ್ಲೆಲ್ಲ ಡ್ರೆಸ್ ಉತ್ಪಾದನೆಯ ಕಾರ್ಖಾನೆಗಳಿವೆ. ಚೀನಾ ಸರಕುಗಳು ತಲುಪುವ ಪ್ರಮುಖ ನಗರಗಳಿವು. ಮತ್ತು ವಿದೇಶಿ ವರ್ತಕರು ಇಲ್ಲಿಗೆ ದಿನ ನಿತ್ಯ ಬರುತ್ತಿರುತ್ತಾರೆ. ಆದ್ದರಿಂದ ಈ ರಾಜ್ಯ,ಪ್ರದೇಶಗಳಲ್ಲಿ ಕೊರೋನ ಸೋಂಕಿತರ ದಿನ ನಿತ್ಯ ಹೆಚ್ಚುತ್ತಾ ಇವೆ.
ಏಕೆಂದರೆ,ಚೀನಾದಿಂದ ಆಮಾದುಗೊಳ್ಳುವ ಡ್ರೆಸ್ ಫ್ಯಾನ್ಶಿ,ಚಪ್ಪಲಿ,ಶೂ ಇನ್ನಿತರ ರೆಡಿ ಮತ್ತು ಬಿಡಿಭಾಗಗಳು ಅಲ್ಲಿಗೆ ತಲುಪುತ್ತವೆ ಮತ್ತು ಅಲ್ಲಿರುವ ಕಾರ್ಖಾನೆಗಳಲ್ಲಿ ಸಿದ್ದಗೊಂಡು ದೇಶದ ಇತರ ಭಾಗಗಳಿಗೆ ಅಲ್ಲಿಂದ ಪೂರೈಕೆ ಮಾಡಲಾಗುತ್ತವೆ. ಅಲ್ಲಿರುವ ಕಾರ್ಖಾನೆಗಳಿಗೆ ಚೀನಾದಿಂದ ಕಳೆದ ನಾಲ್ಕೈದು ತಿಂಗಳುಗಳ ಹಿಂದೆಯೇ ಡ್ರೆಸ್ ಇನ್ನಿತರ ವಸ್ತುಗಳು ತಲುಪಿರುತ್ತವೆ. ಚೀನಾದಲ್ಲಿ 2019 ರ ಡಿಸೆಂಬರ್ 19 ರಂದು ಮೊದಲ ಕೊರೋನ ಪ್ರಕರಣ ಪತ್ತೆಯಾಗಿದೆ.
ಆದರೂ,ಚೀನಾದಿಂದ ಬೇಕಾಗುವ ಎಲ್ಲಾ ಸರಕುಗಳು ಅಲ್ಲಿ ಲಾಕ್ಡೌನ್ ಆಗುವವರೆಗೂ ಸಾರಾಸಗಟಾಗಿ ಭಾರತಕ್ಕೆ ಆಮಾದುಗೊಳ್ಳುತ್ತಿತ್ತು. ಚೀನಾದಿಂದ ಆಮದುಗೊಂಡ ಈ ಎಲ್ಲಾ ಸರಕುಗಳು ಅಲ್ಲಿನ ಕೊರೋನ ಸೋಂಕಿತರು ಸ್ಪರ್ಶಿಸಿರಬಹುದೆಂದು ಈ ಮೂಲಕ ನಮಗೆ ಗ್ರಹಿಸಬಹುದು. ಅದೇನಾದರೂ ನಾವು ಖರೀದಿಸಿದರೆ ಅದರಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಊಹಿಸಲಸಾಧ್ಯ.
ಭಾರತದಲ್ಲಿ ಕೊರೋನ ವ್ಯಾಪಕವಾಗಿ ಹರಡಲು ಚೀನಾದಿಂದ ಆಮದುಗೊಂಡ ಸರಕುಗಳು ಮತ್ತು ಗುಜರಾತಿನಲ್ಲಿ ಫೆಬ್ರವರಿ 24 ರಂದು ಮೋದಿ ಆಯೋಜಿಸಿದ “ನಮಸ್ತೆ ಟ್ರಂಪ್ ” ಕಾರ್ಯಕ್ರಮವೇ ಪ್ರಮುಖ ಕಾರಣಗಳು. ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಬಹಳಷ್ಟು ಅಮೆರಿಕನ್ನರು ಭಾಗವಹಿಸಿದ್ದರು. ಕೊರೋನಾದ ಬಗ್ಗೆ ರಾಹುಲ್ ಗಾಂಧಿ ಫೆಬ್ರವರಿ 12 ರಂದು ಎಚ್ಚರಿಕೆ ನೀಡಿದ್ದರು,ಆದರೆ ನಮ್ಮ ಪ್ರಧಾನಿ ಮೋದಿಗೆ ಟ್ರಂಪ್ ಆಗಮನ ಮತ್ತು ಮಧ್ಯಪ್ರದೇಶದಲ್ಲಿ ಸರಕಾರ ಪತನಮಾಡಿ ಬಿಜೆಪಿ ಸರಕಾರ ಕಟ್ಟುವುದೇ ಸಂಭ್ರಮಾವಾಗಿತ್ತು.
ಇದೆಲ್ಲಾ ಮುಗಿದ ಬಳಿಕ ತುಂಬ ತಡವಾಗಿ ಕೊರೋನ ವಿರುದ್ಧ ಕೇಂದ್ರ ಸರಕಾರ ಕಾರ್ಯಚರಣೆಗೆ ಇಳಿಯಿತು. ಅಷ್ಟೊತ್ತಿಗೆ ದೇಶದೆಲ್ಲೆಡೆ ಕೊರೋನ ವೈರಸ್ ಕಾಡ್ಗಿಚ್ವಿನಂತೆ ಹರಡಿಕೊಂಡಿತ್ತು.
ಸರಕಾರ ಲಾಕ್ಡೌನ್ ಸಡಿಲಗೊಳಿಸುವುದೇಕೆ.? ಇದು ಜನ ಸಾಮಾನ್ಯರನ್ನು ಸಾಮೂಹಿಕವಾಗಿ ಸಂಹಾರ ಮಾಡುವ ತಂತ್ರ. ಏಕೆಂದರೆ ದಿಲ್ಲಿ,ಮುಂಬೈ, ಗುಜರಾತ್, ಪಂಜಾಬ್,ರಾಜಸ್ಥಾನ ಆಂದ್ರಪ್ರದೇಶ,ತಮಿಳುನಾಡು ಮತ್ತು ಕರ್ನಾಟಕ,ಇಲ್ಲೆಲ್ಲ ಬೀಡು ಬಿಟ್ಟಿರುವ ಗುಜರಾತಿನ ಮಾರ್ವಾಡಿ,ಶರ್ಮಾ ಬನಿಯಾ ಅಗರ್ವಾಲ್ ಪಟಿಯಾ ಮುಂತಾದ ಕುಬೇರ ಉದ್ಯಮಿಗಳ ಗೋಡನ್ಗಳಲ್ಲಿ ಚೀನಾದಿಂದ ಆಮದುಗೊಂಡ ಕೋಟಿಗಟ್ಟಲೆ ಮೌಲ್ಯದ ಸರಕುಗಳು ಪೂರೈಕೆಯಾಗದೆ,ವ್ಯಾಪಾರ ಇಲ್ಲದೆ ಕೊಳೆಯುತ್ತಿವೆ.
ಈ ಉದ್ಯಮಿಗಳಿಗೆ ರಂಝಾನ್ ಒಂದು ತಿಂಗಳ ವ್ಯಾಪಾರ,ವಹಿವಾಟು ದೊಡ್ಡ ಮಟ್ಟದ ಲಾಭವನ್ನು ಕೊಡುತ್ತವೆ. ಇದನ್ನು ದೇಶದ ಇತರ ಭಾಗಗಳಿಗೆ ಪೂರೈಕೆ ಮಾಡಲು ಈ ಉದ್ಯಮಿಗಳು ಪ್ರಭಾವಿ ರಾಜಕಾರಣಿಗಳ ಭುಜ ತಟ್ಟಿ ಲಾಕ್ಡೌನ್ ಸಡಿಲಿಕೆ ಮಾಡಲು ಒತ್ತಡ ಹೇರುತ್ತಿದ್ದಾರೆ.
ಇದರ ಪರಿಣಾಮವಾಗಿ ಇನ್ನು ಕೆಲವೇ ದಿನಗಳಲ್ಲಿ ಲಾಕ್ಡೌನ್ ಸಡಿಲಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಸರಕಾರಕ್ಕೆ ಜನಸಾಮಾನ್ಯರ ಆರೋಗ್ಯದ ಹಿತಕ್ಕಿಂತ ಉದ್ಯಮಿಗಳ ವ್ಯಾಪಾರದ ಸುರಕ್ಷೆತೆ ಮುಖ್ಯವಾಗಿದೆ. ಇಲ್ಲಿ ಕೇವಲ ಡ್ರೆಸ್ ಖರೀದಿ ಮಾತ್ರವಲ್ಲ ಗೋಲ್ಡ್,ಡೈಮಂಡ್,ಮೆಹಂದಿ ಮತ್ತು ಮೇಕಪ್ ಸೆಟ್ ಮತ್ತು ಮಹಿಳೆಯರ ಚಪ್ಪಲಿ ಖರೀದಿ ಕೂಡ ಅಪಾಯಾಕಾರಿಯಾಗಿದೆ.
ಏಕೆಂದರೆ,ಭಾರತದ ಕೊರೋನಾದ ರಾಜಧಾನಿ ಮುಂಬೈಯ ಬಾಂದ್ರಾ,ಕುರ್ಲಾ,ಗುಜರಾತಿನ ಅಹಮದಾಬಾದ್ ಮತ್ತು ಸೂರತ್, ಇವುಗಳ ಉತ್ಪಾದನೆಯ ಹಾಗೂ ಪೂರೈಕೆಯ ಪ್ರಮುಖ ನಗರವಾಗಿವೆ.
ಆದ್ದರಿಂದ,ಸದ್ಯದ ಮಟ್ಟಿಗೆ ಅಗತ್ಯ ಆಹಾರ ವಸ್ತು ಬಿಟ್ಟು ಇನ್ಯಾವುದೇ ಸಾಮಾನುಗಳನ್ನು ಕೊಂಡುಕೊಳ್ಳದಿರುವುದು ಆರೋಗ್ಯ ಮತ್ತು ದೇಶದ ಹಿತಕ್ಕೆ ಒಳಿತಿನ ಕಾರ್ಯವಾಗಿದೆ. ಇಲ್ಲದಿದ್ದರೆ ಕೊರೋನ ಸೋಂಕು ನಮ್ಮ ಮನೆ ಬಾಗಿಲನ್ನು ಬಡಿಯುವುದರಲ್ಲಿ ಸಂದೇಹಬೇಡ. ಒಂದು ವೇಳೆ ಸರಕಾರ ಲಾಕ್ಡೌನ್ ಸಡಿಲಿಕೆ ಮಾಡಿ ಕೊಟ್ಟರೆ ದೇಶದೆಲ್ಲೆಡೆ ಜನ ದಟ್ಟನೆ ಹೆಚ್ಚಾಗಿ ಮೊನ್ನೆ ಬಳ್ಳಾರಿಯಲ್ಲಿ ನಡೆದ ಅದೇ ಅನುಭವ ಪ್ರತ್ಯಕ್ಷಗೊಳ್ಳಲಿವೆ.
ಕೊರೋನ ವ್ಯಾಪಕವಾಗಿ ಹರಡಿ ಸರಕಾರಕ್ಕೆ ನಿಯಂತ್ರಣ ಕಷ್ಟವಾಗಬಹುದು. ಇಷ್ಟು ದಿನಗಳ ಕಾಲ ಮಾಡಿದ ಮುಂಜಾಗ್ರತೆ,ಲಾಕ್ಡೌನ್ ಎಲ್ಲವೂ ವ್ಯರ್ಥವಾಗಬಹುದು. ಆದ್ದರಿಂದ ಈ ಮೂಲಕ ನಾನು ಜನಸಾಮಾನ್ಯರೊಂದಿಗೆ ತಿಳಿಸ ಬಯಸುದೇನಂದರೆ ಕೊರೋನಾದ ಜತೆಗೆ ಸರಕಾರ ಮಾಡಲು ಹೊರಟಿರುವ ಲಾಕ್ಡೌನ್ ಸಡಿಲಿಕೆಯ ವಿರುದ್ಧ ಹೋರಾಟ ನಡೆಸಬೇಕು. ಈ ಲಾಕ್ಡೌನ್ ಸಡಿಲಿಕೆ ಗುಜರಾತಿ ಉದ್ಯಮಿಗಳ ತಿಜೋರಿ ತುಂಬಿಸುವ ಮೋಸದ ತಂತ್ರವಾಗಿದೆ.
ಮುಸ್ಲಿಮರು ಯಾವ ಕಾರಣಕ್ಕೂ ಈ ಬಾರಿ ಈದ್ ಹಬ್ಬಕ್ಕೆ ಡ್ರೆಸ್ ಖರೀದಿಸಲೇ ಬಾರದು. ವ್ಯಾಪಾರದಲ್ಲಿ ಜಾತಿ,ಧರ್ಮ ನೋಡುವವರಿಗೆ ಪಾಠ ಕಲಿಸಲು ಇದು ಸಕಾಲ.
✍️ಇಸ್ಹಾಕ್ ಸಿ.ಐ.ಫಜೀರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.