ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕೊರೊನಾ ಸೋಂಕು ನಿಯಂತ್ರಣ ಮಾಡಲು ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಮದ್ಯದಂಗಡಿಗಳು ಸಹಿತ ವ್ಯಾಪಾರ-ವಹಿವಾಟು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದರಿಂದ ಜನರಲ್ಲಿ ಸಂಭ್ರಮ ಮನೆ ಮಾಡಿತು.
ಹೌದು ಸುಮಾರು ಒಂದು ತಿಂಗಳಿಂದ ಮುಚ್ಚಿಲ್ಪಟ್ಟ ಮದ್ಯದಂಗಡಿಗಳು ಇಂದಿನಿಂದ ಕಾರ್ಯಾರಂಭಗೊಳ್ಳುತ್ತಿವೆ ಎಂದು ಮಾಹಿತಿಯನ್ನು ಅರಿತ ಮದ್ಯಪ್ರೀಯರು ಬೆಳಿಗ್ಗೆಯಿಂದಲೇ ಮದ್ಯದಂಗಡಿಗಳ ಬಳಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿಯಿಟ್ಟು ಸಾಲಾಗಿ ನಿಂತು ಮದ್ಯವನ್ನು ಖರೀದಿಸಿದರು ಮತ್ತೊಂದಡೆ ಅಂಗಡಿ-ಮುಂಗಟ್ಟುಗಳು ಸಹ ತೆರೆದು ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದಿತ್ತು.
ಮದ್ಯಪ್ರೀಯರಿಗೆ ಆನಂದವೋ ಆನಂದ: ಕಳೆದ ಒಂದು ತಿಂಗಳಿಂದ ಮದ್ಯದಂಗಡಿಗಳತ್ತ ಸುಳಿಯದೆ ಮದ್ಯಕ್ಕಾಗಿ ಕಾದುಕುಳಿತ್ತಿದ್ದ ಮದ್ಯಪ್ರೀಯರಿಗೆ ಇಂದು ಒಂದು ರೀತಿಯ ಹಬ್ಬದ ವಾತಾವರಣ ಕಂಡುಬಂದಿತ್ತು ಕೆಲವರು ಮದ್ಯದ ಅಂಗಡಿಗಳಿಗೆ ಪೂಜೆ ಸಲ್ಲಿಸಿದರು ಎನ್ನಲಾಗಿದೆ ವಿಶೇಷ ಏನೆಂದರೇ ಮಹಿಳೆಯರು ಸಹ ಮದ್ಯವನ್ನು ಖರೀದಿಸಿ ಗಮನಸೆಳೆದಿದ್ದಾರೆ ಸಾಲಾಗಿ ನಿಂತು ಮದ್ಯ ಖರೀದಿಸಲು ಕೆಲವಡೆ ನಿಯಂತ್ರಣ ಮಾಡಲು ಪ್ರಯತ್ನ ಮಾಡಿದರು ಸಹ ಮದ್ಯಪ್ರೀಯರು ಮದ್ಯ ಖರೀದಿ ಮಾಡುವ ಭರದಲ್ಲಿ ಸಾಮಾಜಿಕ ಅಂತರ ಎಲ್ಲದಕ್ಕೂ ತಿಲಾಂಜಲಿಯಿಟ್ಟಿದ್ದಾರೆ.
ಶಿಡ್ಲಘಟ್ಟ ನಗರದಲ್ಲಿ 6 ಹಾಗೂ ಗ್ರಾಮೀಣ ಪ್ರದೇಶದಲ್ಲಿ 9 ವೈನ್ಶಾಪ್ಗಳು ಹಾಗೂ ತಾಲೂಕಿನ ಅಬ್ಲೂಡು,ಗಂಜಿಗುಂಟೆ,ಚೌಡಸಂದ್ರ,ತರಬಹಳ್ಳಿ ಗ್ರಾಮಗಳಲ್ಲಿರುವ ಎಂ.ಎಸ್.ಐ.ಎಲ್ಗಳನ್ನು ಇಂದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು ಆದರೇ ಕೆಲಕಡೆ ಅಂತರ ಕಾಯ್ದುಕೊಂಡಿಲ್ಲ ಎಂಬ ದೂರು ಬಂದಿದೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಅಬಕಾರಿ ಇಲಾಖೆಯ ನಿರೀಕ್ಷಕ ಲಂಕೆ ಹನುಮಯ್ಯ ತಿಳಿಸಿದರು ಮದ್ಯದಂಗಡಿಗಳನ್ನು ಹೊರತುಪಡಿಸಿ ನಗರದಲ್ಲಿರುವ 3 ಹಾಗೂ ಗ್ರಾಮೀಣ ಪ್ರದೇಶದಲ್ಲಿ 5 ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶ ಕಲ್ಪಿಸಿಲ್ಲವೆಂದು ಸ್ಪಷ್ಟಪಡಿಸಿದರು.
ಪೋಲಿಸರು ನಿರಾಳ: ಸಾಮಾನ್ಯವಾಗಿ ಲಾಕ್ಡೌನ್ ಹಿನ್ನೆಲೆಯಲ್ಲಿ ನಾಗರಿಕರು ಹೊರಬರಲು ಬರಬಾರದೆಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದ ಪೋಲಿಸರು ಇಂದು ಆರಾಮಾಗಿದ್ದರು ಏಕೆಂದರೇ ಸರ್ಕಾರನೇ ಲಾಕ್ಡೌನ್ ಸಡಿಲ ಮಾಡಿದ್ದರಿಂದ ಯಾರು ಎಲ್ಲಿಗೆ ಹೋದರು ಸಹ ಮುಕ್ತ ಅವಕಾಶ ಕಲ್ಪಿಸಿದರು ನಾಗರಿಕರು ಸಹ ಬಹಳ ದಿನಗಳಿಂದ ಮನೆಯಲ್ಲಿ ಕುಳಿತು ಕುಳಿತ ಬೇಸರಗೊಂಡು ಇಂದು ಮಾರುಕಟ್ಟೆ ಮತ್ತಿತರರ ಪ್ರದೇಶಗಳಿಗೆ ತೆರಳಿ ಸ್ವಾತಂತ್ರ್ಯ ಸಿಕ್ಕಿದೆಯೆಂಬ ಸಂಭ್ರಮದಲ್ಲಿ ತೇಲಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಡುಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಂತೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮಾಡಲು ಹಗಲಿರುಳು ಶ್ರಮಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಾತ್ರ ಆತಂಕ ಮನೆ ಮಾಡಿದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಸೋಂಕಿತರು ಕಂಡುಬಂದರು ಶಿಡ್ಲಘಟ್ಟ ತಾಲೂಕಿನಲ್ಲಿ ಮಾತ್ರ ಯಾವುದೇ ಪ್ರಕರಣ ಕಂಡುಬಂದಿರಲಿಲ್ಲ ಆದರೇ ಲಾಕ್ಡೌನ್ ಸಡಿಲ ಮಾಡಿದ ಫಲದಿಂದಾಗಿ ಯಾವುದಾದರೂ ಪಾಸಿಟೀವ್ ಬಂದರೇ ಏನು ಮಾಡುವುದು ಎಂದು ಚಿಂತೆಯಲ್ಲಿ ತೊಡಗಿದ್ದಾರೆ ಇನ್ನು ಹಲವರು ರಾಜ್ಯ ಸರ್ಕಾರ ಲಾಭಕ್ಕಾಗಿ ಮದ್ಯದಂಗಡಿಗಳನ್ನು ತೆರೆದು ದೊಡ್ಡ ತಪ್ಪು ಮಾಡಿದೆ ಕೊರೊನಾ ಸೋಂಕಿತರು ಹೆಚ್ಚಾದರೆ ಯಾರು ಹೊಣೆಯೆಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸಾರಿಗೆ ಹಾಗೂ ಖಾಸಗಿ ಬಸ್ಗಳ ಸಂಚಾರ ಹೊರತುಪಡಿಸಿ ಬೆಳಿಗ್ಗೆಯಿಂದ ಎಲ್ಲಾ ರೀತಿಯ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿತ್ತು ಸಂಜೆ 7 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವ್ಯಾಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು ಎಂದು ಸಿಪಿಐ ಸುರೇಶ್ ತಿಳಿಸಿದರು.
ವರದಿ: ಎಂ.ಎ.ತಮೀಮ್ ಪಾಷ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.