ವಾರಣಾಸಿ (ವಿಶ್ವ ಕನ್ನಡಿಗ ನ್ಯೂಸ್) : ವಾರಣಾಸಿ ಜಿಲ್ಲೆಯ ಹರ್ಪಲ್ ಪುರದಲ್ಲಿ ಪತ್ರಕರ್ತೆ ರಿಜ್ವಾನಾ ತಬಸ್ಸುಮ್ ನೇಣು ಬಿಗಿದುಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡನನ್ನು ಬಂಧಿಸಲಾಗಿದೆ.
ರಿಜ್ವಾನಾ ತಬಸ್ಸುಮ್ ಡೇಟ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಸಮಾಜವಾದಿ ಪಕ್ಷದ ಮುಖಂಡ “ಶಮೀಮ್ ನೋಮಾನಿಯೇ ಕಾರಣ” ಎಂದು ಬರೆದಿದ್ದಾಳೆ.
ರಿಜ್ವಾನಾ ಅವರ ಮರಣೋತ್ತರ ವರದಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ರಿಜ್ವಾನಾ ಅವರ ತಂದೆಯ ದೂರಿನ ಮೇರೆಗೆ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಲೋಹ್ತಾ ನಿವಾಸಿ ನೊಮಾನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾರಣಾಸಿ ಸದರ್ ಸಿಒ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.