ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್) ಸೀಮಂತದ ಸಂಭ್ರಮದಲ್ಲಿದ್ದ ಗರ್ಭಿಣಿಯನ್ನು ಆಕೆಯ ಭಾವ( ಪತಿಯ ಹಿರಿಯ ಸಹೋದರ) ವೈಯಕ್ತಿಕ ದ್ವೇಷದಿಂದ ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಆನೆಮಡುಗು ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಆನೆಮಡುಗು ಗ್ರಾಮದ ನಾಗಜ್ಯೋತಿ(24) ಕೋಂ ನವೀನ್ಚಂದ್ರ ಕೊಲೆಗೀಡಾದ ನತದೃಷ್ಠೆ ಗರ್ಭಿಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರೀಶ್ಬಾಬು ಎಂಬಾತನನ್ನು ದಿಬ್ಬೂರಹಳ್ಳಿ ಪೋಲಿಸರು ಬಂಧಿಸಿದ್ದಾರೆ.
ಆನೆಮಡುಗು ಗ್ರಾಮದ ನವೀನ್ಚಂದ್ರ ಮತ್ತು ನಾಗಜ್ಯೋತಿ ಎಂಬುವರಿಗೆ ಕಳೆದ 7 ವರ್ಷಗಳ ಹಿಂದೆ ವಿವಾಹವಾಗಿತ್ತು ಎನ್ನಲಾಗಿದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ನವೀನ್ಚಂದ್ರನ ಹಿರಿಯ ಸಹೋದರ ಹರೀಶ್ಬಾಬು ಸಣ್ಣಪುಟ್ಟ ವಿಷಯಗಳಿಗೆ ನಾಗಜ್ಯೋತಿಯೊಂದಿಗೆ ಜಗಳ ಮಾಡುತ್ತಿದ್ದ ಎಂದು ಹೇಳಲಾಗಿದೆ 8 ತಿಂಗಳ ಗರ್ಭಿಣಿಯಾಗಿದ್ದ ನಾಗಜ್ಯೋತಿಯೊಂದಿಗೆ ಆರೋಪಿ ಹರೀಶ್ಬಾಬು ಇಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಜಗಳ ತೆಗೆದು ಮಚ್ಚಿನಿಂದ ತಲೆ ಕೊಚ್ಚಿ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿದ್ದ ನಾಗಜ್ಯೋತಿಯನ್ನು ಆಕೆಯ ತಾಯಿ ಮತ್ತು ನೆರೆ ಹೊರೆಯವರು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಮಾಡಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ ಘಟನಾ ಸ್ಥಳಕ್ಕೆ ಸಿಪಿಐ ಸುರೇಶ್,ದಿಬ್ಬೂರಹಳ್ಳಿ ಪೋಲಿಸ್ಠಾಣೆಯ ಪಿಎಸ್ಐ ನಾರಾಯಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆಗೀಡಾದ ನಾಗಜ್ಯೋತಿಯ ತಂದೆ ನಾಗರಾಜಪ್ಪ ದೂರು ನೀಡಿದ ಹಿನ್ನೆಲೆಯಲ್ಲಿ ದಿಬ್ಬೂರಹಳ್ಳಿ ಪೋಲಿಸ್ ಠಾಣೆ ಪೋಲಿಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತಳ ಶವ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವವನ್ನು ಸಂಬಂಧಿಕರ ವಶಕ್ಕೆ ನೀಡಲಾಗುವುದೆಂದು ಸಿಪಿಐ ಸುರೇಶ್ ವಿಕೆ ನ್ಯೋಸ್ ಪ್ರತಿನಿಧಿಗೆ ತಿಳಿಸಿದ್ದಾರೆ.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.