ಸಾರ್ವಜನಿಕವಾಗಿ ಸಚಿವರ ಕಾಲಿಗೆ ಬಿದ್ದ ತಹಶೀಲ್ದಾರ ಹಾಗೂ ರೆವೆನ್ಯೂ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ SDPI ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಶಿವಮೊಗ್ಗದ ಮಾನ್ಯ ಜಿಲ್ಲಾಧಿಕಾರಿಗೆ ಮನವಿ..
(www.vknews.com) : ಮೇ 01,2020 ರಂದು ಕೋರೋನ ಹಿನ್ನಲೆಯಲ್ಲಿ ಲಾಕ್ ಡೌನ್ ಆದವರಿಗೆ ದಿನಸಿ ಕಿಟ್ ಕೊಡಲು ನಗರದ ಕೆ. ಆರ್. ಪುರಂ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಕೆ. ಎಸ್. ಈಶ್ವರಪ್ಪರವರ ಕಾಲಿಗೆ ಸಾರ್ವಜನಿಕವಾಗಿ ಅಡ್ಡ ಬೀಳುವುದರ ಮೂಲಕ ತಹಶೀಲ್ದಾರ ಶ್ರೀ ನಾಗರಾಜ್ ಹಾಗೂ ರೆವೆನ್ಯೂ ಇನ್ಸ್ ಪೆಕ್ಟರ್ ಶ್ರೀ ವಿಜಯ್ ಕುಮಾರ್ ರವರು ಜನರಿಗೆ ಕೆಟ್ಟ ಸಂದೇಶವನ್ನು ರವಾನಿಸಿದ್ದಾರೆ.
ತಹಶೀಲ್ದಾರರು ಹಾಗೂ ರೆವೆನ್ಯೂ ಅಧಿಕಾರಿಗಳು ಉನ್ನತ ಹುದ್ದೆಯ ಸ್ಥಾನಗಳಾಗಿದ್ದು ಸಾರ್ವಜನಿಕ ಬೊಕ್ಕಸದಿಂದ ಇವರಿಗೆ ವೇತನ ನೀಡಲಾಗುತ್ತದೆ. ಸರ್ವ ಜನರ ಸೇವೆಗಾಗಿ ಆರಿಸಲ್ಪಡುವ ಇವರು ಯಾವುದೇ ಪಕ್ಷದ ಅಥವಾ ಯಾವುದೇ ರಾಜಕೀಯ ನಾಯಕರುಗಳ ಗುಲಾಮರಾಗಲು ಸಾಧ್ಯವಿಲ್ಲ. ಆದರೆ ತಹಶೀಲ್ದಾರ ನಾಗರಾಜ್ ಹಾಗೂ ರೆವೆನ್ಯೂ ಅಧಿಕಾರಿ ವಿಜಯ್ ಕುಮಾರ್ ರವರು ಸಾರ್ವಜನಿಕವಾಗಿ ಸಚಿವರ ಕಾಲಿಗೆ ಬೀಳುವ ಮೂಲಕ ತಮ್ಮ ಸ್ವಾಮಿನಿಷ್ಠೆ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಸಾರ್ವಜನಿಕವಾಗಿಯೇ ಇಂತಹ ಕೆಳಮಟ್ಟದ ಪ್ರವರ್ತಿ ಮಾಡಿದ ಅಧಿಕಾರಿಗಳಿಂದ ಸಾಮಾಜಿಕ ನ್ಯಾಯ ಕಾಪಾಡಲು ಸಾಧ್ಯವೇ? ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ. ಆದುದರಿಂದ ಸಾರ್ವಜನಿಕವಾಗಿ ಸಚಿವರ ಕಾಲಿಗೆ ಬಿದ್ದು ಅಭಯ ಯಾಚಿಸುವ ಗತಿಗೇಡು ಬಂದಿರುವ ಈ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿಯು ಈ ಮೂಲಕ ಮಾನ್ಯ ಜಿಲ್ಲಾಧಿಕಾರಿಗೆ ಆಗ್ರಹಿಸುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.