(www.vknews.com) : ನೀವೆಲ್ಲರು ನಿನ್ನೆ ಮೊನ್ನೆ ಹೆಂಡ ತೆಗೆದುಕೊಳ್ಳಲು ಸಾಲು ಸಾಲಾಗಿ ನಿಂತಿದ್ದ ಜನರನ್ನು ನೋಡಿರಬಹುದು. ಚಿನ್ನ ಹಂಚುತ್ತಿದ್ದೇವೆ ಬನ್ನಿ ಎಂದು ಕರೆದಿದ್ದರೂ ಸಹ ಬಹುಶಃ ಇಂಥ ಜನ ಸಂದಣಿ ಸೇರಲು ಸಾಧ್ಯವಿರಲಿಲ್ಲ ಎಂದು ಭಾಸವಾಗುತ್ತದೆ. ಕೆಲವು ಕಡೆಯಂತೂ ನೂಕುನಗ್ಗಲಲ್ಲಿ ಜಗಳಗಳೇ ನಡೆದು ಹೋದವು. ” ಸೋಷಿಯಲ್ ಡಿಸ್ಟೆಂಸಿಂಗ್ ” ಎನ್ನುವ ಪದವೇ ಮರೆತು ಹೋಗಿದ್ದರು. ಹೆಂಡಕ್ಕೆ ಜನಜಂಗುಳಿ ಹೀಗೆ ಸೇರಿದರೆ ಮತ್ತೊಂದು ಕಡೆ ತಮ್ಮ ತಮ್ಮ ಊರುಗಳಿಗೆ ತೆರೆಳಲು ಜನಸಮುದ್ರವೇ ತುದಿಗಾಲಲ್ಲಿ ನಿಂತಿತ್ತು. ಬಸ್ ನಿಲ್ದಾಣಗಳು ಜನಜಾತ್ರೆಯಿಂದ ತುಂಬಿ ತುಳುಕುತ್ತಿತ್ತು. ಸರ್ಕಾರ ಕಾನೂನನ್ನು ಸಡಿಲಗೊಳಿಸಿದ್ದೇ ತಡ ಕರೋನ ಮಹಾಮಾರಿ ಸಹ ಭಯಪಡಬೇಕು ಆ ಮಾದರಿಯಲ್ಲಿ ಜನ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇನ್ನೂ ಕರೋನ ಹೋಗಿಲ್ಲ ಆದರೆ ಜನ ತಮ್ಮ ಬೇಜವಾಬ್ದಾರಿ ತನ ಬಿಟ್ಟಿಲ್ಲ. ಇಷ್ಟೇ ದಿನಗಳನ್ನು ಕಳೆದುಬಿಟ್ಟೆವು. ಇನ್ನು ಎರಡು ವಾರ ಕಳೆದು ಬಿಟ್ಟಿದ್ದಿದ್ದರೆ ಏನು ಕಳೆದುಹೋಗೋದು? ಯಾರೋ ಮಾಡುವ ತಪ್ಪಿಗೆ ಎಲ್ಲರು ಶಿಕ್ಷೆ ಅನುಭವಿಸಬೇಕೇ ? ಮನೆಯಲ್ಲಿಯೇ ಇರಲು ಯಾರಿಗೆ ತಾನೇ ಇಷ್ಟ. ಧಿಡೀರನೆ ಬಂದಿ ಒದಗಿದ ಸಂಕಷ್ಟ. ಈ ದಿನಗಳೂ ಇರುವುದಿಲ್ಲ . ಆದರೆ ಸಾಮಾಜಿಕ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಬಹಳ ಮುಖ್ಯ.
ಲಾಕ್ ಡೌನ್ ಸಡಿಲ ಆಗಿದಾಕ್ಷಣ ಬಡವರು ಶ್ರೀಮಂತರಾಗಿ ಹೋಗಲ್ಲ. ಎಷ್ಟೋ ಕಂಪನಿಗಳು ಮುಚ್ಚಿ ಹೋಗಿವೆ. ಬ್ಯಾಂಕುಗಳಿಂದ ಸಾಲ ಪಡೆದಿರುವವರು ಇ ಎಂ ಐ ಕಂತುಗಳನ್ನು ಕಟ್ಟಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಎರಡು ಹೊತ್ತು ಅಕ್ಕಿ ಪಡೆಯಲು ಜನ ಸಾಲು ಸಾಲಾಗಿ ಇನ್ನೂ ನಿಂತಿರುವುದನ್ನು ನೋಡುತ್ತಿದ್ದೇವೆ. ದಾನ ಮಾಡುವವರು ಬಡವರ ಕಷ್ಟ ಅರಿತು ದಾನಗಳನ್ನು ಇನ್ನೂ ಮುಂದುವರೆಸುತ್ತಿದ್ದಾರೆ. ಇಂತಹ ಕಷ್ಟಕರ ಗಂಭೀರ ಸಂದರ್ಭದಲ್ಲಿ ನಮ್ಮ ವರ್ತನೆ ಹೇಗಿರಬೇಕು ? ದೀಪಿಕಾ ಪಡುಕೋಣೆ ಮನೆಯಲ್ಲಿ ಚಾಕ್ಲೇಟ್ ಕೇಕು ಮಾಡಿದ್ದೇ ತಡ , ಹೆಂಗಸರು ನಾವುಗಳು ಸಹ ಕಡಿಮೆಯಿಲ್ಲ ಅಂತ ಬೇರೆಯವರ ಅಟೆಂಷನ್ ಸೀಕ್ ಮಾಡಲು ವಿಧ ವಿಧವಾದ ತಿಂಡಿಗಳನ್ನು ಮಾಡಿ ತಮ್ಮ ವಾಟ್ಸ್ ಆಪ್ ಸ್ಟೇಟಸ್ ಗಳಲ್ಲಿ ಹಾಕಿ ಕೊಳ್ಳುತ್ತಿದ್ದಾರೆ. ನಾನು ಮೂರು ರೀತಿಯ ಚಿಕನ್ ಮಾಡಿದೆ. ನಾನು ಬಿರಿಯಾನಿ ಮಾಡಿದೆ. ಹೋಳಿಗೆ ಮಾಡಿದೆ. ಪೈಸಾ ಮಾಡಿದೆ. ಒಂದಾ ಎರಡಾ – ಪ್ರತಿ ದಿನ ಅವರ ತಿಂಡಿಗಳ ಲಿಸ್ಟ್ ಹೆಚ್ಚಾಗುತ್ತಿದೆ ಹೊರತು ಮುಗಿಯುತ್ತಿಲ್ಲ. ಇದೆಂಥಾ ಹುಚ್ಚು ಕ್ರೇಜ್. ನಿಮ್ಮ ಸ್ಟೇಟಸ್ ಯಾರು ಯಾರು ನೋಡುತ್ತಾರೆ ಅಂತ ನಿಮಗೆ ಗೊತ್ತಾ ?
ನಿಮ್ಮ ಗ್ರೂಪ್ ನಲ್ಲಿರೋ ಪ್ಲಮ್ ಬರ್ , ವಾಚ್ ಮೆನ್ , ಮನೆಗೆಲಸದವಳು , ತರಕಾರಿಯವಳು , ಒಟ್ಟಾರೆ ಹೇಳುವುದಾದರೆ ಮಧ್ಯಮ ವರ್ಗದ ಜನ ವೀಕ್ಷಿಸುತ್ತಾರೆ. ಲಾಕ್ ಡೌನ್ ತರುವಾಯ ಅವರ ಬಳಿ ತಿನ್ನಲು ಸರಿಯಾದ ಆಹಾರ ಧಾನ್ಯಗಳಿಲ್ಲ , ಮೀನು ಮಾಂಸ ಮೊಟ್ಟೆಗಳಿಲ್ಲ , ರುಚಿರುಚಿಯಾದ ಮೃಷ್ಠಾನ್ನ ಭೋಜನಗಳನ್ನು ತಯಾರು ಮಾಡುವ ಸಾಮರ್ಥ್ಯವಿಲ್ಲ . ಅಂಥದರಲ್ಲಿ ನಿಮ್ಮ ವಿವೇಕ ಎಲ್ಲಿ ಕಳೆದು ಹೋಗಿದೆ. ನೀವು ಹಾಕುವ ಸ್ಟೇಟಸ್ ತಿಂಡಿಗಳು ಬೇರೆಯವರ ಮನಸ್ಸಿಗೆ ನೋವು ಮಾಡುವುದುಂಟು. ಅವರ ಮನಸ್ಸು ಒಳಗೊಳಗೇ ಕೊರಗುತ್ತದೆ. ಅದು ಒಳ್ಳೆಯ ಸಂಗತಿಯಲ್ಲ. ಅದೇ ಸ್ಥಿತಿ ನಾಳೆ ನಿಮಗಾದರೆ …! ಅದಕ್ಕೆ ಅಂತಹ ಕ್ರೇಜ್ ಬಿಟ್ಟು ಬಿಡಿ. ಅದೇ ಒಳ್ಳೆ ತಿಂಡಿಗಳನ್ನು ಮಾಡಿ ನಿರಾಶ್ರಿತರಿಗೆ ಹಂಚಿ. ನಿಮ್ಮ ಸುಖ ಸಂಪತ್ತಿನಲ್ಲಿ ಬೇರೆಯವರಿಗೂ ಭಾಗಿಯಾಗಿಸಿ ಪುಣ್ಯ ಕಟ್ಟಿಕೊಳ್ಳಿ . ಬಾಯಿಯಲ್ಲಿ ನೀರು ತರಿಸುವಂತಹ ತಿಂಡಿ ತಿನಿಸುಗಳ ಸ್ಟೇಟಸ್ ಹಾಕುವುದನ್ನು ಕೆಲವು ದಿನವಾದರೂ ನಿಲ್ಲಿಸಿ .
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.