ಮಾಲೂರು (www.vknews.com) : ವಿಶ್ವಮಾನವ ಕುವೆಂಪು ಫೌಂಡೇಶನ್ ಹಾಗೂ ಹ್ಯುಮಾನಿಟಿ ಟೀಮ್ ಸಹಯೋಗದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳಿಗೆ ಬ್ರೆಡ್ ವಿತರಿಸುವ ಸೇವಾ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಲೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವಸಂತ್ ಕುಮಾರ್ ರವರು ಮಾತನಾಡುತ್ತಾ ವಿಕೆಫ್ ಬಹುಮುಖ್ಯವಾಗಿ ಆಪತ್ತಿನಲ್ಲಿರುವ ಜೀವಕ್ಕೆ ರಕ್ತದಾನದ ಮೂಲಕ ಸಂಜಿವೀನಿಯಾಗಿ ಸೇವೆ ಮಾಡಿ ಜೀವ ಉಳಿಸುವ ಕಾರ್ಯ ಮಾಡುವುದು ಒಂದಾದರೆ ಲಾಕ್ ಡೌನ್ ಆದ ದಿನದಿಂದ ಇಲ್ಲಿಯವರೆಗೂ ಪ್ರತಿದಿನ ನಿರಂತರವಾಗಿ ಹಸಿದವರಿಗೆ, ರೋಗಿಗಳಿಗೆ ಊಟ ನೀಡಿ ಹಸಿವು ನಿಗಿಸುವ ಕಾರ್ಯ ಮಾಡಿದ ತಂಡದವರಿಗೆ ಪ್ರಶಂಸೆ ವ್ಯಕ್ತಪಡಿಸಿ,ವಿಕೆಎಫ್ ಟೀಮ್ ಸೇವೆ ನಿರಂತರವಾಗಿ ಹೀಗೆ ಮುಂದುವರೆಯಲಿ, ಸಮಾಜಮುಖಿ ಸೇವೆ ಸದಾ ನಡೆಯಲಿ ಇಂತಹ ಸೇವೆಗೆ ನಾವು ನಿಮ್ಮೊಂದಿಗೆ ಇರುವೆವು ಎಂದರು..
ವಿಕೆಎಫ್ ಜಿಲ್ಲಾ ಗೌರವ ಅಧ್ಯಕ್ಷರಾದ ಮಾ.ವೆ.ಪ್ರಕಾಶ್ ರವರು ಮಾತನಾಡಿ ಬಡವರಿಗೆ, ಗುಡಿಸಲುವಾಸಿಗಳಿಗೆ, ಊಟ ನೀಡಿ ಹಸಿವು ನಿಗಿಸುವ ಅನ್ನದಾಸೋಹದ ಕಾರ್ಯವನ್ನು ಸತತವಾಗಿ 38 ದಿನ ಮಾಡುವ ಮೂಲಕ ಉತ್ತಮ ಸೇವೆ ಮಾಡಿದ ಟೀಮ್ ಗೆ ಧನ್ಯವಾದಗಳು ತಿಳಿಸಿದರು
ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ ವಿಕೆ ಎಫ್ ನ ರಕ್ತದಾನ, ನೇತ್ರದಾನ, ಸಮಾಜ ಸೇವೆ, ಹಾಗೂ ಅನ್ನದಾಸೋಹದ ಸೇವೆಗೆ ಸಹಕಾರ ನೀಡಿ ರಾಜ್ಯದ ಉದ್ದಗಲಕ್ಕೂ ಹಸಿದವರಿಗೆ ಊಟ ನೀಡಿ ಹಸಿವು ನಿಗಿಸುವ ಕಾರ್ಯಕ್ಕೆ ಕೈ ಜೋಡಿಸುತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯ ಮಾಡಲಾಗುತ್ತೆ ನಿಮ್ಮ ಸಹಕಾರ ಅತ್ಯಗತ್ಯ ಎಂದರು. ಆಸ್ಪತ್ರೆಯಲ್ಲಿರುವ ಸರಿಸುಮಾರು 250 ಜನ ಬಡ ರೋಗಿಗಳಿಗೆ ಬ್ರೆಡ್ ವಿತರಣೆ ಮಾಡಲಾಯಿತು.
ಸೇವೆಯಲ್ಲಿ ವಿಕೆಫ್ ರಾಜ್ಯ ಅಧ್ಯಕ್ಷ ಲಕ್ಕೂರು ನಾಗರಾಜ್, ಜಿಲ್ಲಾ ಗೌರವ ಅಧ್ಯಕ್ಷ ಮಾ.ವೆ.ಪ್ರಕಾಶ್, ಆಡಳಿತ ವೈದ್ಯಾಧಿಕಾರಿಗಳಾದ ಡಾ.ವಂಸತ್ ಕುಮಾರ್, ಡಾ.ಹರೀಶ್, ರವಿ, ರಮೇಶ್, ರಾಜ್ಯ ಸಂಚಾಲಕ ದೊಡ್ದಕಲ್ಲಹಳ್ಳಿ ಮಂಜುನಾಥ್, ತಾನೀಶ್.ಎಂ ಇತರರು ಹಾಜರಿದ್ದರು.
ವರದಿ : ನಯನ್ ಮಹೇಶ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.