ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : COVID-19 ನಿಂದಾಗಿ ನಮ್ಮ ದೇಶವೇ ಲಾಕ್ ಡೌನ್ ನಲ್ಲಿ ದಿನ ದೂಡುತ್ತಿದೆ. ಮುಸ್ಲಿಂ ಸಮುದಾಯ ಸರಕಾರದೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮಸೀದಿಗಳಲ್ಲಿ ಆರಾಧನೆಗಳನ್ನು ನಿಲ್ಲಿಸಲಾಗಿದೆ. ಪವಿತ್ರ ರಂಜ್ಹಾನ್ ನ್ನು ಸರಳವಾಗಿ ಆಚರಿಸಲಾಗುತ್ತಿದೆ. ಶುಕ್ರವಾರದ ಪ್ರಾರ್ಥನೆಯನ್ನೂ ನಾವು ನಿರ್ವಹಿಸದೆ ಕೋವಿಡ್-19 ರ ವಿರುದ್ಧ ಹೋರಾಡುತ್ತಿದ್ದೇವೆ.
ಹೀಗಿರುವಾಗ ರಂಜ್ಹಾನ್ ಪ್ರಯುಕ್ತ ಬಟ್ಟೆ ಅಂಗಡಿಗಳನ್ನು ತೆರೆಸುವ ಯೋಜನೆಯನ್ನು ಜಿಲ್ಲಾಡಳಿತ ಮುಂದಾಗಿದೆ ಎಂಬ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದರಿಂದಾಗಿ ಅನಾಹುತಗಳು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದ್ದು, ಮುಸ್ಲಿಂ ಸಮಾಜ ಈ ಕುರಿತು ಜಾಗೃತಿಗೊಳ್ಳಬೇಕಿದೆ. ಒಂದು ವೈರಸ್ ವಿರುದ್ಧದ ಹೋರಾಟಕ್ಕಾಗಿ ಮಸೀದಿಯಲ್ಲಿ ನಡೆಯಬೇಕಿದ್ದ ಆರಾಧನೆಯನ್ನೇ ನಿಲ್ಲಿಸಿ ತ್ಯಾಗ ಮಾಡಿದ ಮುಸ್ಲಿಂ ಸಮುದಾಯಕ್ಕೆ ಈ ಬಾರಿಯ ಹಬ್ಬವನ್ನು ಸರಳವಾಗಿ ನಿರ್ವಹಿಸಲು ಸಾಧ್ಯವಿದೆ.
ಆದುದರಿಂದ ರಂಜ್ಹಾನ್ ಹಬ್ಬ ಆಚರಿಸಲು ಈ ಬಾರಿ ಬಟ್ಟೆ ಖರೀದಿ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ನಾವು ತೀರ್ಮಾನಿಸಬೇಕಿದೆ. ಈ ಕುರಿತ ತೀರ್ಮಾನವನ್ನು ಜಮಾಅತ್ ಮಟ್ಟದಲ್ಲಿ ಕೈಗೊಂಡು ನಾವೆಲ್ಲರೂ ಮಾದರಿಯಾಗಬೇಕಿದೆ. ಬಡವರ, ಮಧ್ಯಮ ವರ್ಗದ ಜನತೆಯ ಕಷ್ಟಗಳಲ್ಲಿ ಭಾಗಿಯಾಗೋಣ… ಈ ಬಾರಿ ರಂಜ್ಹಾನ್ ಗೆ ಉಡುಪು ಖರೀದಿಯನ್ನು ಬಹಿಷ್ಕರಿಸೋಣ. ನಾವೆಲ್ಲರೂ ಒಂದಾಗಿ ಹಬ್ಬವನ್ನು ಸರಳವಾಗಿ ಆಚರಿಸೋಣ.
B A ನಝೀರ್ ಅಧ್ಯಕ್ಷರು, ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.