(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋaನಾದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸಲಾಗಿದೆ. ಕೆಲವು ಕಡೆ ಕೆಲ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಧಾರ್ಮಿಕ ವಿದ್ವಾಂಸರು, ಸಂಘ ಸಂಸ್ಥೆಗಳ ಮುಖಂಡರು, ಜಮಾತ್ ಪಧಾಧಿಕಾರಿಗಳು ಈ ಬಾರಿಯ ಈದ್ ಉಲ್ ಫಿತರ್ ಹಬ್ಬವನ್ನು ಸರಳವಾಗಿ ಆಚರಿಸಲು ಕರೆ ಕೊಟ್ಟಿದ್ದಾರೆ. ಇದರ ಉದ್ದೇಶ ಏನು?
ನಾವು ಪ್ರತಿದಿನ ಐದು ಹೊತ್ತು ನಮಾಜ್ ನಡೆಸುತ್ತಿದ್ದ ನಮ್ಮ ಮಸೀದಿಗಳು ಬಾಗಿಲು ಮುಚ್ಚಿವೆ, ಅತೀ ಪ್ರಾಮುಖ್ಯತೆಯನ್ನು ಪಡೆದ ಜುಮಾ ನಮಾಜ್ ಇಲ್ಲವಾಗಿದೆ. ರಮಳಾನ್ ರಾತ್ರಿಗಳಲ್ಲಿ ನಡೆಸುವ ಪ್ರತೇಕ ಪ್ರಾರ್ಥನೆಯಾದ ತರಾವೀಹ್ ಮಸೀದಿಯಲ್ಲಿ ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಈದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಹೇಗೆ ಸಾಧ್ಯ?
ಸರಳವಾಗಿ ಆಚರಿಸುವ ಉದ್ದೇಶ :
ಇಂತಹ ಹತ್ತು ಹಲವು ಕಾರಣಗಳು ಇವೆ. ಇಂತಹ ಸಂದರ್ಭದಲ್ಲಿ ನಾವು ಸರಳವಾಗಿ ಈದ್ ಆಚರಿಸಬೇಕಾಗಿದೆ. ಆದಷ್ಟು ಬೇಗ ಈ ಮಾರಕವಾದ ರೋಗ ಇಡೀ ವಿಶ್ವದಲ್ಲೇ ಇಲ್ಲವಾಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸೋಣ.
– Qayhan K, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.