(ವಿಶ್ವ ಕನ್ನಡಿಗ ನ್ಯೂಸ್) ಉಗ್ರರ ಜೊತೆ ಹೋರಾಟದಲ್ಲಿ ಹುತಾತ್ಮರಾದ 31 ರ ಹರೆಯದ ಮೇಜರ್ ಅನೂಜ್ ಸೂದ್ ತ್ಯಾಗ ಭಾರತೀಯರ ಎದೆಯಲ್ಲಿ ಶಾಶ್ವತವಾಗಿ ಅಚ್ಚಳಿಯದಂತೆ ಉಳಿಯಲಿದೆ .
ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಅನೂಜ್ ಅವರ ಪತ್ನಿ ಆಕೃತಿ ಅವರ ಅಂತಿಮ ನಮನ ಎಲ್ಲರನ್ನು ಭಾವುಕರನ್ನಾಗಿ ಮಾಡಿ ಬಿಡುತ್ತದೆ . ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು , ಆರಂಭದಿಂದಲೂ ಅನೂಜ್ ದೇಶಕ್ಕೋಸ್ಕರ ಯಾವ ತ್ಯಾಗಕ್ಕೂ ಸಿದ್ದ ಎಂದು ಆಕೃತಿಗೂ ತಿಳಿದಿತ್ತು .ಪ್ರತಿ ಬಾರಿಯೂ ಅನೂಜ್ ಆಪರೇಷನ್ ಗೆ ಹೋರಾಟಗಳು ಆಕೃತಿಗೆ ಸಂದೇಶ ಕಳುಹಿಸುತ್ತಿದ್ದ, ಹಿಂದಿರುಗಿದ ನಂತರ ಕೂಡ ಸಂದೇಶ ಕಳುಹಿಸುತ್ತಿದ್ದ . ನಾನು ಅದರ ನಡುವೆ ಆತನಿಗೆ ಸಂದೇಶ ಕಳುಹಿಸುವುದನ್ನು ನಿಲ್ಲಿಸಿ ಬಿಡುತ್ತಿದ್ದೆ ಯಾಕಂದರೆ ಆತ ದೇಶದ ಕೆಲಸಕ್ಕೆ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಎಂದು ಆಕೃತಿ ಭಾವುಕರಾಗಿ ಹೇಳುತ್ತಾರೆ . ಆದರೆ ಈ ಶನಿವಾರ ಮಧ್ಯಾಹ್ನ ಕಾರ್ಯಾಚರಣೆಗೆ ತೆರಳುತ್ತಿದ್ದಾಗ ನನಗೆ ಸಂದೇಶ ಕಳುಹಿಸಿದ್ದ ಆದರೆ ನನ್ನ ಮನದಲ್ಲಿ ಏನೋ ಗೊಂದಲವಿತ್ತು ಎಂದು ಅದರ ನಡುವೆ ಸಂದೇಶ ಕಳುಹಿಸದ ನಾನು ಅಂದು “ಎಲ್ಲವೂ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ”ಸಂದೇಶ ಕಳುಹಿಸಿದೆ ಎಂದು ಭಾವುಕರಾದರು . “ಸಮಯ ಬಂದರೆ ತನ್ನ ದೇಶಕ್ಕಾಗಿ ಆತ ತ್ಯಾಗ ಮಾಡುತ್ತಾನೆ ಎಂದು ತಿಳಿದಿತ್ತು” ಎಂದು ಆಕೃತಿಯ ನುಡಿ ಎಂತವರನ್ನು ಭಾವುಕರನ್ನಾಗಿಸುತ್ತೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.