(www.vknews.com) : ಕೊಳ್ನಾಡು ಗ್ರಾಮ ಪಂಚಾಯತಿಯ 14 ನೇ ಹಣಕಾಸು ನಿಧಿಯಿಂದ ಕೊವೀಡ್-19 ಲಾಕ್ ಡೌನ್ ಸಂದರ್ಭದಲ್ಲಿ ನೊಂದವರಿಗೆ 250 ಫಲನುಭವಿಗಳಿಗೆ ಅಹಾರ ಧಾನ್ಯ ಕಿಟ್ ವಿತರಿಸಲಾಯಿತು.
ಲಾಕ್ ಡೌನ್ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ನೇತೃತ್ವದಲ್ಲಿ ಅಸಕ್ತರಿಗೆ ಸಹಾಯವಾಗಲು ಸಹಾಯವಾಣಿಯನ್ನು ತೆರೆಯಲಾಗಿತ್ತು.ದಾನಿಗಳ ಸಹಾಯದಿಂದ ಅನೇಕು ಕುಟುಂಬಗಳಿಗೆ ಅಹಾರ ಧಾನ್ಯಗಳನ್ನು ವಿತರಿಸಲಾಗಿತ್ತದರೂ,ಬಡತನ ರೇಖೆಗಿಂತ ಕೆಳಗಿರುವ ಹೆಚ್ಚಿನ ಕುಟುಂಬಗಳು ಯಾರಿಂದಲೂ ಸಹಾಯ ವಂಚಿತರಾಗಿದ್ದನ್ನು ಮನಗಂಡ ಗ್ರಾಮ ಪಂಚಾಯತ್ ತನ್ನ ಇತಿಮಿತಿಯೊಳಗೆ ಗರಿಷ್ಠ ಒಂದು ಲಕ್ಷ ಅನುದಾನವನ್ನು ಮೀಸಲಿರಿಸಿ ಪ್ರತಿಸದಸ್ಯರ ತಲಾ 5 ಫಲನುಭವಿಗಳ ಶಿಫಾರಸುಗಳನ್ನು ಪಡೆದುಕೊಂಡು 155 ಪಲನುಭವಿಗಳನ್ನು ಈ ಮೂಲಕ ಅಯ್ಕೆ ಮಾಡಿ ಉಳಿದ 95 ಅರ್ಹ ಫಲನುಭವಿಗಳನ್ನು ಸಹಾಯವಾಣಿಯಲ್ಲಿ ನೊಂದಯಿಸಿದ ಕುಟುಂಬಗಳಿಗೆ ಅಯ್ಕೆ ಮಾಡಿ ಅದರಲ್ಲೂ ಗರಿಷ್ಠ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಸೌಲಭ್ಯ ಸಿಗುವಂತೆ ಗಮನಹರಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ MS ಮಹಮ್ಮದ್ ಅವರ ಉಪಸ್ಥಿತಿಯಲ್ಲಿ ವಿತರಣೆಗೆ ಚಾಲನೆ ನೀಡಲಾಯಿತು.ಮತ್ತು ಎಲ್ಲಾ ವಾರ್ಡ್ ಗಳಲ್ಲಿ ಸದಸ್ಯರಗಳ ಸಂಪೂರ್ಣ ಸಹಕರದೊಂದಿಗೆ ವಿತರಿಸಲಾಗಿದ್ದು.ಸಿಬ್ಬಂದಿ ವರ್ಗ ವಿಶೇಷ ಮುತುವರ್ಜಿ ವಹಿಸಿ ಫಲನುಭವಿಗಳಿಗೆ ವಿತರಿಸುವಲ್ಲಿ ಶ್ರಮಿಸಿರುತ್ತಾರೆ.ಕಾರ್ಯಕ್ರಮದ ಜವಾಬ್ದಾರಿಯನ್ನು ಕಾರ್ಯದರ್ಶಿ ಅಯಿಶಾ ಬಾನು ನಿರ್ವಹಿಸಿದ್ದರು.ಗ್ರಾಮ ಪಂಚಾಯತ್ ಆಡಳಿತಕ್ಕೆ ಇನ್ನೂ ಹೆಚ್ಚಿನ ಜನರಿಗೆ ಸಹಾಯ ಮಾಡಲು ಇಚ್ಚೆ ಇದ್ದರೂ ಎಲ್ಲರಿಗೂ ಅನುದಾನದ ಕೊರತೆಯಿಂದ ನೀಡಲು ಅಸಾಧ್ಯವಾಗಿರುವುದರಿಂದ ಸಾರ್ವಜನಿಕರು ಪಂಚಾಯತ್ ನೊಂದಿಗೆ ಸಹಕರಿಸಬೇಕೆಂದು ವಿನಂತಿಸುವುದರೊಂದಿಗೆ ಈ ಕಾರ್ಯಕ್ರಮದಲ್ಲಿ ಸಹಕರಿಸಿದ ಸರ್ವರಿಗೂ ಪಂಚಾಯತ್ ಅಧ್ಯಕ್ಷ ಮಾನ್ಯ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹಾಗೂ ಉಪಾಧ್ಯಕ್ಷ ಯಮುನಾ ಲಕ್ಷ್ಮಣ ಗೌಡ,ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮತಿ ರೋಹಿಣಿ ಬಿ ಯವರು ಕೃತಜ್ಞತೆ ಸಲ್ಲಿಸಿರುವುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.