(www.vknews.com) : ಕೊರೋನಾ ಆತಂಕದ ಜತೆ ಪೋಷಕರಿಗೆ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಆವರಿಸುತ್ತಿದೆ ಆದರೆ ಸರ್ಕಾರ ಮಾತ್ರ ಆನ್ಲೈನ್ ತರಗತಿಯ ಮೂಲಕ ನಾವು ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದೆ. ಆದರೆ ಇದುವರೆಗೂ ಎಷ್ಟು ಜನ ವಿದ್ಯಾರ್ಥಿಗಳಿಗೆ ಈ ಅನುಕೂಲ ಕಲ್ಪಿಸಲಾಗಿದೆ ಎನ್ನುವ ಮಾಹಿತಿ ಇಲ್ಲ.
ಈ ಹಿಂದೆ ಆನ್ಲೈನ್ ತರಗತಿಗಳಿಗೆ ಬಳಸುತ್ತಿದ್ದ ಜೂಮ್ ಆ್ಯಪ್ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ ಮೇಲೆ ರಾಜ್ಯ ಸರ್ಕಾರ ಶಿಕ್ಷಕರಿಗೆ ಯಾವ ನಿರ್ದೇಶನ ನೀಡಿದೆ ಎನ್ನುವುದೇ ಅಸ್ಪಷ್ಟವಾಗಿದೆ.
ಇನ್ನೂ ಮುಖ್ಯವಾದ ಸಂಗತಿ ಎಂದರೆ ಆನ್ಲೈನ್ ತರಗತಿಗಳಿಗೆ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಇರಬೇಕು. ಇದು ಪ್ರಾಥಮಿಕ ಅಗತ್ಯತೆಗಳಲ್ಲಿ ಒಂದು. ಇದನ್ನು ಅರಿಯದ ಸರ್ಕಾರ ಯಾವ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರುಗೊಳಿಸುತ್ತಿದೆ ಎನ್ನುವುದು ಮುಖ್ಯ ಪ್ರಶ್ನೆ.
ಪರೀಕ್ಷೆಗಾಗಿ ಕಾದು ಕಾದು ಪರೀಕ್ಷೆಯ ಆಸಕ್ತಿಯೇ ಕುಸಿಯುತ್ತಿರುವ ಈ ಹೊತ್ತಿನಲ್ಲಿ ಈ ನಡುವೆ ಆನ್ಲೈನ್ ತರಗತಿ, ಪರೀಕ್ಷೆ ಎನ್ನುವ ಊಹಾಪೋಹಗಳು ಎಲ್ಲಾ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿದೆ.
ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸೌಲಭ್ಯ ಇದೆಯೋ ಇಲ್ಲವೋ ಮಾಹಿತಿ ಇಲ್ಲ. ನೆಟ್ವರ್ಕ್ ದೊರೆಯುತ್ತದೆಯೇ ಎನ್ನುವ ವಿಚಾರದ ಕಡೆ ಗಮನ ಹರಿಸಿಲ್ಲ, ಅನೇಕ ಕಡೆ ಸರಿಯಾಗಿ ಅಂತರ್ಜಾಲದ ಸರ್ವರ್ ಸಿಗದೆ ಇರುವುದು ಸಹ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇಷ್ಟೆಲ್ಲಾ ಅಂಶಗಳನ್ನು ಮನಗಾಣದೆ ಸರ್ಕಾರವೇ ವೈರುದ್ಯದ ಹೇಳಿಕೆಗಳನ್ನು ನೀಡುತ್ತಾ ಆತಂಕ ಸೃಷ್ಟಿಸುವುದು ಒಳ್ಳೆಯ ನಡೆಯಲ್ಲ.
ಅಲ್ಲದೆ ಶಿಕ್ಷಣ ಖಾತೆಯಂತಹ ಪ್ರಮುಖ ಜವಾಬ್ದಾರಿಯನ್ನು ಹೊತ್ತಿರುವ ಸಚಿವರನ್ನು ಕೋವಿಡ್ 19 ಕುರಿತು ಸಮನ್ವಯ ಸಾಧಿಸಲು ನೇಮಿಸಿದರೆ ಲಕ್ಷಾಂತರ ಮಕ್ಕಳ ಭವಿಷ್ಯದ ಕಥೆ ಏನು?.
ಅಲ್ಲದೇ ಶಿಕ್ಷಣ ಸಚಿವರು ಇದುವರೆಗೂ ಎಷ್ಟು ಜನ ಮಕ್ಕಳ ಜತೆ, ಶಿಕ್ಷಕರ ಜತೆ ಸಂವಾದ ನಡೆಸಿದ್ದಾರೆ ಎನ್ನುವುದನ್ನು ಸಹ ತಿಳಿದಿಲ್ಲ.
ಶಿಕ್ಷಣ ಇಲಾಖೆ ಪ್ರಾಯೋಗಿಕವಾಗಿ ಪ್ರಾರಂಭಿಸಿದ ರಸಪ್ರಶ್ನೆ ರೀತಿಯ ವಾಟ್ಸ್ಆ್ಯಪ್ ಪ್ರಶ್ನೋತ್ತರ ತರಗತಿಗೆ ಶೇ 50 ಕ್ಕಿಂತ ಹೆಚ್ಚು ಮಕ್ಕಳು ಸೌಲಭ್ಯ ಇಲ್ಲದ ಕಾರಣ ಸರಿಯಾಗಿ ಭಾಗವಹಿಸಲು ಆಗಲಿಲ್ಲ. ಇಂತಹ ಪರಿಸ್ಥಿತಿ ನಮ್ಮ ಮುಂದೆ ಇರುವಾಗ ಆನ್ಲೈನ್ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವೇ.
ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ #ಛಾತ್ರಯುವಸಂಘರ್ಷ_ಸಮಿತಿ (#ಸಿವೈಎಸ್ಎಸ್) ಸದಸ್ಯರು ಕಲೆ ಹಾಕಿರುವ ಮಾಹಿತಿಯಂತೆ ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ.
* ತಾಂತ್ರಿಕವಾಗಿ ತಿಳುವಳಿಕೆ ಸಾಲದಿರುವುದು * ಅಸಮರ್ಪಕ ಕಲಿಕಾ ವಾತಾವರಣ * ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ತೊಂದರೆಗಳು * ಮಾನಸಿಕ ಒತ್ತಡ * ಹೊಸಾ ಮಾದರಿಯಾದ ಈ ಆನ್ಲೈನ್ ತರಗತಿಯ ಬಗ್ಗೆ ತಿಳುವಳಿಕೆಯ ಕೊರತೆ * ಲ್ಯಾಬ್ ತರಗತಿಗಳನ್ನು ಕೈಬಿಟ್ಟಿರುವುದು ಹೀಗೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿ ಘಟಕ ಪಟ್ಟಿ ಮಾಡಿದೆ.
* ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮನರಂಜನಾ ಕಾರ್ಯಕ್ರಮಗಳನ್ನು ಬದಿಗೊತ್ತಿ ತರಗತಿಗಳನ್ನು ನಡೆಸುವಂತೆ ಸೂಚಿಸಬೇಕು. ಅಥವಾ ಸ್ಥಳಿಯ ಕೇಬಲ್ ಚಾನಲ್ಗಳ ಮೂಲಕವಾದರೂ ಸ್ಥಳಿಯ ಉತ್ತಮ ಶಾಲಾ ಶಿಕ್ಷಕರಿಗೆ ತರಗತಿಗಳನ್ನು ನಡೆಸುವಂತೆ ಸೂಚಿಸಬೇಕು.
ಈಗಲೇ ಮುಂದಿನ ಶೈಕ್ಷಣಿಕ ವರ್ಷದ ರೂಪುರೇಷೆಗಳನ್ನು ಸಿದ್ದ ಪಡಿಸಿ ಪೋಷಕರ ಆತಂಕ ದೂರ ಮಾಡಬೇಕು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಈಗಲೇ ಪಠ್ಯ ಪುಸ್ತಕ ದೊರೆಯವಂತೆ ವ್ಯವಸ್ಥೆ ರೂಪಿಸಬೇಕು ಎಂದು #ಆಮ್ಆದ್ಮಿಪಕ್ಷ ಆಗ್ರಹಿಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.