ದಾನಿಗಳ ಸಹಕಾರದಿಂದ ಸೌಹಾರ್ದಯುತವಾಗಿ ಕಿಟ್ ವಿತರಿಸಿ ಪ್ರಶಂಸೆ ಮೆರೆದ ಸಮಿತಿ
(www.vknews.com) : ಕೋವಿಡ್ 19 ಕೊರೋನಾ ಮಹಾಮಾರಿ ರೋಗವು ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಬಡ ಮತ್ತು ಮಧ್ಯಮ ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ದಾನಿಗಳ ಸಹಕಾರದಿಂದ ಸರಿಸುಮಾರು 33 ಕಿಟ್ ವಿತರಿಸಿದ್ದ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯ ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿತ್ತು.
ಈ ಬಾರಿ ಹಲವಾರು ಬೇಡಿಕೆಗಳು ಬಂದಿದ್ದನ್ನು ಗಣನೆಗೆ ತೆಗೆದುಕೊಂಡ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯು ದ್ವಿತೀಯ ಹಂತದಲ್ಲಿ ಅರ್ಹ ಇತರ ಸಮುದಾಯಗಳಿಗೂ ಸೇರಿ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಉದ್ಯಮಿ ಮುಸ್ತಫಾ ಬೆಂಗಳೂರು ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಊರಿನ ಎಲ್ಲಾ ವರ್ಗದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮುಂದಕ್ಕೂ ಇದೇ ರೀತಿಯಲ್ಲಿ ಉತ್ತಮ ಸಾಮಾಜಿಕ ಕಾರ್ಯ ಮುಂದುವರಿಯಲಿ ಎಂದು ಶುಭ ಹಾರೈಸಿದರು. ದಾನಿಗಳು ನಮ್ಮ ವೇದಿಕೆಗೆ ನೀಡುತ್ತಿರುವ ಬೆಂಬಲ ಮತ್ತು ಸಹಕಾರದಿಂದ ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು ಅವರ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಸಂಘಟನೆ ಭಾಧ್ಯತೆಯಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಝೀಝ್ ಬಿ .ಕೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಗಫ್ಪಾರ್ ಕೆಮ್ಮಾರ, ಮಾಧ್ಯಮ ಸಲಹೆಗಾರ ಹಕೀಮ್ ಆಕಿರೆ, ಸಂಘಟನಾ ಕಾರ್ಯದರ್ಶಿ ಬಾಶಿತ್ ಅಲಿ ಕೆಮ್ಮಾರ, ಸ್ಥಾಪಕ ಸದಸ್ಯರಾದ ಸೌಕತ್ ಅಲಿ ಜೇಡರಪೇಟೆ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.