ಮಂಜೇಶ್ವರಂ(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರವು ಲಾಕ್ಡೌನ್ ಮಾಡಿದ್ದು ಇದರ ಮಧ್ಯೆ ಅಲ್ಪಸಂಖ್ಯಾತರ ಮೇಲೆ ನಡೆಯುವ ಬೇಟೆಯನ್ನು ವಿರೋಧಿಸಿ SDPI ಮಂಜೇಶ್ವರ ಮೀಂಜ ಪಂಚಾಯತ್ ವ್ಯಾಪ್ತಿಯಲ್ಲಿ SDPI ವತಿಯಿಂದ ಪ್ರತಿಭಟನಾ ಸಭೆಯು ನಡೆಯಿತು.
ನಾಗರಿಕರನ್ನು ಲಾಕ್ಡೌನ್ ಮಧ್ಯೆ ಜೈಲಿಗೆ ಹಾಕುವುದು ಮತ್ತು ಯುಪಿಎಯಂತಹ ಕಠಿಣ ಕ್ರಮಗಳನ್ನು ಹೇರುವುದನ್ನು ವಿರೋಧಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್ಡಿಪಿಐ ಮಂಜೇಶ್ವರಂ ಕ್ಷೇತ್ರದ ಮೀಂಜ ಪಂಚಾಯತ್ ಅಡಿಯಲ್ಲಿ ವಿವಿಧ ಶಾಖೆಗಳಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.
ಅಮೀರ್, ನವಾಜ್ ಬೆಜ್ಜ, ನೌಫಲ್ ಚಿಗುರುಪಾದ, ಅಝೀಝ್ ಕಡಂಬಾರ್, ರಝಾಕ್ ಗಾಂಧಿನಗರ, ಸಂಶೀರ್ ಗಾಂಧಿನಗರ, ಲತೀಫ್ ಚಿಗುರುಪಾದ ಮತ್ತು ಸಿದ್ದೀಕ್ ಮೀಯಾಪದವು ಇವರುಗಳು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.