(www.vknews.in) ಕಾಪು : ಕೊರೊನ ವೈರಸ್ ಮತ್ತು ರಂಝಾನ್ ತಿಂಗಳ ಲಾಕ್ ಡೌನ್ ಸಂದರ್ಭದಲ್ಲಿ, ಕಟಪಾಡಿ , ಕಾಪು , ಮೂಳೂರ್ , ಉಚ್ಚಿಲ , ಎರ್ಮಾಳ್ , ಪಡುಬಿದ್ರಿ , ಮುದರಂಗಡಿ , ಎಲ್ಲೂರ್ , ಬೆಳಪು , ಚಂದ್ರನಗರ , ಕಲತುರ್ , ಮಲ್ಲಾರ್ , ಮಜೂರ್ ಪರಿಸರದ ಬಡ ವರ್ಗ, ಮಧ್ಯಮ ವರ್ಗ , ಮತ್ತು ವಲಸೆ ಕಾರ್ಮಿಕರನ್ನೂ ಸೇರಿಸಿ , ಹಿಂದೂ , ಮುಸ್ಲಿಮ್ , ಕ್ರಿಶ್ಚಿಯನ್ ಧರ್ಮದ ಅರ್ಹ 175 ಕುಟುಂಬಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತಲವು ಆಹಾರದ ಕಿಟ್ ಒದಗಿಸಿತು. ಕೆಲವು ಕುಟುಂಬದ ಮನೆಗೆ ತೆರಳಿ ವಿತರಿಸಿದರೆ , ಕೆಲವು ಕುಟುಂಬದವರನ್ನು ಪ್ರತ್ಯೇಕ , ಪ್ರತ್ಯೇಕ ಸಮಯದಲ್ಲಿ ಕರೆಸಿ ನೀಡಲಾಯಿತು. ಈ ಸಂದರ್ಭದಲ್ಲಿ ಜನ ಸೇರಿಸಿ ಗ್ರೂಪ್ ಫೋಟೋವಾಗಲಿ , ವೈಯಕ್ತಿಕ ಫೋಟೋವಾಗಲಿ ತೆಗಯಲಿಲ್ಲ. ಹಾಗೂ ವಿಡಿಯೋ ಮಾಡಿ ಸ್ವಾಭಿಮಾನಕ್ಕೆ ಧಕ್ಕೆ ತರಲಿಲ್ಲ. ಆಹಾರದ ಕಿಟ್ ಕೊಟ್ಟ ದಾನಿಗಳಿಗೆ ಪಡೆದುಕೊಂಡವರು ಯಾರು ? ಪಡೆದುಕೊಂಡ ದಾನಿಗಳಿಗೆ ಕೊಟ್ಟ ದಾನಿಗಳು ಯಾರು ಎಂದು ಗೊತ್ತಾಗಲಿಲ್ಲ. ಈ ಕ್ರಮವು ಪಡೆದು ಕೊಂಡವರಿಂದ ಪ್ರಶಂಸಿಸಲ್ಪಟ್ಟಿತು. ಸ್ವಾಭಿಮಾನಕ್ಕೆ ಗೌರವ ಕೊಡುವ ಜಮಾಅತೆ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗ ಸದಾ ಸಕ್ರಿಯವಾಗಿದೆ ಎಂದು ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.