ಚಿಕ್ಕಬಳ್ಳಾಪುರ (www.vknews.com) : ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಕೊರೋನಾ ಆತಂಕ ಶುರುವಾಗಿದ್ದು, ಕೊವೀಡ್-19ಮುಕ್ತವಾಗಿದ್ದ ಚಿಂತಾಮಣಿ ನಗರದಲ್ಲೂ ಈಗ ಕೊರೊನಾ ಸೋಂಕು 2 ವರದಿ ಯಾಗಿದೆ.
ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮತ್ತು ಜಿಲ್ಲಾ ಎಸಿ ರಘು ನಂದನ್ ಚಿಂತಾಮಣಿ ನಗರದಲ್ಲಿ ಎರಡು ಕೊರೋನಾ ವೈರಸ್ ದೃಢಪಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿಂತಾಮಣಿ ನಗರದ ಎನ್ ಆರ್ ಬಡಾವಣೆ ನಿವಾಸಿ 71 ವರ್ಷದ ವೃದ್ಧನಿಗೆ ಮತ್ತು ಅವರ ಮೊಮ್ಮಗನಿಗೆ ಸೋಂಕು ದೃಢವಾಗಿದೆ.
ಪ್ರತಿಷ್ಠಿತ ಕುಟುಂಬ ಹಾಗೂ ಜ್ಯುವೆಲ್ಲರಿ ಶಾಪ್ ಮಾಲೀಕ ರಾಗಿರುವ 71 ವರ್ಷದ ಸೋಂಕಿತ ವ್ಯಕ್ತಿ ಹಾಗೂ ಈತನ ಸರಿ ಸುಮಾರು 65 ವರ್ಷದ ಪತ್ನಿ ಬೆಂಗಳೂರಿನ ವಿಜಯನಗರದ ಮಗಳ ಮನೆ ಯಿಂದ ಚಿಂತಾಮಣಿಗೆ ವಾಪಾಸ್ಸಾಗಿದ್ದರು. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಒಳಗಾಗಿ ಮಗಳ ಮನೆ ಯಲ್ಲಿ ಕೆಲದಿನಗಳು ವಿಶ್ರಾಂತಿ ಪಡೆದು ಚಿಂತಾಮಣಿ ನಗರದ ನಿವಾಸಕ್ಕೆ ಏಪ್ರಿಲ್ 26ರಂದು ವಾಪಸ್ಸಾಗಿದ್ದರು. ಆದರೆ ಈ ಮಧ್ಯೆ ಕಳೆದ 4 ದಿನಗಳ ಹಿಂದೆ ಅಂದರೆ ಮೇ 4ರ ರಾತ್ರಿ ಸೋಂಕಿತನ ಪತ್ನಿ ವೃದ್ಧೆ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮೇ 5ರಂದು ಅಂತ್ಯಕ್ರಿಯೆ ನೇರವೇರಿಸಿದ್ದರು .
ಈಗ ಚಿನ್ನದ ಅಂಗಡಿ ಮಾಲೀಕ ಮತ್ತು ಅವರ ಮೊಮ್ಮಗ ನಿಗೆ ಕೋರೋನ ಸೊಂಕು ಪಾಸಿಟಿವ್ ಆಗಿದೆ. ಈಗಾಗಲೇ ಚಿಂತಾಮಣಿ ನಗರದ 9 ನೇ ವಾರ್ಡನ 100 ಕಿಂತ ಹೆಚ್ಚು ಜನರನ್ನು ಕ್ವಾರಂಟೆನ್ ಮಾಡಲಾಗಿದೆ. ಚಿಂತಾಮಣಿ ಕೊರೋನ ಪ್ರಕರಣಕ್ಕೆ ಸಂಬಂಧಿಸಿದ ಎಸ್. ಪಿ.ಮಿಥುನ್ ಕುಮಾರ್ ಏನು ಹೇಳಿದ್ದಾರೆ ನೋಡಿ..
ವಿಡಿಯೋ ವೀಕ್ಷಿಸಿ…
ವರದಿ ; ಮನ್ಸೂರ್ ಅಹಮದ್, ಚಿಂತಾಮಣಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.