COVID 19 (ಕೋವಿಡ್) ಎಂದರೆ CO-Corona, VI-Virus, D- Disease. 19- 2019.
(www.vknews.com) : ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಈ ಕೋವಿಡ್-19 (ಕೊರೊನಾ) ನವಂಬರ 2019ರಲ್ಲಿ ಚೀನಾ ದೇಶದಲ್ಲಿ ಜನನ ಅಥವಾ ಹಾವಳಿ ಆರಂಭವಾಯಿತು..!
ಭಾರತ ಸೇರಿದಂತೆ ಜಗತ್ತಿನ ಭಾಗಶಃ ದೇಶಗಳು ಆರಂಭದಲ್ಲಿ ಇದನ್ನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಭಾರತದಲ್ಲಿ ಮೊದಲ ಕೊರೊನಾ ಕೇಸ್ ಕಂಡಿದ್ದು ಜನೆವರಿ 30ರಂದು ಕೇರಳಾ ರಾಜ್ಯದಲ್ಲಿ. ನಮ್ಮ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು ಮಾರ್ಚ್ 24..!!! ಅಂದರೆ ಸರಿಯಾಗಿ 53ದಿನಗಳ ನಂತರದಲ್ಲಿ. ವಿಶೇಷವಾಗಿ ಹೇಳಬೇಕೆಂದರೆ ತಡವಾಗಿ..! ಈ ಸಮಯದಲ್ಲಾಗಲೆ ಅದು ಇಡೀ ಭಾರತದ ಮೂಲೆ ಮೂಲೆಗೆ ವ್ಯಾಪಿಸಿತ್ತು.
ಲಾಕ್ ಡೌನ್ ಜಾರಿಯ ನಂತರ ದೇಶದಲ್ಲಿ ಮುಂದೆ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಏಕೆಂದರೆ ಲಾಕ್ ಡೌನ್ ಆರಂಭವಾಗಿ 45 ದಿನಗಳು ಮುಗಿಯುವ ವೇಳೆಯಲ್ಲಿ ನಮಗೆ ಈ ವಿಷಯ ಬಿಟ್ಟರೆ ಮಾತಾಡೋಕೆ, ಓದೋಕೆ ಹಾಗೂ ನೋಡೋಕೆ ಬೇರೆ ಏನು ಇರಲಿಲ್ಲ.
ಇವಾಗ ಮುಂದಿನ ವಾರ ವಿದೇಶದಲ್ಲಿ ನೆಲೆಸಿರುವ ನಮ್ಮವರನ್ನ ಕರೆತರುತ್ತಿದ್ದೇವೆ. ಕಾರಣ ಕೊರೊನಾ ಹಾವಳಿಯಿಂದ ಹಲವು ದೇಶಗಳು ತಾತ್ಕಾಲಿಕ ವೀಸಾದ ಮೇಲೆ ತಮ್ಮ ದೇಶದಲ್ಲಿ ನೆಲೆಸಿರುವ ಇತರ ದೇಶದ ಪ್ರಜೆಗಳನ್ನ ತಮ್ಮ ದೇಶಕ್ಕೆ ವಾಪಸ್ ಹೋಗುವಂತೆ ಸೂಚನೆ ನೀಡಿವೆ. ಅದರಂತೆ ಎಲ್ಲಾ ದೇಶಗಳು ತಮ್ಮ ಜನರನ್ನ ಮರಳಿ ತಾಯಿನಾಡಿಗೆ ಕರೆತರುತ್ತಿವೆ. ಅದರಂತೆ ನಮ್ಮ ಭಾರತೀಯರನ್ನು ಕರೆ ತರಲು ಹಲವು ದೇಶಗಳಿಗೆ ಹೊರಡಲು ವಿಮಾನಗಳು ಸಜ್ಜಾಗಿವೆ ಹಾಗೂ ಅಲ್ಲಿಂದ ಕರೆತಂದ ಜನರನ್ನ ಪರೀಕ್ಷೆ ಮಾಡಿ ಕೆಲವು ದಿನ ಕ್ವಾರೈನ್ಟೈನ್ ಮಾಡಲಾಗುತ್ತಿದೆ. ಒಳ್ಳೆಯ ಕೆಲಸ ಇದು, ಏಕೆಂದರೆ ಅವರು ಈ ನಾಡಿನ ಜನರು ಮತ್ತು ಅವರು ಅಲ್ಲಿಗೆ ದುಡಿಯಲು ಹೋಗಿದ್ದರೂ ಅವರು ನಮ್ಮ ಭಾರತೀಯರೇ ಮತ್ತು ಮುಂಜಾಗ್ರತಾ ಕ್ರಮ ಕೂಡಾ ಒಳ್ಳೇದು.
ಆದರೆ ಇದೇ ಕೆಲಸವನ್ನ ನಮ್ಮ ಸರ್ಕಾರ ಚೀನಾದಲ್ಲಿ ಕೊರೊನಾ ಹಾವಳಿ ಆರಂಭವಾದ ಕೂಡಲೇ ವಿದೇಶಕ್ಕೆ ಹಾರುವ ಲೋಹದ ಹಕ್ಕಿಗಳ ತಡೆಹಿಡಿದಿದ್ದರೆ ಅಥವಾ ಭಾರತಕ್ಕೆ ವಿಮಾನಗಳ ಮೂಲಕ ಡಿಸೆಂಬರ್ ರಿಂದ ಮಾರ್ಚ್ ವರೆಗೆ ಪ್ರಯಾಣ ಮಾಡಿದ್ದ ಪ್ರಯಾಣಿಕರನ್ನ ಸರಿಯಾಗಿ #ಪರೀಕ್ಷೆ ಹಾಗೂ ಕೆಲವು ದಿನಗಳ ಕಾಲ ಕ್ವಾರೈ0ಟೈನ್ ಮಾಡಿದ್ದರೆ ಇನ್ನೂ ಸ್ವಲ್ಪ ಕಟ್ಟು ನಿಟ್ಟಿನ ಕ್ರಮ ಅನುಸರಿಸಿ ಅವರನ್ನ ಕೆಲವು ದಿನಗಳ ಕಾಲ ಪ್ರತ್ಯೇಕ ವಾಸವಿರುವಂತೆ ಮಾಡಿದ್ದರೆ ಆ ಕಥೆಯೇ ಬೇರೆ ಆಗಿರುತ್ತಿತ್ತು..
ಜೊತೆಗೆ ಇಷ್ಟೆಲ್ಲ ಸಮಸ್ಯೆ ಹಾಗೂ ನಾವು ನೀವು ಲಾಕ್ ಡೌನಗೆ ಒಳಗಾಗುವ ಸಂಭವವೇ ಇರುತ್ತಿರಲಿಲ್ಲ.. ಇಲ್ಲಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಎಡವಿದೆ ಎಂಬವುದು ಮಾತ್ರ ಸತ್ಯ.
ಸರ್ಕಾರ ತಡವಾದರೂ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರಕ್ಕೆ ಜೊತೆಯಾಗಿ ಇಡೀ ದೇಶ ನಿಮ್ಮ ಜೊತೆಯಾಯಿತು ಏಕೆಂದರೆ ಆ ಸಂದರ್ಭಕ್ಕೆ ಬೇರೆ ಮಾರ್ಗವೇ ಇರಲಿಲ್ಲ. ಎಲ್ಲರೂ ಸೆರಿ ಕೊರೊನಾ ವಿರುದ್ಧ ಹೋರಾಟ ಮಾಡೋಣವೆಂದು ಜನರಿಗೆ ಜಾಗೃತಿ ಹಾಗೂ ಕ್ರಮ ಕೈಗೊಂಡಿತು.
ಆದರೆ ಆ ಗಟ್ಟಿ ನಿರ್ಧಾರದ ಮಧ್ಯದಲ್ಲಿಯೂ ನೀವು ಅಮಾಯಕರಾದ ನನ್ನ ದೇಶದ ಬಡ ಕೂಲಿಕಾರ್ಮಿಕರನ್ನ ಮರೆತು ಬಿಟ್ಟರಿ…!
ಮಾರ್ಚ್ 18 ರಿಂದ 23 ರವರೆಗೆ ಇಡೀ ದೇಶದಲ್ಲಿ ನಡೆದ ಚರ್ಚಾ ವಿಷಯವೆಂದರೆ ಅದು ಜನತಾ ಕರ್ಫ್ಯು ಬಗ್ಗೆ ಮಾತ್ರ. ನಂತರ ಮಾರ್ಚ್ 24ಕ್ಕೆ ಲಾಕ್ ಡೌನ ಘೋಷಣೆ ಮಾಡಿದ್ರಿ. .
ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ 18 ರಿಂದ 24ರ ಮದ್ಯೆ 7 ದಿನಗಳ ಸಮಯವನ್ನ ವ್ಯರ್ಥ ಮಾಡುವ ಬದಲು ಜನತೆಗೆ ತಮ್ಮ ತಮ್ಮ ಊರಿಗೆ ಹಾಗೂ ತಮ್ಮ ತಮ್ಮ ರಾಜ್ಯಕ್ಕೆ ಮರಳಲು ತಿಳಿಸಿದ್ದರೆ ಇವತ್ತು ಬಡ ಕಾರ್ಮಿಕರು ಇಷ್ಟೆಲ್ಲಾ ತೊಂದರೆ, ಸಾವು, ನೋವು ಅನುಭವಿಸುತ್ತಿರಲಿಲ್ಲ ಅಲ್ಲವೇ..?
ಇವಾಗ ಕಳೆದುಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ನಿಜ. ಮುಂದೆ ಏನಾಗುತ್ತದೆ ಎಂಬ ಭಯದಲ್ಲಿ ಇವತ್ತು ಭಾರತ ಸೇರಿದಂತೆ ಇಡೀ ಜಗತ್ತು ಚಿಂತಿಸುತ್ತಿದೆ..! ದೇಶದ ಪ್ರತಿಯೊಬ್ಬರ ಬದುಕಿಗೂ ಹಾಗೂ ದೇಶಕ್ಕೆ ಕೊರೊನಾ ಎಂಬ ದೊಡ್ಡ ಪೆಟ್ಟು ಬಿದ್ದಿದೆ ಮುಂದೆ ಏನು ಆಗುತ್ತೆ ಎನ್ನೋದು ಮಾತ್ರ ಎಲ್ಲರನ್ನೂ ಕಾಡುತ್ತಿದೆ..!
ಪ್ರಶ್ನೆ ಮಾಡಬೇಕಾದ ದೇಶದ ಪ್ರತಿಷ್ಠಿತ ಮಾಧ್ಯಮಗಳು ದೆಹಲಿ ಧಾರ್ಮಿಕ ಸಭೆ ನಡೆಸಿರೋದು ಕರೋನಾ ಭಾರತದಲ್ಲಿ ಹರಡಲು ಕಾರಣವೆಂದು ಬಿಂಬಿಸಲು ಯಶಸ್ವಿಯಾಯಿತು. ! ಆದರೆ ಅವರ ಯಾರ ಬಾಯಿಯಿಂದ ವಿದೇಶಿಗರನ್ನು ಪರೀಕ್ಷಿಸದೆ ದೇಶದೊಳಗೆ ಬಿಟ್ಟುಕೊಂಡಿದ್ದು ಯಾರು..? ತಡ ಮಾಡಿದ್ದು ಯಾರು.? ಸಮಾವೇಶ ನಡೆಸಲು ಅನುಮತಿ ನೀಡಿದ್ದು ಯಾರು..? ಸರ್ಕಾರ ನವಂಬರ್ 2019 ರಿಂದ ಮಾರ್ಚ್ 24ರ ಈ ಕುರಿತು ಕೈಗೊಂಡ ಕ್ರಮವೇನು..? ಎಂದು ಪ್ರಶ್ನೆ ಕೇಳಬೇಕಾದ ದೇಶದ ಪ್ರತಿಷ್ಠಿತ ಮಾಧ್ಯಮಗಳು ಮಾಡಿದ್ದು ಏನು ಎಂದು ಎಲ್ಲರಿಗೂ ತಿಳಿದಿದೆ .! ಬೆರಳೆಣಿಕೆಯ ಮಾಧ್ಯಮಗಳು ಜನರ ಕಷ್ಟ ನಷ್ಟಗಳ ಕುರಿತು ಗಮನ ನೀಡಿದ್ದು ಸ್ವಲ್ಪ ಸಮಾಧಾನಕ ಅಂಶ.
ಜನಸಾಮಾನ್ಯರ ಗಮನ ಇತರೆಡೆಗೆ ಸೆಳೆದು ಪ್ರಶ್ನೆಯ ದಾರಿಯನ್ನ ತಪ್ಪಿಸಿ ತಮ್ಮ ಯಜಮಾನನಿಗೆ ನಿಷ್ಠೆ ತೋರಿಸಿದವರು ಯಾರು..?
ರೈಲು ಹಳಿಯ ಮೇಲೆ ಬಿದ್ದಿದ್ದ ರೊಟ್ಟಿ ಕೊರೊನಾದ ಕರುಣಾಜನಕ ಕಥೆಯನ್ನ ಹೇಳಿದರೆ. ವಿಮಾನ ಶ್ರೀಮಂತರ ಭವ್ಯ ಸ್ವಾಗತ ತೋರಿಸುತ್ತದೆ .! ಲಕ್ಷಾಂತರ ಜನರು ತಮ್ಮ ಸಹಮಾನವರ ಬಗ್ಗೆ ತೋರಿಸಿದ ಕಾಳಜಿ ಹಾಗೂ ಸರ್ಕಾರದ ಹಲವು ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಹಾಗೂ ವೈದ್ಯರು ಸೈನಿಕರ ರೀತಿಯಲ್ಲಿ ದೇಶದ ಜನರನ್ನ ಕಾಪಾಡಲು ಈ ಸಂದರ್ಭದಲ್ಲಿ ಶ್ರಮಿಸುತ್ತಿದ್ದಾರೆ.
ಮುಂದೆ ಕೊರೊನಾ ವೈರಸ್ ಯಿಂದ ನಮ್ಮನ್ನೆಲ್ಲಾ ದೇವರೇ ಕಾಪಾಡಬೇಕು ಎಂದು ಹೇಳೋಣ ಎಂದರೆ ದೇವರ ಸ್ಥಾನಗಳನ್ನೆಲ್ಲ ಬಂದ್ ಮಾಡಿ ಸರ್ಕಾರ ಈ ಮದ್ಯಪಾನಕ್ಕೆ ಅವಕಾಶ ಕೊಟ್ಟು ಮತ್ತಷ್ಟು ತೊಂದರೆಗೆ ಆಹ್ವಾನಿಸಿದೆ. ಲಾಕ್ ಡೌನ ಸಡಿಲಿಕೆ ಹಾಗೂ ಮದ್ಯದ ಹಾವಳಿ, ಜನರ ಬೇಜವಾಬ್ದಾರಿಯ ಓಡಾಟದಿಂದ ಕೊರೊನಾ ಮಾತ್ರ ಮತ್ತಷ್ಟೂ ಶರವೇಗದಲ್ಲಿ ಹಬ್ಬುತ್ತಿದೆ..!
– ಸುಬಾನಿ ಆರ್.ಟಿ.ಕುಷ್ಟಗಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.