ಕುಂಬಳೆ(ವಿಶ್ವಕನ್ನಡಿಗ ನ್ಯೂಸ್): ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಯುವತಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಮೃತ್ಯುವಶವಾದ ಘಟನೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಮಂಜೇಶ್ವರ ಕೋಳಿಯೂರಿನ ಆದಂ ಕುಟ್ಟಿಯವರ ಪತ್ನಿ ಅಸ್ಮಾ(27) ಮೃತಪಟ್ಟ ದುರ್ಧೈವಿ. ಪ್ರಾರಂಭದಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವತಿ ಕೋವಿಡ್ ಕಾರಣದಿಂದಾಗಿ ಗಡಿ ಮುಚ್ಚಲ್ಪಟ್ಟ ಸನ್ನಿವೇಶದಲ್ಲಿ ಹೆರಿಗೆಗೆಂದು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಗ್ಯವಂತೆಯಾಗಿದ್ದ ಯುವತಿ ಸಂಜೆ 7 ರ ಸುಮಾರಿಗೆ ಹೆರಿಗೆ ಕೊಠಡಿಗೆ ನಡೆದುಕೊಂಡೇ ಸಾಗಿದ್ದರು. ಕೆಲವು ನಿಮಿಷಗಳ ನಂತರ ಯುವತಿಯ ಸ್ಥಿತಿ ಗಂಭೀರವಾಗಿದೆಯೆಂದು ತಿಳಿಸಿದ ಆಸ್ಪತ್ರೆಯ ಅಧಿಕಾರಿಗಳು ಆಂಬುಲೆನ್ಸ್ ಮೂಲಕ ಪರಿಯಾರಂ ಮೆಡಿಕಲ್ ಕಾಲೇಜಿಗೆ ತಕ್ಷಣವೇ ಸಾಗಿಸುವ ಯತ್ನ ನಡೆಸಿದರೂ ದಾರಿ ಮಧ್ಯೆ ಗರ್ಭಿಣಿ ಸಾವನ್ನಪ್ಪಿದ್ದರು. ಬಳಿಕ ಶಸ್ತ್ರಕ್ರಿಯೆ ಮೂಲಕ ಮಗುವನ್ನು ಹೊರತೆಗೆಯಲಾಯಿತಾದರೂ ಆ ವೇಳೆಗಾಗಲೇ ಮಗುವೂ ಮೃತಪಟ್ಟಿತ್ತು. ಆರೋಗ್ಯವಂತೆಯಾಗಿದ್ದ ಗರ್ಭಿಣಿಯ ಸಾವಿಗೆ ಅಮಿತ ಪ್ರಮಾಣ ಚುಚ್ಚು ಮದ್ದು ನೀಡಿದ್ದೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಿಂದ ಪೆರಿಯಾರಂಗೆ ಸಾಗಿಸಲು ಆಂಬುಲೆನ್ಸ್ ಗೆ ಹತ್ತಿಸುವ ಸಂದರ್ಭದಲ್ಲಿ ಯುವತಿ ಪ್ರಜ್ಞಾಹೀನಾಗಿದ್ದಳೆಂದೂ ವೈದ್ಯರ ಗಂಭೀರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದೂ ಕುಟುಂಬಸ್ಥರು ಎಸ್.ಡಿ.ಪಿ.ಐ ನೇತಾರರಿಗೆ ತಿಳಿಸಿದರು.
ಈ ವಿಷಯದಲ್ಲಿ ಸಮಗ್ರವಾದ ತನಿಖೆ ನಡೆಸಬೇಕೆಂದೂ ನಿರ್ಲಕ್ಷ್ಯ ತೋರಿದ ವೈದ್ಯರು ಮತ್ತು ಅಧಿಕಾರಿಗಳ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಎಸ್.ಡಿ.ಪಿ.ಐ ಆಗ್ರಹಿಸಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.