ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೋನ ವೈರಸ್ ನಿಂದ ಸಿಲುಕಿಕಿರವ ಅನಿವಾಸಿಗಳನ್ನು ತಾಯ್ನಾಡಿಗೆ ಕರೆತರುವ ಮಿಷನ್ ಪ್ರಗತಿಯಲ್ಲಿದ್ದು,ಇದರ ಒಂದು ಭಾಗವಾಗಿ ನಿನ್ನೆ ದುಬೈಯಿಂದ ಸುಮಾರು 179 ಪ್ರಯಾಣಿಕರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ರಾತ್ರಿ 10 ಗಂಟೆಗೆ ಬಂದಿಳಿದ ಪ್ರಯಾಣಿಕರಲ್ಲಿ 88 ಪುರುಷರು ಹಾಗೂ 84 ಮಹಿಳೆಯರು 7 ಮಕ್ಕಳು ಆ ವಿಮಾನದಲ್ಲಿದ್ದರು. 179 ಪ್ರಯಾಣಿಕರಲ್ಲಿ ಸುಮಾರು 150 ಕ್ಕಿಂತಲೂ ಹೆಚ್ಚು ಜನರು ಆಯಾ ಹೋಟೆಲ್ಗಳನ್ನು ಬುಕ್ ಮಾಡಿದ್ದರು. ನಂತರ ಅವರನ್ನು ಆಯಾ ಹೋಟೆಲ್ ಗಳಿಗೆ ಕಳಿಹಿಸಿಕೊಡಲಾಗಿದೆ.
ಆದರೆ ಸುಮಾರು 30 ರಷ್ಟು ಜನರು ಹೋಟೆಲ್ ಬುಕ್ ಮಾಡದೆ ಮಂಜನಾಡಿ ಅಲ್ ಮದೀನಾ ಹಾಗೂ ದಾರುಲ್ ಇರ್ಶಾದ್ ಮಾಣಿ ಸಂಸ್ಥೆಗಳ ಹಾಸ್ಟೆಲ್ ಆಯ್ಕೆ ಮಾಡಿದ್ದರು.
ಈ ಹಾಸ್ಟೆಲ್ ಗಳಿಗೆ ತೆರಳಲು ಅಧಿಕಾರಿಗಳು ಅವಕಾಶ ನೀಡಲಿಲ್ಲ.. ಮೂವತ್ತರಷ್ಟು ಬರುವ ಪ್ರಯಾಣಿಕರನ್ನು ಏರ್ಪೋರ್ಟ್ ನಲ್ಲಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿದ ಘಟನೆ ವರದಿಯಾಗಿದ್ದು ಇದರಿಂದ ಜಿಲ್ಲಾಡಳಿತ ತಲೆತಗ್ಗಿಸುವಂತಾಗಿದೆ. ಒಂದು ದಿನಕ್ಕೆ 2000/- ರೂಪಾಯಿಯಂತೆ ನೀಡಿ ಹೋಟೆಲ್ ಕ್ವಾರೈಂಟೇನ್ ಸೌಲಭ್ಯವನ್ನು ಪಡೆಯಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಯಾತ್ರಾರ್ಥಿಗಳನ್ನು ಒತ್ತಾಯಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.
ನಂತರ ಸಂಬಂಧಪಟ್ಟವರು ಅಧಿಕಾರಿಗೊಳಡನೆ ವಿಚಾರಿಸಿದಾಗ ಹೋಸ್ಟೆಲ್ ಗಳಲ್ಲಿ ಬೇಕಾದ ವ್ಯವಸ್ಥೆ ಆಗಿಲ್ಲ, ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ, ಅಲ್ಲಗೆ ಕಳುಹಿಸಲಾಗುವುದಿಲ್ಲ ಎಂದಿದ್ದರು ಎಂದು ತಿಳಿದು ಬಂದಿದೆ. ನಂತರ ಸುಮಾರು 2:30 ನಂತರ ಕೆಲವರ ಸಹಾಯದಿಂದ ಅವರಿಗೆ ಬೇಕಾದ ಆಹಾರವನ್ನು ನೀಡಿ ಅವರನ್ನು ಹೋಟೆಲ್ ಗಳಿಗೆನೇ ಕಳುಹಿಸಲಾಗಿದೆ.
ಈ ರೀತಿ ನಡೆಯಲು ಕಾರಣವೇನು? ಹೋಸ್ಟೆಲ್ ಗಳಲ್ಲಿ ಪೊಲೀಸ್ ವ್ಯವಸ್ಥೆ ಡಾಕ್ಟರ್ ಗಳ ವ್ಯವಸ್ಥೆ ಯಾಕೆ ಆಗಿಲ್ಲ??? ಹೋಟೆಲ್ ನೊಂದಿಗಿರುವ ಕೈವಾಡವೇ??? ಜಿಲ್ಲಾಡಳಿತದ ಅವ್ಯವಸ್ಥೆಯೇ? ಇದಕ್ಕೆ ಜಿಲ್ಲಾಡಳಿತ ಉತ್ತರಿಸಬೇಕಾಗಿದೆ.
ಮಂಗಳೂರಿಗೆ ತಲುಪಿ ಅಲ್ಲಿ ಹೋಸ್ಟೆಲ್ ಗಳಿಗೆ ತೆರಳಬೇಕಾದವರಲ್ಲಿ ಹೆಂಗಸರು, ಗರ್ಭಿಣಿಯರು ಇದ್ದರು. ಅವರಿಗೆ ನೀರು, ಆಹಾರ ನೀಡದೆ ಯಾಕಾಗಿ ಕಷ್ಟಪಡುವಂತೆ ಮಾಡಲಾಯಿತು???
ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಹಾಸ್ಟೆಲ್ ಗಳಿಗೆ ಸಿಬ್ಫಂದಿಗಳನ್ನು ನೇಮಕ ಮಾಡಿ ಅಂಬ್ಯುಲೆನ್ಸ್ ಸೇವೆ ಪೋಲೀಸ್ ಸೇವೆ ಎಲ್ಲವನ್ನೂ ಒದಗಿಸಿ ಕೊಟ್ಟ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ದಾರುಲ್ ಇರ್ಶಾದ್ ಮತ್ತು ಅಲ್ ಮದೀನಾ ಹಾಸ್ಟೇಲ್ ಗಳಿಗೆ ನೇಮಕ ಮಾಡಲು ತಡೆಯಾದರೂ ಏನು? ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಕ್ವಾರೈಂಟೇನ್ ವ್ಯವಸ್ಥೆಯ ಪಟ್ಟಿಯಲ್ಲಿ ಈ ಎರಡು ಸಂಸ್ಥೆಯ ಹೆಸರು ಲಿಖಿತಗೊಂಡಿದ್ದರೂ ಸಿಬ್ಬಂದಿಗಳ ನೇಮಕಾತಿ ಮಾಡದಿರಲು ಕಾರಣವೇನು?
ಅದು ಯಾಕೆ ಒಂದು ಸಮುದಾಯದ ಅಡಿಯಲ್ಲಿ ನಡೆಸುವ ಸಂಸ್ಥೆಯೆಂಬ ಕಾರಣವೇ?? ಜಿಲ್ಲಾಡಳಿತದ ಅನುಮತಿ ಮೇರೆಗೆ ಎರಡು ವಿಧ್ಯಾಸಂಸ್ಥೆಗಳು ಕ್ವಾರಂಟೈನ್ ಕೇಂದ್ರಗಳಾಗಿ ಆಯ್ಕೆ ಮಾಡಿ ಅಲ್ಲಿ ಉಳಿದ ಸಜ್ಜೀಕರಣಗಳೆಲ್ಲವನ್ನೂ ಸಿದ್ಧಪಡಿಸಿ ಜಿಲ್ಲಾಡಳಿತ ಮಾಡಬೇಕಾಗಿದ್ದ ಆರೋಗ್ಯಧಿಕಾರಿ ಹಾಗೂ ಪೋಲಿಸ್ ವ್ಯವಸ್ಥಯನ್ನು ಯಾಕೆ ಮಾಡಿಲ್ಲ?? ಈ ರೀತಿಯ ಹಲವು ಪ್ರಶ್ನೆಗಳು ಘಟನೆ ನಡೆದ ಕೆಲವು ಗಂಟೆಗಳಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
ಅಲ್ಲಿ ಮಹಿಳೆಯರು ಗರ್ಭಿಣಿಯರು ಸುಮಾರು 4 ಗಂಟೆಗಳ ಪ್ರಯಾಣ ಬೆಳೆಸಿ, ಅಲ್ಲಿಗೆ ತಲುಪಿದಾಗ ಆಹಾರವಿಲ್ಲದೇ ಚಡಪಡಿಸುತ್ತಿರು ವೀಡಿಯೋಗಳು, ಆಡಿಯೋ ಕ್ಲಿಪ್ಪುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಸಾವಿರಕ್ಕೂ ಮಿಕ್ಕ ಯಾತ್ರಾರ್ಥಿಗಳನ್ನು ಗರ್ಭಿಣಿ ಮಹಿಳೆಯರನ್ನು ಯಾವುದೇ ರೀತಿಯ ತೊಂದರೆಯಾಗದಂತೆ ಸ್ವೀಕರಿಸಿದ ಕೇರಳ ಸರಕಾರದ ವ್ಯವಸ್ಥೆಯನ್ನು ನೋಡಿ ಕರ್ನಾಟಕ ರಾಜ್ಯ ಸರಕಾರಕ್ಕೆ ನಾಚಿಕೆಯಾಗಬೇಡವೇ? ಏರ್ಪೋರ್ಟ್ ಟ್ಯಾಕ್ಸ್ ನೀಡಿ ಟಿಕೇಟ್ ಪಡೆದುಕೊಂಡಿದ್ದರೂ ಗರ್ಭಿಣಿ ಮಹಿಳೆಯರಿಗೆ ವಯಸ್ಕರಿಗೆ ಏರ್ಪೋರ್ಟ್ ನಲ್ಲಿ ಅವರ ಲೆಗೇಜ್ ಗಳನ್ನು ಬಸ್ ಗೆ ತಲುಪಿಸಲು ಸಿಬ್ಬಂದಿಗಳಿಲ್ಲದೆ ಪರದಾಡಬೇಕಾದ ದುರಾವಸ್ಥೆ ಉಂಟಾಯಿತು. ರಾತ್ರಿವರೆಗೂ ಒಂದು ತೊಟ್ಟು ನೀರಿಲ್ಲದೆ ಕಂಗಾಲಾದ ಚಿಕ್ಕ ಪುಟಾಣಿ ಮಕ್ಕಳಿಗೆ ಬಿಸ್ಕೆಟ್ ಕೊಟ್ಟು ಹಸಿವು ತಣಿಸಿದ ಹೃದಯ ವಿದ್ರಾವಕ ಘಟನೆಯೂ ನಡೆಯಿತು. ಕುಟುಂಬದವರಿಗೆ ಅವಕಾಶ ಕಲ್ಪಿಸಿದ್ದರೆ ಅವರು ಊಟದ ವ್ಯವಸ್ಥೆಯಾದರೂ ಮಾಡುತ್ತಿದ್ದರು. ಕೊನೆಗೆ ಒಂದು ತೀರ್ಮಾನಕ್ಕೆ ಬಂದು ಒಂದು ದಿನದ ತಾತ್ಕಾಲಿಕವಾಗಿ ಹೋಟೆಲ್ ಕ್ವಾರೈಂಟೇನ್ ಗೆ ತಲುಪಿಸಲಾಗಿದೆ. ಇಂದು ವ್ಯವಸ್ಥೆ ಸರಿಪಡಿಸುವ ಬಗ್ಗೆ ಭರವಸೆ ನೀಡಲಾಗಿದೆ.
ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಮುದಾಯವನ್ನು ಗುರುತಿಸಿ ಅಕ್ರಮವೆಸಗುತ್ತಿದೆ ಎಂದು ಬಾರೀ ಚರ್ಚೆಗೆ ಆಸ್ಪದವಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ನಡೆದ ಈ ರೀತಿಯ ಕ್ರಮವನ್ನು ಯಾರೂ ಸಹಿಸುವಂತದಲ್ಲ…
ಸಂಪಾದಕೀಯ(ವಿಶ್ವಕನ್ನಡಿಗ ನ್ಯೂಸ್)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.