(www.vknews.com) : ಈಗ ಸೋಷಿಯಲ್ ಮೀಡಿಯಾಗಳಲ್ಲಿ ಬಹುತೇಕ ಎಲ್ಲರೂ ನೋಡಿರಬಹುದು ಕೆಲವೊಂದು ಬಟ್ಟೆ ಅಂಗಡಿಗಳ ಚಿತ್ರ ಹಾಕಿ (ನೋಡಿ ನೊಣ ಓಡಿಸುತ್ತಿದ್ದಾರೆ ಜನರೇ ಇಲ್ಲ) ಎಂಬಿತ್ಯಾದಿ/ ಇನ್ನೂ ಹಲವಾರು ಧ್ವನಿ ಸಂದೇಶದ ಮುಖಾಂತರ ಅಪಹಾಸ್ಯ ಮಾಡುವಂತ್ತದ್ದು ನಡೆಯುತ್ತಿದೆ ಇದರಿಂದ ನಮಗೆ (ಮುಸ್ಲಿಂ) ರಾದವರಿಗೆ ಸಿಗುವ ಲಾಭವೇನು.
ನಮ್ಮ ಉದ್ದೇಶ ಒಂದೇ ನಾವು ಬೇಸರದಲ್ಲಿದ್ದೇವೆ ಪವಿತ್ರ ರಂಝಾನ್ ತಿಂಗಳಲ್ಲಿ ಮಸೀದಿಯಲ್ಲಿ ಯಾವುದೇ ಪುಣ್ಯಕಾರ್ಯ ಒಟ್ಟಾಗಿಮಾಡುವಂತಿಲ್ಲ ವರ್ಷಕ್ಕೆ ಎರಡೇ ಸಲ ಬರುವ ಈದ್ ನಮಾಝ್ ಮಸೀದಿಯಲ್ಲಿ ಮಾಡುವಂತಿಲ್ಲ ಈ ಕಾರಣದಿಂದ ನಾವು ಹೊಸ ವಸ್ತ್ರಗಳನ್ನು ಧರಿಸಿ ಸಂತೋಷ ಪಡುದರಲ್ಲಿ ನಯಾಪೈಸೆ ಅರ್ಥವಿಲ್ಲ ಅದು ಬಿಟ್ಟು ಯಾವುದೇ ಧರ್ಮದ ಬಟ್ಟೆ ವ್ಯಾಪಾರಿಗಳಲ್ಲಿ ನಮಗೆ ಧ್ವೇಷವಿಲ್ಲ ಇರಬಾರದು ವ್ಯಾಪಾರಿಗಳು ಮಳಿಗೆ ತೆರೆದು ಇರುದು ಅವರ ವ್ಯಾಪಾರಕ್ಕೋಸ್ಕರ ಅವರಿಗೆ ವ್ಯಾಪಾರ ಆಗಲಿ ಬಿಡಲಿ ನಮಗೆ ಅವರನ್ನು ಅಪಹಾಸ್ಯ ಮಾಡುವ ಅಧಿಕಾರ ಇಲ್ಲವೇ ಇಲ್ಲ ನಾವು ಈ ಸಲದ ಈದ್ ಗೆ ಹೊಸಬಟ್ಟೆ ತೊಡುದಿಲ್ಲ ಅಷ್ಟೇ ಯಾವುದೇ ಧರ್ಮದ ವ್ಯಾಪಾರಸ್ತರಿಗೆ ಕೆಲವು ಮುಸ್ಲಿಮರ (ಇದರಲ್ಲಿ ಒಳ್ಳೆಯ ತಿಳುವಳಿಕೆ ಇರೂವವರೂ ಇದ್ದಾರೆ) ವರ್ತನೆಯಿಂದ ಮನಸ್ಸಿಗೆ ನೋವು ಬೇಸರ ಆಗಿದ್ದಲ್ಲಿ ಅವರ ಪರವಾಗಿ ಈ ಪವಿತ್ರ ರಂಝಾನ್ ತಿಂಗಳಲ್ಲಿ ನಾನು ಮನಪೂರ್ವಕ ಕ್ಷಮೆ ಯಾಚಿಸುತ್ತೇನೆ ನೀವೂ ಕ್ಷಮಿಸಿಬಿಡಿ
– ಝಾಕಿರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.