ಚಿಕ್ಕಬಳ್ಳಾಪುರ(ವಿಶ್ವಕನ್ನಡಿಗ ನ್ಯೂಸ್): ಕೋರೋಣ ವೈರಸ್ ನ ಲಾಕ್ ಡೌನ್ ನಿಂದಾಗಿ ಕೆಲವರಿಗೆ ಹೇಳಿಕೊಳ್ಳಲಾಗದಂತಹ ತೊಂದರೆ ಉಂಟಾಗಿದೆ. ಅದರಲ್ಲೂ ಬಡ ಕುಟುಂಬಗಳಿಗೆ ಮಾಡಲು ಕೆಲಸವಿಲ್ಲದೇ, ಏನನ್ನಾದರೂ ಖರೀದಿಸಲು ಸಹ ಹಣವಿಲ್ಲದೇ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನರಿತ 9ನೇ ವಾರ್ಡಿನ ಕೌನ್ಸಿಲರ್ ಮಟಮಪ್ಪ ರವರು ಹಾಗೂ ಎಎನ್ಎಲ್ ತರಕಾರಿ ಮಂಡಿ ನಿರಂಜನ್ ರವರು ಸಹಾಯ ಹಸ್ತ ದೊಂದಿಗೆ ಹಾಗೂ ಮಟಮಪ್ಪ ರವರ ಸ್ನೇಹಿತರು ಸೇರಿ 9ನೇ ವಾರ್ಡ್ ಹಾಗೂ ಸುತ್ತಮುತ್ತಲಿನ ಇತರೆ ವಾರ್ಡ್ ನ ಎಲ್ಲಾ ಮನೆಯವರಿಗೆ ತರಕಾರಿ ಕಿಟ್ ಗಳನ್ನು ವಿತರಿಸಿದರು. ಈ ರೀತಿಯ ತರಕಾರಿ ಕಿಟ್ ಹಂಚಿಕೆ ಕಳೆದ 3 ದಿನಗಳಿಂದ ನಡೆಯುತ್ತಿದ್ದು, ಇದೇ ರೀತಿ ಮುಂದುವರೆಸಲಾಗುವುದು ಎಂದು ಮಟಮಪ್ಪ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮುನೇಗೌಡ, ಪೆಟ್ರೋಲ್ ಬಂಕ್ ಭಾಸ್ಕರ್, ಟಿ.ವಿ. ಚಂದ್ರಶೇಖರ್, ಸೋಮಶೇಖರ್, ರಮೇಶ್ ಬಾಬು, ಸುರೇಶ್, ಸುದ್ದಳ್ಳಿ ಸುರೇಶ್, ಮುಬಾರಕ್, ಇಸ್ರೇಲ್ ನಾರಾಯಣ ಸ್ವಾಮಿ, ಸತೀಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.