ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಗರ್ಭಿಣಿ ತಾಯಿ ಸಹಿತ ಉಳಿದ ಎಲ್ಲಾ ಯಾತ್ರಿಕರನ್ನು ಸರಿ ಸುಮಾರು ನಾಲ್ಕು ಗಂಟೆಗಳ ಕಾಲ ಅಂದರೆ ಮಧ್ಯರಾತ್ರಿಯವರೆಗೆ ಯಾವುದೇ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಮುಂದಾಗದೇ ನೀಚ ಕಾರ್ಯವನ್ನು ನಡೆಸಿದ ಜಿಲ್ಲಾಡಳಿತ.
ಯಾವ ಕಾರಣಕ್ಕಾಗಿ ದುಬೈಯಿಂದ ಮಂಗಳೂರಿಗೆ ವಿಮಾನ ವ್ಯವಸ್ಥೆಯನ್ನು ಮಾಡಲು ಒಪ್ಪಿಗೆಯನ್ನು ನೀಡಿದ್ದೀರಿ. ನಿಮ್ಮಿಂದ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಲು ಅಸಾಧ್ಯ ಮಾತು ಎಂದು ಮುಂಚೇನೆ ಅರಿವಿದ್ದ ಕಾರಣ ಅಲ್ ಮದೀನ ಮತ್ತು ದಾರುಲ್ ಇರ್ಷಾದ್ ಎರಡು ಸಂಸ್ಥೆಗಳನ್ನು ಕ್ವಾರಂಟೈನ್ ಗೆ ಬಿಟ್ಟುಕೊಡಲು ಸಿಧ್ಧರಿದ್ದೇವೆ ಎಂದು ವಾರದ ಹಿಂದೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದದ್ದು.
ಸಾವಲ್ಲೂ ರಾಜಕೀಯ ಮಾಡೋರು ಮತ್ತೆಲ್ಲಿಗೆ ನಿಮ್ಮಿಂದ ಉತ್ತಮವಾದದನ್ನು ಬಯಸುವುದು. ಮೃತದೇಹನ್ನು ಬೀದಿಗಳಲ್ಲಿ ಅಲೆದಾಡುವಂತೆ ಮಾಡಿದ್ದು ಇದೇ ಜಿಲ್ಲಾಡಳಿತವೇ ತಾನೇ…? ಯಾತ್ರಿಕರು ನಿಸ್ಸಹಾಯಕರಾಗಿದ್ದಾರೆ.ಯಾಕೆ..? ತನ್ನ ರಾಜ್ಯಕ್ಕಾಗಿ ತನಗೆ ಕ್ವಾರಂಟೈನ್ ಕಡ್ಡಾಯ ವಾದುದರಿಂದ. ಎಲ್ಲವೂ ಸರಿಯಾಗಿಯೇ ಇರಬಹುದೆಂಬ ಇಚ್ಛೆಯಿಂದ ಹೊರಟು ಬಂದ ಪ್ರವಾಸಿ ಯಾತ್ರಿಕರಿಗೆ ಈ ರೀತಿಯಾಗಿ ನಡೆದುಕೊಂಡದ್ದು ಸರಿಯಲ್ಲ.
ಇವರು ನೇರವಾಗಿ ಮನೆಗೆ ಹೊರಟು ಹೋಗುವ ಎಲ್ಲ ರೀತಿಯ ಸಹಕಾರ ದೊರೆಯುತ್ತಿತ್ತು. ಮಂಗಳೂರಿನ ಜನಸಾಮನ್ಯರಲ್ಲಿ ಎಂದಿಗೂ ಯಾರೂ ಅಸಹಾಯಕತೆ ಸ್ಥಿತಿಯಲ್ಲಿರುವುದು ಇದುವರೆಗೂ ಕಂಡುಬಂದಿಲ್ಲ ಎಲ್ಲರೂ ಒಬ್ಬರಿಗೊಬ್ಬರು ಸಹಾಯ ಹಸ್ತವನ್ನು ಚಾಚುವ ಮೂಲಕ ಕೃತಜ್ಞರಾಗಿದ್ದಾರೆ.
ಇಲ್ಲಿ ಅಧಿಕಾರ ನಡೆಸುತ್ತಿರುವವರಿಂದ ಅನ್ಯಾಯವಾಗಿದೆ. ಈ ಕಾರಣಕ್ಕಾಗಿಯೇ ಅಲ್ಲವೇ ವಾರದ ಹಿಂದೆ ಮದ್ಯದಂಗಡಿಯನ್ನು ತೆರೆಯುವ ಮೂಲಕ ಮಹತ್ತರ ಸಾಧನೆ ಎಂಬಂತೆ ಬೇಜವಾಬ್ದಾರಿತನತ ರೂಪುರೇಷೆಯನ್ನು ಹೊರ ತಂದಿದ್ದು. ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಎಲ್ಲ ಘಟನೆಗಳಿಗೆ ಕಾರಣಕರ್ತರು
ಸಫ್ವಾನ್ ಕೂರತ್ -ಚಿಗುರೆಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.