ಬೆಂಗಳೂರು(www.vknews.in): ಲಾಕ್ ಡೌನ್ ನಿಂದ ದಿನ ನಿತ್ಯ ಆದಾಯ ಇಲ್ಲದೆ ಸಂಕಷ್ಟ ಅನುಭವಿಸಿದ ಶ್ರಮಿಕ ವರ್ಗ ಆಟೋ ಚಾಲಕರಿಗೆ ರಾಜ್ಯ ಸರಕಾರ 5000 ಸಾವಿರ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಆದರೆ ಬಹುತೇಕ ಆಟೋ ಚಾಲಕರು ಬ್ಯಾಡ್ಜ್ ರಹಿತರಾಗಿದ್ದು ಸರಕಾರದ ಪರಿಹಾರ ಧನ ಪಡೆಯಲು ಮಾಡಿದ ಮಾರ್ಗ ಸೂಚಿಯಲ್ಲಿ ಬ್ಯಾಡ್ಜ್ ಹೊಂದಿದವರು ಮಾತ್ರ ಪರಿಹಾರಕ್ಕೆ ಅರ್ಹರು ಎಂಬ ನಿಬಂಧನೆ ಮಾಡಿದೆ, ಈ ನಿಬಂಧನೆಯಿಂದ ಬಹುತೇಕ ಚಾಲಕರು ಪರಿಹಾರ ಧನದಿಂದ ವಂಚಿತವಾಗುವ ಸಾಧ್ಯತೆ ಇದೆ, ಅನಿವಾರ್ಯ ಕಾರಣದಿಂದ ರಿಕ್ಷಾ ಚಾಲನೆ ಮಾಡಿ ಬದುಕು ಸಾಗಿಸುವ ವೃತ್ತಿಯಲ್ಲಿರುವ ಬಹು ದೊಡ್ಡ ಅಸಂಘಟಿತ ಕಾರ್ಮಿಕ ವರ್ಗದ ಜೀವನೋಪಾಯವೇ ಲಾಕ್ ಡೌನ್ ನಿಂದ ದುಸ್ತರವಾಗಿದೆ.
ಲಾಕ್ ಡೌನ್ ಪ್ರಾರಂಭವಾಗಿ 50 ದಿವಸ ಕಳೆದು ಹೋಗಿವೆ ಈ 50 ದಿವಸದ ಕನಿಷ್ಠ ಆದಾಯ ಕಳೆದು ಕೊಂಡ ವರ್ಗವಾಗಿದೆ ಆಟೋ ಚಾಲಕರು. ಆಟೋ ಚಾಲಕರಿಗೂ ಕನಸುಗಳಿವೆ ಎಲ್ಲಾ ಕನಸುಗಳನ್ನು ಹೃದಯದಲ್ಲಿ ಅದುಮಿಟ್ಟು ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕನಿಷ್ಠ ಆದಾಯದ ಮೂಲಕ ದಿನದೂಡುತ್ತಿರುವ ಆಟೋ ಚಾಲಕರಿಗೆ ಸರಕಾರದ ಕನಿಷ್ಠ ಧನ ಸಹಾಯದ ನೆರವು ಪಡೆಯಲು ಚಾಲನಾ ಅನುಜ್ಞಾ ಪತ್ರವಿರುವ ಮತ್ತು ಆಟೋ ಓಡಿಸುವುದನ್ನೇ ಕಾಯಕವಾಗಿಸಿದ ಎಲ್ಲರಿಗೂ ಸಿಗುವಂತಾಗಬೇಕು. ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಚಾಲಕರ ಇಂದಿನ ಈ ಸನ್ನಿವೇಶವನ್ನು ಅರ್ಥ ಮಾಡಿ ಬ್ಯಾಡ್ಜ್ ಬೇಕು ಎಂಬ ನಿಯಮವನ್ನು ರದ್ದು ಮಾಡಬೇಕು ಹಾಗೂ ಚಾಲಕರು ಪರಿಹಾರ ಧನ ಪಡೆಯಲು ಸರಕಾರ ಮಾಡಿದ ಮಾರ್ಗಸೂಚಿಯನ್ನು ಸರಳಗೊಳಿಸಿ ಪ್ರತೀ ತಾಲೂಕಿಗೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಮಾತ್ರವಲ್ಲ ಘೋಷಿತ ಪರಿಹಾರ ಧನ ಶೀಘ್ರವಾಗಿ ಚಾಲಕರ ಕೈ ಸೇರುವಂತೆ ಮಾಡಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಕೆ ಸರಕಾರವನ್ನು ಒತ್ತಾಯಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.