(www.vknews.com) : ಕೋವಿಡ್19 ಸೋಂಕು ಅಥವಾ ಅದರ ಕುರುಹುಗಳು ಇಲ್ಲದ ಪ್ರಯಾಣಿಕರು ,ಆರೋಗ್ಯವಂತರು ವಿಮಾನಯಾನ ಮಾಡಿದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗುವುದನ್ನು ನಾವು ಕಂಡೆವು.ಯಾಕೆ ಹೀಗಾಯಿತು? ಆ ನಿಟ್ಟಿನಲ್ಲಿ ಕೆಲವು ಮಾಹಿತಿಗಳು. ವಿಮಾನಯಾನ ಮಾಡುವವರು ಕೋವಿಡ್ 19 ವೈರಸ್ ಸಂಬಂಧಪಟ್ಟಂತೆ ಕೆಲವು ಮೂಲಭೂತ ಎಚ್ಚರಿಕೆಯನ್ನು ವಹಿಸಲೇಬೇಕು.
ಅದರಲ್ಲಿ ಮುಖ್ಯವಾಗಿ ನಾವು ವಿಮಾನದ ಒಳಗೆ ಪ್ರವೇಶ ಮಾಡಿದ ಮೇಲೆ ನಾಲ್ಕೈದು ಗಂಟೆಗಳ ತನಕ ವಿಮಾನದ ಒಳಗಡೆ ಕುಳಿತು ಕೊಳ್ಳಬೇಕಾಗುತ್ತದೆ. ವಿಮಾನದಲ್ಲಿ ಸಾದಾ ಪ್ರಯಾಣಿಕರಿಗೆ ಸ್ಥಳಾವಕಾಶ ತುಂಬಾ ಕಡಿಮೆ ಇರುತ್ತದೆ. ಸ್ವಲ್ಪವೂ ಗಾಳಿ ಹೊರಗೆ ಹೋಗದಂತೆ ವಿಮಾನವನ್ನು ತಯಾರು ಮಾಡಲಾಗಿದೆ. ಮತ್ತು ಅದರಲ್ಲಿ ಇರುವ ಹವಾ ನಿಯಂತ್ರಣ(A.C) ನಮ್ಮ ಮನೆ,ಕಚೇರಿ ,ಮಾಲ್ ಇತರ ಕಡೆ ಇರುವಂತೆ ಇರುವುದಿಲ್ಲ. ಆದರಿಂದ ಅತ್ಯುತ್ತಮವಾದ ಮಾಸ್ಕ್ ಹಾಗು ಗ್ಲೌಸ್ ಗಳನ್ನು ಬಳಸುವುದು ಉತ್ತಮ.ಕಡಿಮೆ ಕ್ರಯದ ಕಳಪೆ ಮಾಸ್ಕ್ ದರಿಸಲೇಬಾರದು.
ಒಮ್ಮೆ ಮಾಸ್ಕ್ ಮತ್ತು ಗ್ಲೌಸ್ ಬಳಸಿದ ಮೇಲೆ ನಾವು ಕೋವಿಡ್ 19 ರೋಗಿಗಳನ್ನು ಉಪಚರಿಸುವ ಡಾಕ್ಟರ್ ಗಳ ಹಾಗೆ ಏರ್ ಪೋರ್ಟಿಂದ ಹೊರ ಬರುವವರೆಗೆ ಕಟ್ಟೆಚ್ಚರದಿಂದ ಇರಬೇಕು. ವಿಮಾನದಲ್ಲಿ ಸಿಗುವ ನೀರು ಆಹಾರಗಳನ್ನು ಬಳಸದೇ ಇರುವುದು ಒಳ್ಳೆಯದು . ಏಕೆಂದರೆ ನಾವು ಆಹಾರ ಅಥವಾ ನೀರನ್ನು ಸೇವಿಸುವಾಗ ಮಾಸ್ಕನ್ನು ತೆಗೆಯಬೇಕಾಗಿ ಬರುತ್ತದೆ.ವಿಮಾನದಲ್ಲಿ ಒಬ್ಬ ಕೋವಿಡ್19 ಸೋಂಕಿತರು ಇದ್ದರೂ ಅದು ಎಲ್ಲರಿಗೂ ಹರಡುವ ಸಾಧ್ಯತೆಯೇ ಹೆಚ್ಚು. . ವಿಮಾನದ ಒಳಗಡೆ ಸೋಶಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡುವುದು ಸುಲಭವಲ್ಲ. ವಿಮಾನದ ಒಳಗಡೆ ಇರುವ ಶೌಚಾಲಯ ಬಳಸದೇ ಇರುವುದು ಒಳ್ಳೆಯದು.
ಮೊದಲೇ ಆಹಾರ ನೀರು ಬೇಕಾದಷ್ಟು ಸೇವಿಸಿ ಮತ್ತೆ ಯಾವುದನ್ನೂ ಚಿಂತಿಸದೆ,ಕೇವಲ ಕೋವಿಡ್ 19 ಬಗ್ಗೆ ಸದಾ ಜಾಗೃತೆ ವಹಿಸಿ ಪ್ರಯಾಣ ಮಾಡಿದರೆ ನಾವು ಕೋವಿಡ್ 19 ನಿಂದ ಪಾರಾಗ ಬಹುದು. ಈ ಸಮಯದಲ್ಲಿ ಕಣ್ಣು ಮೂಗು ಬಾಯಿ ಮೊದಲಾದ ಜಾಗದಲ್ಲಿ ನಮ್ಮ ಕೈಯನ್ನು ಒರೆಸುವುದು ಮುಟ್ಟುವುದು ಮಾಡಲೇ ಬಾರದು. ವಿಮಾನಯಾನ ಮುಗಿದ ಬಳಿಕ ಹೊರಗೆ ಬಂದು ನೀರಿನ ವ್ಯವಸ್ಥೆ ಇದ್ದರೆ ತಕ್ಷಣ ಸಾಬೂನು ಹಾಕಿ ಕೈ ಮುಖವನ್ನು ತೊಳೆದು ನಾವು ಹಾಕಿದ ಮಾಸ್ಕ್ ಮತ್ತು ಗ್ಲೌಸನ್ನು ತೆಗೆದು ಹೊಸ ಮಾಸ್ಕ್ ಮತ್ತು ಗ್ಲೌಸನ್ನು ಬಳಸಬೇಕು.
ಹೊರಗೆ ಬಂದ ತಕ್ಷಣ ಸೋಶಿಯಲ್ ಡಿಸ್ಟೆನ್ಸ್ ನಿರ್ವಹಣೆ ಮಾಡುವುದನ್ನು ಮರೆಯಬಾರದು ವಿಮಾನದ ಒಳಗೆ ಇರುವಾಗ ಮಾತನಾಡದೆ ಮೌನವ್ರತ ಪಾಲಿಸಬೇಕು. ಇಷ್ಟು ಮಾಡಿದರೆ ನಮಗೆ 99% ಕೋವಿಡ್ ಸೋಂಕು ಆಗದಂತೆ ತಡೆಯಬಹುದು.
ವಿಮಾನಯಾನ ಮಾಡುವ ಮೊದಲು ಹಸಿವು ಆಗದ ರೀತಿಯ ಪ್ರೊಟೀನ್ ಅಂಶಗಳು ಜಾಸ್ತಿ ಇರುವ ಆಹಾರ ಸೇವನೆ ಮಾಡುವುದು ಒಳ್ಳೆಯದು. ಯಾರಿಗೂ ಕೋವಿಡ್ ಸೋಂಕು ಆಗದಂತೆ ಎಲ್ಲರೂ ಜಾಗ್ರತೆಯಲ್ಲಿ ಪ್ರಯಾಣ ಮಾಡೋಣ ಕೋವಿಡ್ 19 ಸೋಂಕನ್ನು ಓಡಿಸೋಣ. ಕೋವಿಡ್ ಚೀನಾದ ವುಹಾನ್ ಮಾರ್ಕೆಟ್ಟಿಂದ ಲೋಕದೆಲ್ಲಡೆ ಹರಡಿದ್ದು ವಿಮಾನ ಮೂಲಕ.ಕೋವಿಡ್ 19 ವೈರಸ್ ನ ಅಂಬಾಸಿಡರ್ ಆಗಿದೆ ವಿಮಾನ ಎಂಬುದು ನೆನಪಿರಲಿ.
ಸಾಧ್ಯವಾದಷ್ಟು ಒಂದೂರಿಂದ ಇನ್ನೊಂದೂರಿಗೆ ಪ್ರಯಾಣ ಮಾಡದಿರುವುದೇ ಸೂಕ್ತ.ಇದನ್ನೇ ಪ್ರವಾದಿಗಳು 1400 ವರ್ಷಗಳ ಹಿಂದೆ ಹೇಳಿದ್ದು.ಸಾಂಕ್ರಾಮಿಕ ರೋಗ ಬಂದಾಗ ನೀವು ಎಲ್ಲಿದ್ದೀರೋ ಅಲ್ಲೇ ಇರಿ ಎಂದು.
– ಅಕ್ಬರ್ ಅಲಿ ಬಜ್ಪೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.