ಕಾಠ್ಮಂಡು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೋನವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ನಮ್ಮ ದೇಶದಲ್ಲಿ ವೈರಸ್ ಹರಡಲು ಭಾರತೀಯರು ಕಾರಣ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮ ದೂರಿದ್ದಾರೆ.
ವಿವಾದಿತ ಭಾರತೀಯ ಮೂರು ಭೂ ಪ್ರದೇಶವನ್ನು ತನ್ನದೆಂದು ಹೇಳಿಕೊಂಡು ತನ್ನ ಭೂಪಟದಲ್ಲಿ ನೇಪಾಳ ತಂದಿರುವ ಬದಲಾವಣೆಯನ್ನು ಸಮರ್ಥಿಸಿಕೊಂಡ ಬೆನ್ನಲ್ಲೇ ಭಾರತಕ್ಕೆ ಇನ್ನೊಂದು ಆಘಾತ ನೀಡಿದ್ದಾರೆ.
ಸಂಸತ್ತನ್ನು ಉದ್ದೇಶಿಸಿ ಮಾತಾನಾಡುತ್ತಾ ಭಾರತದ ವೈರಸ್ ಚೀನಾ, ಇಟಲಿ ವೈರಸ್ ಗಿಂತ ಮಾರಣಾಂತಿಕವಾಗಿದೆ. ಹೆಚ್ಚು ಜನರು ವೈರಸ್ ಗೆ ತುತ್ತಾಗಿದ್ದಾರೆ, ಅಕ್ರಮವಾಗಿ ಭಾರತದ ಮೂಲಕ ನೇಪಾಳಕ್ಕೆ ಆಗಮಿಸುವವರು ವೈರಸ್ ಹರಡುತ್ತಿದ್ದಾರೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.