(www.vknews.com) : ಜಿಲ್ಲೆಯ ಹಲವಾರು ಕಡೆ ರಂಜಾನ್ ಕಿಟ್ ಮತ್ತು ಕೋವಿಡ್ ಕಿಟ್ ವಿತರಣೆ ನಡೆಸುತ್ತಿರುವ “ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್,” “ಜಿಲ್ಲಾ NGO ಕಾರ್ಡಿನೇಷನ್ ಕಮಿಟಿ” ಸಹಯೋಗದೊಂದಿಗೆ ಇಂದು ಮಂಗಳೂರಿನ ಕಸಬಾ ಬೆಂಗರೆ ಮೊಹಿಯುದ್ದೀನ್ ಜುಮಾ ಮಸ್ಜಿದ್ ನ ಅರ್ಹ ಬಡ ಕುಟುಂಬಗಳಿಗೆ ನೀಡಲು 150 ರಂಜಾನ್ ಕಿಟ್ಗಳನ್ನು ಜಮಾತ್ ಗೆ ಹಸ್ತಾಂತರಿಸಲಾಯಿತು.
ಈಗಾಗಲೇ ದ.ಕ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ 1500 ರಂಜಾನ್ ಕಿಟ್ ಮತ್ತು ಎಲ್ಲಾ ಜಾತಿ ಧರ್ಮದವರಿಗೆ 1550 ಕೋವಿಡ್ ಕಿಟ್ ನ್ನು ವಿತರಿಸಿದ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಒಟ್ಟು 3000 ಕ್ಕಿಂತ ಹೆಚ್ಚು ಅರ್ಹ ಕುಟುಂಬಗಳಿಗೆ ದಿನಬಳಕೆಯ ದಿನಸಿ ವಸ್ತುಗಳ ಕಿಟ್ ಗಳನ್ನು ನೀಡಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿದೆ.
ಕಸಬಾ ಬೆಂಗರೆ ಪ್ರದೇಶದಲ್ಲಿ ಹಿದಾಯ ಫೌಂಡೇಶನ್ ಹಲವಾರು ವರ್ಷಗಳಿಂದ ಊರಿನ ಕೆಲ ಅರ್ಹ ಕುಟುಂಬಗಳಿಗೆ ಮಾಸಿಕ ರೇಷನ್ ಮತ್ತು ನಿರಂತರ ವೈದ್ಯಕೀಯ ನೆರವು ನೀಡುತ್ತಾ ಬಂದಿದೆ.
ಈ ಬಗ್ಗೆ ಮಾತನಾಡಿದ ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, “ಜಿಲ್ಲೆಯ ಆಯಾ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಮತ್ತು ಜಮಾತ್ ಗಳನ್ನು ನಮ್ಮ ಸಂಸ್ಥೆಯ ಸದಸ್ಯರು ಸರ್ವೇ ನಡೆಸಿದ್ದರಿಂದ ಅರ್ಹ ಫಲಾನುಭವಿ ಕುಟುಂಬಗಳಿಗೆ ರಂಜಾನ್ ಕಿಟ್ ತಲುಪಿಸಲು ನಮಗೆ ಸಾಧ್ಯವಾಗಿದೆ. ನಮಗೆ ಕಷ್ಟದಲ್ಲಿರುವ ಕುಟುಂಬಗಳನ್ನು ತಿಳಿಸಿದಾಗ ತಕ್ಷಣ ಸಾಧ್ಯವಾದಷ್ಟು ನೆರವುಗಳನ್ನು ನಾವು ನೀಡಿದ್ದೇವೆ. ಜಿಲ್ಲೆಯ ಹಲವು ಕಡೆಗಳಿಗೆ ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಕುಟುಂಬಗಳಿಗೆ ಈದ್ ದಿನದಂದು ಈದ್ ಕಿಟ್ ನೀಡುವ ಬಗ್ಗೆ ಚಿಂತನೆಯು ನಡೆಯುತ್ತಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಹೆಚ್.ಕೆ. ಖಾಸಿಂ ಅಹ್ಮದ್, ಝಿಯಾವುದ್ದೀನ್ ಹಿದಾಯ ಫೌಂಡೇಶನ್, ಅಲ್ತಾಫ್ ಬಿ-ಹ್ಯೂಮನ್ , ಟೀಂ ಬ್ರದರ್ಸ್ ನ ನಿಶಾನ್ ಮತ್ತು ಶಾಬಿಕ್ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.