ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಮಂಗಳೂರು ಇದರ ವತಿಯಿಂದ ಸುಮಾರು 250 ಈದ್ ಕಿಟ್ ಗಳ ಜತೆಗೆ ಸಣ್ಣ ಒಂದು ನಗದು ಮೊತ್ತವನ್ನು ಒಳಗೊಂಡವುಗಳ ವಿತರಣೆಯ ಸರಳ ಕಾರ್ಯಕ್ರಮವನ್ನು 20.05.2020 ಮತ್ತು ರಮಝಾನ್ ಚಾಂದ್ 27 ರ ಬುಧವಾರ ಪೂರ್ವಾಹ್ನ 10:30 ಕ್ಕೆ ನಗರದ ಕಂಕನಾಡಿಯಲ್ಲಿರುವ ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಇದರ ಆಡಳಿತ ಕಛೇರಿಯಲ್ಲಿ ಹಮ್ಮಿ ಕೊಳ್ಳಲಾಯಿತು.
ಅವಶ್ಯಕತೆಯುಳ್ಳ ಎಲ್ಲಾ ಅರ್ಹ ಜನಗಳಿಗೆ, ಕಿಟ್ ಗಳನ್ನು ತಲುಪಿಸುವ ಹೊಣೆಯನ್ನು ನಿರ್ವಹಿಸಲು ಬಿ. ಸಿ. ಸಿ. ಐ. ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸ್ವತಹ ಮುತುವರ್ಜಿ ವಹಿಸಿದ್ದು ಅವರ ಮೂಲಕ ಅತ್ಯಂತ ಅರ್ಹ ಕುಟುಂಬಗಳನ್ನು ಗುರುತಿಸಿ ವಿತರಿಸಲು ನಿರ್ಧರಿಸಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಇದರ ಅಧ್ಯಕ್ಷರಾದ ಹಾಜಿ.ಎಸ್.ಎಂ. ರಶೀಧ್ ಅಲ್ಲದೆ,ಉಪಾಧ್ಯಕ್ಷರಾದ ಅಬ್ದುಲ್ ರವೂಪ್ ಪುತ್ತಿಗೆ ಕಾರ್ಯದರ್ಶಿಯವರಾದ ನಿಸಾರ್ ಫಕೀರ್ ಮಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಮ್ತಾಝ್ ಅಲಿ ಬಿ.ಎಮ್., ಮಹಮ್ಮದ್ ಹಾರಿಸ್, ಮಹಮ್ಮದ್ ಶರೀಪ್, ಆಸಿಪ್ ಸೂಫಿಖಾನ್ ಮುಂತಾದವರು ಉಪಸ್ಥಿತರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.