ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಈ ದಿನ ಅದು 2010 ಮೇ ತಿಂಗಳು 22 ನೇ ತಾರೀಕು ಕರಾವಳಿ ಜನತೆಯನ್ನು ಕಣ್ಣೀರಲ್ಲಾಗಿಸಿದ ಮಹಾ ದುರಂತದ ದಿನ!
ಜನರು ನಿದ್ದೆಗಣ್ಣಿನಿಂದ ಎದ್ದೇಳುವ ಸಮಯ..ಕಿವಿಗೆ ಅಪ್ಪಳಿಸಿದ್ದು ನಂಬಲಾಗದ ಕರಾಳ ಸುದ್ದಿ, ಕಡಲಿನಾಚೆಯ ಮರುಭೂಮಿಯಲ್ಲಿ ಎಲ್ಲವನ್ನೂ ಸಹಿಸಿ ತಾಯ್ನಾಡಿನ ಉನ್ನತಿಗಾಗಿ ದುಡಿದ ಸುಮಾರು 158 ಅನಿವಾಸಿಗರ ಜೀವನವೇ ಕೊನೆಯಾದ ದಿನ.
ಮಗನ ಬರುವಿಕೆಯು ಕಾದು ವಾರಗಳ ಮೊದಲೇ ಸಂತೋಷದ ಮುಗುಳ್ನಗೆಯೊಂದಿಗೆ ಕಾದು ನಿಂತ ತಂದೆ ತಾಯಿ, ತನ್ನ ಕನಸಿನ ಯುವರಾಜ ಎಲ್ಲವೂ ಅವನೇ ಎಂದು ಮನಸ್ಸಲ್ಲಿ ಪ್ರೀತಿಯ ಹೂಗುಚ್ಚಗಳನ್ನು ಕೊಂಡು ನಡೆದ ಹೆಣ್ಣು ತನ್ನ ಪ್ರಿಯತಮನಿಗೆ ಕಾದು ನಿಂತ ಸನ್ನಿವೇಷ, ತಂದೆಯನ್ನು ಕಾಣುವಾಗ ಅಪ್ಪಾ ಎಂದು ತಬ್ಬಿಹಿಡಿದು ಮುತ್ತ ಕೊಡಲು ಏರ್ಪೋರ್ಟಲ್ಲಿ ಕಾದು ನಿಂತ ಪುಟ್ಟ ಕಂದಮ್ಮಗಳು…
ಅಪ್ಪಾ ಎಂದು ಟೆಲಿಫೋನಲ್ಲಿ ಮಾತ್ರ ಮಾತುಗಳನ್ನಾಡಿದ ಆ ಪ್ರೀತಿಯ ಶಬ್ಧಗಳ ಮುಖವನ್ನೊಮ್ಮೆ ಕಾಣಲು, ಆ ದಿನ ಬಂದೊದಗಿದೆ ಎಂಬ ಉತ್ಸಾಹದಿ ಕಾತುರದಿಂದ ಕಾದು ನಿಂತ ತಂದೆ…,
ಎಲ್ಲವೂ ವಿಧಿಯಾಟದಂತೆ ಅದೇನೋ ಇನ್ನು ದುಬೈಯಿಂದ ಹೆೊರಟ ಏರ್ ಇಂಡಿಯಾ ವಿಮಾನವು ಮಂಗಳೂರು ವಿಮಾನ ನಿಲ್ಧಾಣ ತಲುಪಲು ಇನ್ನೇನು ನಿಮಿಷಗಳು ಅನ್ನುತ್ತಿರುವಂತೆ 158 ಅನಿವಾಸಿಗರನ್ನು ವಿಧಿಲೀಲೆ ಬಲಿತೆಗೆಯಿತು.
ಇಂದಿಗೆ ಹತ್ತು ವರ್ಷಗಳು ಕಳೆದವು, ಮರೆಯಲು ಸಾಧ್ಯವಿಲ್ಲ, ಅಲ್ಲಿ ಕೊನೆಗೊಂಡದ್ದು 158 ಅನಿವಾಸಿಗರು ಮಾತ್ರವಲ್ಲ…. ಆಸೆ ಅಭಿಲಾಷೆಗಳನ್ನು ಕನಸು ಕಂಡ ಅದೆಷ್ಟೋ ಕುಟುಂಬಗಳಾಗಿತ್ತು… ಇಂತಹ ದುರಂತಗಳು ಇನ್ನೆಂದೂ ನಡೆಯದಿರಲಿ, ಅವರನ್ನು ನಮ್ಮನ್ನೂ ಅವನ ಸ್ವರ್ಗೀಯ ಭವನದಲ್ಲಿ ಒಂದುಗೂಡಿಸಲಿ ಎಂದು ಆಶಿಸುತ್ತಾ…
✍️ಕೆಎಸ್ಎಮ್ ಎಲಿಮಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.