(www.vknews.com) : ಒಂದು ಚಿಕ್ಕ ಹಳ್ಳಿ ಹಳ್ಳಿಯಲ್ಲಿ ಒಂದು ಚಿಕ್ಕ ಕುಟುಂಬ ವಾಸವಾಗಿತ್ತು. ಕುಟುಂಬದಲ್ಲಿ ತಂದೆ ರಾಮಪ್ಪ ತಾಯಿ ಸಂಗವ್ವ ಒಬ್ಬಳೇ ಮಗಳು ಲಕ್ಷ್ಮಿ, ಅವರಿಗೆ ಕಿತ್ತು ತಿನ್ನುವಂತಹ ಬಡತನ. ದಿನೇದಿನೇ ಕೆಲಸ ಸಿಗದೇ ಅವರ ಪಾಡು ಒಂದು ಹೊತ್ತಿನ ಗಂಜಿಗೂ ಪರದಾಡಬೇಕಾಯಿತು. ದಿನಗಳೆದಂತೆ ಅವರು ಬೇಸತ್ತು ಕೆಲಸ ಹುಡುಕಿಕೊಂಡು ಬೇರೆ ಊರಿಗೆ ವಲಸೆ ಹೋಗಬೇಕೆಂದು ನಿಶ್ಚಯಮಾಡಿದರು. ಒಂದು ದಿನ ಬೆಳಗಿನ ಜಾವ ಅವರು ತಮ್ಮ ಗಂಟು ಮೂಟೆ ಸಮೇತವಾಗಿ ಬೇರೆ ಊರಿಗೆ ಬಂದರು. ಅಲ್ಲಿಯೇ ಊರ ಗೌಡರ ಅಪ್ಪಣೆಯೊಂದಿಗೆ ಒಂದು ಗುಡಿಸಲನ್ನು ಹಾಕಿಕೊಂಡು ವಾಸಿಸುತ್ತಿದ್ದರು. ಊರ ಜನರ ನಂಬಿಕೆಗೆ ಪಾತ್ರರಾಗಿದ್ದರು. ಒಂದು ದಿನ ಬೆಳಗ್ಗೆ ತಂದೆ ರಾಮಣ್ಣ ಹಾಗೂ ತಾಯಿ ಸಂಗವ್ವ ಕೆಲಸಕೆಂದು ಹೋದಾಗ ಲಕ್ಷ್ಮಿ ಒಬ್ಬಳೇ ಆಟ ಆಡುತ್ತಿದ್ದಳು.
ಸೈನಿಕನೊಬ್ಬ ಯುದ್ಧದಲ್ಲಿ ಒಂದು ಕಾಲು ಕಳೆದುಕೊಂಡಿದ್ದ. ಕೃತಕ ಕಾಲು ಜೋಡಿಸಿ ಅವನನ್ನು ಸೈನ್ಯದಿಂದ ಬಿಡುಗಡೆ ಮಾಡಲಾಗಿತ್ತು. ಸೈನಿಕ ಕುಂಟುತ್ತಾ ತನ್ನ ಹಳ್ಳಿಯ ಕಡೆ ಹೊರಟ. ಅವನೊಬ್ಬ ಅನಾಥ. ತಂದೆ ತಾಯಿ ಯಾರು ಇರಲಿಲ್ಲ.ಆತನಿಗೆ ಜ್ವರ ಬಂದಿತ್ತು. ಅವನಿಗೆ ಮುಂದೆ ನಡೆಯಲು ಸಾಧ್ಯವಾಗಲಿಲ್ಲ. ಅಲ್ಲೇ ಒಂದು ಮನೆಯ ಹೊಸ್ತಲಿಗೇ ಮಲಗಿದ. ಹಸಿವೆ ಮತ್ತು ಜ್ವರದಿಂದ ಅವನಿಗೆ ಪ್ರಜ್ಞೆ ತಪ್ಪಿತ್ತು. ಅಲ್ಲಿ ಆಟ ಆಡುತ್ತಿರುವ 12ವರ್ಷದ ಲಕ್ಷ್ಮಿ ಅವರನ್ನು ನೋಡಿ ಓಡಿಹೋಗಿ ಆತನನ್ನು ಉಪಚರಿಸಿದಳು.
ಬೆಳಗಾಯಿತು ಅವನಿಗೆ ಪ್ರಜ್ಞೆ ಮರಳಿತು ಹತ್ತಿರದಲ್ಲಿ ಲಕ್ಷ್ಮಿ ಕುಳಿತಿದ್ದಳು ಅವನ ಹಣೆಯ ಮೇಲೆ ಬಟ್ಟೆ ಹಾಕಿದ್ದಳು. ಸೈನಿಕ ಎಚ್ಚರಗೊಂಡಿದ್ದ ನ್ನು ಕಂಡು ಮನೆಯೊಳಗಿನಿಂದ ಜೋಳದ ಹಿಟ್ಟಿನ ಗಂಜಿಯನ್ನು ಮಾಡಿಕೊಂಡು ಬಂದು ಕೊಟ್ಟಳು. ನಾ ಸೈನಿಕ ಗುಣಮುಖನಾಗಲು ನಾಲ್ಕಾರು ದಿನಗಳೇ ಹತ್ತಿದವು. ಸಂಗವ್ವ ಹಾಗೂ ರಾಮಣ್ಣ ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ ದಿನನಿತ್ಯದ ಕೆಲಸಕ್ಕೆಂದು ಹೋಗುತ್ತಿದ್ದರು. ಹುಡುಗಿಯ ಆರೈಕೆಯಿಂದ ಅವನು ದಿನೇದಿನೇ ಚೇತರಿಸಿಕೊಂಡಿದ್ದ.
ಸೈನಿಕ ಅದೇ ಹಳ್ಳಿಯಲ್ಲಿ ವಾಸವಾಗಿದ್ದ. ಕಾಲು ಇಲ್ಲದಿದ್ದರಿಂದ ಅವನಿಗೆ ಬೇರೆ ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಹುಡುಗಿ ದಿನಾಲು ಅವನಲ್ಲಿಗೆ ಬಂದು ಅವನ ಆರೋಗ್ಯ ವಿಚಾರಿಸುತ್ತಿದ್ದರು. ಅವನ ಖರ್ಚಿಗೆ ಎಂದು ನಾಲ್ಕಾಣೆ ಕೊಡುತ್ತಿದ್ದಳು. ಒಂದು ದಿನ ಸೈನಿಕ ಕೇಳಿದ ಲಕ್ಷ್ಮಿ ನೀವೇನೋ ಶ್ರೀಮಂತರಲ್ಲ ಬಡತನದ ಜೀವನ ನಡೆಸುತ್ತಿದ್ದವರು ಎಂದು ನಾನು ಬಲ್ಲೆ, ಆದರೆ ದಿನಾಲು ನನಗೆ ನಾಲ್ಕನೇ ತಂದು ಕೊಡುತ್ತಿದ್ದೀಯೆ….? ಇದು ಹೇಗೆ ಸಾಧ್ಯ?
ಲಕ್ಷ್ಮಿ ನಗುತ್ತಾ ಹೇಳಿದಳು ಚಿಂತೆಬೇಡ ನೀನು ನನ್ನ ದೇಶವನ್ನು ರಕ್ಷಿಸಲು ಹೋರಾಡಿ ಕಾಲು ಕಳೆದುಕೊಂಡಿದ್ದ ಸೈನಿಕ. ನಿನ್ನಂತ ದೇಶಭಕ್ತನ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಇದು ನನ್ನ ಅದೃಷ್ಟ. ದಿನವೂ ಶಾಲೆಗೆ ನಡೆದು ಹೋಗುತ್ತೇನೆ ಕಾಡುದಾರಿಯಲ್ಲಿ ಬೋರೆ ಹಣ್ಣಿನ ಗಿಡ ಇದೆ. ಹಣ್ಣನ್ನು ಕೈಚೀಲದಲ್ಲಿ ತುಂಬಿಕೊಂಡು ಹೋಗುತ್ತೇನೆ. ಶಾಲೆಯ ಹತ್ತಿರವಿರುವ ಅಂಗಡಿಗೆ ಕೊಡುತ್ತೇನೆ. ಅವರು ನನಗೆ ಎಂಟನೇ ಕೊಡುತ್ತಾರೆ. ತಾಯಿಗೆ ನಾಲ್ಕಾಣೆ ಮತ್ತು ನಿನಗೆ ನಾಲ್ಕಾಣೆ ಕೊಡುತ್ತೇನೆ ಈ ವಿಷಯ ನನ್ನ ತಂದೆ ತಾಯಿಗೂ ತಿಳಿದಿದೆ ಎಂದು ಲಕ್ಷ್ಮಿ ಹೇಳುತ್ತಾಳೆ.
ಸೈನಿಕನಿಗೆ ಅವಳ ಮಾತು ಕೇಳಿ ಕರುಣೆ ಉಕ್ಕಿತು. ಮಗಳೇ ನೀನು ನಿಜಕ್ಕೂ ಬುದ್ಧಿವಂತೆ. ದೇವರು ನಿನಗೆ ಒಳ್ಳೆಯದು ಮಾಡಲಿ. ಅವಳ ತಲೆಗೂದಲನ್ನು ಪ್ರೀತಿಯಿಂದ ನೇವರಿಸಿದ. ತಂದೆ-ತಾಯಿಗೆ ಕರೆದುಕೊಂಡು ಬರಲು ಹೇಳಿದ. ಲಕ್ಷ್ಮಿ ಓದುತ್ತಾ ಹೋಗಿ ತನ್ನ ತಂದೆ-ತಾಯಿಗೆ ಕರೆದುಕೊಂಡು ಬಂದಳು. ಆಗ ಸೈನಿಕ ತನ್ನ ಪೆಟ್ಟಿಗೆಯಲ್ಲಿ ಇರುವಂತಹ ದುಡ್ಡಿನ ಕಂತೆಗಳನ್ನು ತೆಗೆದು ಲಕ್ಷ್ಮಿಯ ಕೈಯಲ್ಲಿ ಇಟ್ಟನು. ಈ ದುಡ್ಡು ನನ್ನ ಮಗಳಿಗೆ. ನಾನು ನನಗೆ ಯಾರೂ ಇಲ್ಲವೆಂದು ಕೊರಗುತ್ತಿದ್ದೆ. ಲಕ್ಷ್ಮಿ ನನಗೆ ಮಗಳಾಗಿ ಬಂದು ನನಗೆ ಅನಾಥ ಆಗುವುದನ್ನು ತಪ್ಪಿಸಿದ್ದಾಳೆ ಹಾಗಾಗಿ ಇದನ್ನು ನಾನು ಪ್ರೀತಿಯಿಂದ ಆಕೆಗೆ ಕೊಡುತ್ತಿದ್ದೇನೆ ಸ್ವೀಕರಿಸು ಎಂದು ಹೇಳುತ್ತಾನೆ. ಆಗ ರಾಮಣ್ಣ ಸಂಗವ್ವ ಎಷ್ಟು ಬೇಡವೆಂದರೂ ಸೈನಿಕ ಕೇಳದೆ ನಾನು ಅನಾಥ ನಾಗದೆ ಅಣ್ಣ ಅತ್ತಿಗೆಯ ಪ್ರೀತಿ ತಮ್ಮಲ್ಲಿ ಕಂಡೆ ಮಗಳ ಪ್ರೀತಿಯನ್ನು ಲಕ್ಷ್ಮಿ ಕೊಟ್ಟಿದ್ದಾರೆ ಹೀಗಾಗಿ ನಾನು ಈಗ ನಿಶ್ಚಿಂತೆಯಿಂದ ಸಾವಿನ ಮಡಿಲು ಸೇರಬಹುದೆಂದು ಲಕ್ಷ್ಮಿಯ ಹಣೆಯ ಮೇಲೆ ಮುತ್ತಿಡುತ್ತಾ ಆನಂದ ಭಾಷ್ಪವನ್ನು ಸುರಿಸುತ್ತಾನೆ.
ಸುನಿತಾ. ಎಸ್. ಪಾಟೀಲ ಸರಕಾರಿ ಪ್ರೌಢ ಶಾಲೆ ನಿಂಬೂರ ತಾ. ಹುಮ್ನಾಬಾದ್ ಜಿ. ಬೀದರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.