ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಿಲ್ಲೆಯಲ್ಲಿ ರಮಾಳಾನ್ ತಿಂಗಳ ಪರಿಸಮಾಪ್ತಿಯ ನಂತರ ಆಧಿತ್ಯವಾರ ಸರಳವಾಗಿ ಈದ್ ಆಚರಿಸಲು ಅನುವಾಗುವಂತೆ ಲಾಕ್ ಡೌನ್ ಸಡಿಲಗೊಳಿಸಲು ದಾರಿಮಿ ಉಲಮಾ ಒಕ್ಕೂಟ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ರಾಜ್ಯದ ಮುಸ್ಲಿಮರು ಸರಕಾರದ ಎಲ್ಲಾ ಆದೇಶಗಳನ್ನು ಈ ತನಕ ಚಾಚೂ ತಪ್ಪದೇ ಪಾಲನೆ ಮಾಡಿದ್ದು ಮುಂದೆಯೂ ಇದೇ ರೀತಿ ಪಾಲನೆ ಮಾಡಲು ಸಿದ್ದರಿದ್ದಾರೆ. ಅತ್ಯಂತ ಮಹತ್ವದ ಈ ಆಚರಣೆಗೂ ಕೂಡಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವರು ಮುಂದೆ ಬಂದಿಲ್ಲ.
ಅದು ಮಾತ್ರವಲ್ಲದೇ ಸಾಮೂಹಿಕ ಈದ್ ನಮಾಜ್ ಗೆ ಅನುವು ಮಾಡಿ ಕೊಡ ಬೇಕೆಂಬ ಬೇಡಿಕೆಯನ್ನೂ ಮುಸ್ಲಿಂ ಸಮುದಾಯ ಇಟ್ಟಿಲ್ಲ. ಕೊರೋನ ಜಾಗೃತಿಗಾಗಿ ಜವುಳಿ ಖರೀದಿಗೂ ಕೂಡಾ ಮುಂದಾಗಲಿಲ್ಲ. ಅದೇ ವೇಳೆ ಈದ್ ಆಚರಣೆಯ ಸಂದರ್ಭದಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿ ಸ್ವಂತ ವಾಹನ ಇರುವವರು ಸಂಭಂದಿಕರ ಮನೆಗಳಿಗೆ ಬೇಟಿ ನೀಡಿ ಶುಭ ಹಾರೈಸಲು ಮತ್ತು ಪೂರ್ವಿಕ ಸಂಭಂದಿಕರ ಸ್ಮಶಾನ ಸಂದರ್ಶಿಸಿ ಪ್ರಾರ್ಥನೆ ನಡೆಸಲು ಅನುವಾಗುವಂತೆ ಜಿಲ್ಲಾಡಳಿತ ಈಗಾಗಲೇ ಘೋಷಿಸಿದ ಸಂಪೂರ್ಣ ಲಾಕ್ ಡೌನ್ ನ್ನು ಆಧಿತ್ಯವಾರ ಸಡಿಲ ಗೊಳಿಸಲು ಮುಂದೆ ಬಂದು ಸಮಾಜವನ್ನು ವಿಶ್ವಾಸಕ್ಕೆ ಪಡೆಯ ಬೇಕೆಂದು ಉಲಮಾ ಒಕ್ಕೂಟ ಆಗ್ರಹಿಸಿದೆ ಎಂದು ಸಮಿತಿಯ ಅದ್ಯಕ್ಷ ಎಸ್ ಬಿ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.