ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಹೌದು ಜಗತ್ತಿಡೀ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿದ್ದು , ನಮ್ಮ ದೇಶದಲ್ಲೂ ಈ ಮಾರಕ ವೈರಸ್ ನಿಂದಾಗಿ ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ಆಗಿ ಜನರು ಅನಿವಾರ್ಯವಾಗಿ ಮನೆಯಲ್ಲೇ ಉಳಿದಿದ್ದಾರೆ. ಈ ಸಂದಿಗ್ಧ ಘಟ್ಟದಲ್ಲಿ ಅದೆಷ್ಟೋ ಬಡ ಹಾಗೂ ಮಧ್ಯಮ ವರ್ಗದ ಜನತೆ ದಿನ ಬಳಕೆಯ ಆಹಾರ ವಸ್ತುಗಳ ಕೊರತೆಯಿಂದ ತೀರಾ ಸಂಕಷ್ಟಕ್ಕೀಡಾಗಿ ಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆಹಾರ ದಿನಸಿ ಸಮಾಗ್ರಿಗಳು ನೀಡುವುದು ಕೂಡ ಅತ್ಯಂತ ಪುಣ್ಯದ ಶ್ರೇಷ್ಠ ಕಾರ್ಯವೂ ಆಗಿದೆ. ಕೆಲವಡೆ ಇದು ನಡೆಯುತ್ತಿದೆ ಅಲ್ ಹಮ್ದುಲಿಲ್ಲಾ….
ಇಲ್ಲಿ ವಿಶೇಷವಾಗಿ ಹೇಳ ಬೇಕಾದದ್ದು ಸಂಘಟನಾಗಳಿಗೆ ಮಾದರಿಯಾದ SKSSF ಕುಕ್ಕಾಜೆ ಕ್ಲಸ್ಟರ್ ಸೇವೆಯನ್ನು. ಏಕೆಂದರೆ ಎಲ್ಲರೂ ತೀರ್ಮಾನಿಸುವ ಮೊದಲೇ ಅಂದರೆ ಈ ಲಾಕ್ ಡೌನ್ ನ ಆರಂಭದಲ್ಲೇ ತಮ್ಮ ಮೊಹಲ್ಲಾ ಹಾಗೂ ಪರಿಸರದಲ್ಲಿ ಇರುವ ಸಮಸ್ತದ ಮುಅಲ್ಲಿಂ ಹಾಗೂ ದರ್ಸ್ ವಿಧ್ಯಾಭ್ಯಾಸ ಮಾಡುತ್ತಿರುವ ಮುತಅಲ್ಲಿಮರಿಗೆ ರಂಝಾನ್ ಪ್ರಯುಕ್ತ ಈದ್ ಕಿಟ್ ಗಳನ್ನು ಅದೇ ರೀತಿ ಮುತಅಲ್ಲಿಮರಿಗೆ ತಲಾ ₹500ರೂ ಸಹಾಯ ಧನ ಸದ್ದಿಲ್ಲದೆ ವಿತರಿಸಿದ ಪ್ರತಿಷ್ಠಿತ SKSSF ಕುಕ್ಕಾಜೆ ಕ್ಲಸ್ಟರ್ನ ಪದಾಧಿಕಾರಿಗಳು ಎಲ್ಲರಿಗೂ ಮಾದರಿಯಾದರು ಎನ್ನುವುದೂ ತಪ್ಪಲ್ಲ. ಜಿಲ್ಲೆಯಲ್ಲೆ ಇಂತಹ ಸೇವೆ ಮೊದಲ ಬಾರಿಗೆ ಎಂಬುವುದು ಅಭಿಮಾನ.
ಹೀಗೆ ವಿವಿಧ ರೀತಿಯಲ್ಲಿ ಈ ಸಂದಿಗ್ಧ ಘಟ್ಟದಲ್ಲಿ ಸೇವಾ ಕಾರ್ಯದಲ್ಲಿ ನಿರತರಾದ SKSSF ಕುಕ್ಕಾಜೆ ಕ್ಲಾಸ್ಟರ್ ಪದಾಧಿಕಾರಿಗಳನ್ನು ಅಭಿನಂದಿಸಲೇಬೇಕು.
ಒಟ್ಟಿನಲ್ಲಿ ಪರೋಪಕಾರಿ ಯಾಗಿ, ನಿಸ್ವಾರ್ಥ ಸಮಾಜ ಸೇವಕರಾಗಿ ಸದಾ ಬಡ, ನಿರ್ಗತಿಕರಿಗೆ ನೆರವಾಗುವ SKSSF ಕುಕ್ಕಾಜೆ ಕ್ಲಸ್ಟರ್ನ ಈ ಕಾರುಣ್ಯ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ. ಅದೇ ರೀತಿ SKSSF ಕುಕ್ಕಾಜೆ ಕ್ಲಸ್ಟರ್ , ಅಧೀನದಲ್ಲಿರುವ ಎಲ್ಲಾ ಶಾಖೆಗಳ ಸಹಕಾರದಿಂದ ಜಮಾಅತ್ ಕಿಟ್ ನೀಡುವ ಸಂಧರ್ಭದಲ್ಲಿ 10 ಕ್ವಿಂಟಲ್ ಅಕ್ಕಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿಮಗೆ ನಾವು ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕೆಂದೂ ತೊಚುತ್ತಿಲ್ಲ. ನಿಮಗೆ ನಮ್ಮಿಂದ ನೀಡಬೇಕಾದದ್ದು ಕೇವಲ ಪ್ರಾರ್ಥನೆ ಮಾತ್ರ. ನಿಮಗೆ ನಮ್ಮಿಂದ ನೀಡಲು ಸಾಧ್ಯವಾಗುವುದೇ ಪ್ರಾರ್ಥನೆ ಮಾತ್ರ ಅಲ್ಲಾಹನು ನಿಮ್ಮ ಸತ್ಕರ್ಮವನ್ನು ಸ್ವೀಕರಿಸಲಿ
ಇದಕ್ಕೆ ಸಹಾಯ ಸಹಕಾರ ನೀಡಿದ ಎಲ್ಲಾರಿಗೂ ಅಲ್ಲಾಹನು ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ…ಆಮೀನ್ ಯಾ ರಬ್ಬಲ್ ಆಲಮೀನ್.
ಇಂದಿನ ಕಾರ್ಯಕ್ರಮದಲ್ಲಿ ಕುಕ್ಕಾಜೆಯ ಮುತ್ತು ಸೈಯ್ಯದ್ ಹುಸೈನ್ ಬಾ-ಅಲವೀ ತಂಙಳ್ ಕುಕ್ಕಾಜೆ ದುಆಃ ಮೂಲಕ ಚಾಲನೆ ನೀಡಿದರು ಸಿರಾಜ್ ಮುಸಿಯಾರ್ ಪತ್ತುಮುಡಿ ಸ್ವಾಗತ ಭಾಷಣ ಮಾಡಿದರು. SKSSF ವಿಟ್ಲ ವಲಯ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಅಭಿನಂದನೆ ಸಲ್ಲಿಸಿದರು. SKSSF ಕುಕ್ಕಾಜೆ ಕ್ಲಸ್ಟರ್ ಅದ್ಯಕ್ಷರು ಹಂಝ ಕುರಿಯಪ್ಪಾಡಿ ಮುಹಿಯುದ್ದೀನ್ ಜಮಾಅತ್ ಕಮೀಟಿ ಪ್ರಧಾನ ಕಾರ್ಯದರ್ಶಿ ರಫೀಕ್ ಕುಕ್ಕಾಜೆ ಹಾಗೂ ಇರಾ ಶಾಖಾಧ್ಯಕ್ಷರಾದ ಹಂಝ ಮುಸ್ಲಿಯಾರ್ ಇರಾ ಅವರು ಶುಭ ಹಾರೈಸಿದರು. … ಸಂಘಟನೆ ನೇತಾರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಡ್ವಕೇಟ್ ಬದ್ರುದ್ದೀನ್ ಎಲ್ಲರಿಗೂ ವಂದಿಸಿದರು..
-ಮುಹಮ್ಮದ್ ಶಫೀಕ್ ಕುಕ್ಕಾಜೆ (ದರ್ಸ್ ವಿಧ್ಯಾರ್ಥಿ ಕೂರ್ನಡ್ಕ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.