ಮಂಗಳೂರು(ವಿಶ್ವಕನ್ನಡಿಹ ನ್ಯೂಸ್): ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೊರತ್ ರವರ ನೇತೃತ್ವದಲ್ಲಿ ಉಳ್ಳಾಲದ ಹಲೆಕೋಟೆ ಯಲ್ಲಿ ಕಾರ್ಯಾಚರಿಸುತ್ತಿರುವ ತಾಜುಲ್ ಉಲಮಾ ಮದ್ರಸ ವನ್ನು ಅಮೀನುದ್ದಿನ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ದತ್ತು ಸ್ವೀಕರಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ತಾಜುಲ್ ಉಲಮಾ ಮದರಸದ ಆಡಳಿತಮಂಡಳಿಯವರು ಅಮೀನುದ್ದಿನ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಯು. ಎ. ಹುಸೈನ್ ರವರಿಗೆ ಸಂಸ್ಥೆಯ ದಾಖಲೆಗಳನ್ನು ಹಸ್ತಾಂತರಿಸಿದ್ದರು. ಈ ಸಂದರ್ಭ ಟ್ರಸ್ಟಿನ ಸಲಹೆಗಾರ ಹಮೀದ್ ಫೈಝಿ ಕಿಲ್ಲೂರ್, ಟ್ರಸ್ಟಿನ ಅಧ್ಯಕ್ಷರಾದ ಯು. ಎ. ಹುಸೈನ್, ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಕಾರ್ಯದಶಿ೯ ಇಮ್ರಾನ್ ಯು. ಎ.,ಕೋಶಾಧಿಕಾರಿ ರಹಮತ್ತುಲ್ಲಾ, ರಫೀಕ್, ಅಬ್ಬಾಸ್ ಹಾಗೂ ಮದ್ರಸ ಅಧ್ಯಕ್ಷರಾದ ಯೂಸುಫ್ ಹಳೆಕೋಟೆ, ಕಾರ್ಯ ದಶಿ೯ ಅಬೂಬಕ್ಕರ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.