ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ದಿನ ನಿತ್ಯ ಕಾಲು ದಾರಿಯಾಗಿ ನಡೆದುಕೊಂಡು ಹೋಗುತ್ತಿರುವಾಗ ಯಹೂದಿಯೊಬ್ಬಳು ಗುಡಿಸಿಟ್ಟ ಕಸಕಡ್ಡಿಗಳನ್ನು ಪ್ರವಾದಿಯವರ ಮೈ ಮೇಲೆ ಎಸೆದು ವಿಘ್ನ ಸಂತೋಷ ಪಡುತ್ತಿದ್ದಳು. ಒಂದು ದಿನ ಪ್ರವಾದಿವರ್ಯರು ಹೀಗೆ ಹೋಗುತ್ತಿರಬೇಕಾದರೆ ಆಕೆಯನ್ನು ಕಾಣುತ್ತಿಲ್ಲ. ಪ್ರವಾದಿವರ್ಯರು ಆಶ್ಚರ್ಯಚಕಿತರಾದರು. ನೆರೆಹೊರೆಯರೊಂದಿಗೆ ಆಕೆಯನ್ನು ವಿಚಾರಿಸುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಆಕೆಯ ನೆರೆಹೊರೆಯವರು ತಿಳಿಸಿದಾಗ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಆಕೆಯ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಾರೆ. ಅಸೌಖ್ಯದಿಂದ ಬಳಲುತ್ತಿದ್ದ ಆಕೆಯನ್ನು ಸಂತೈಸುತ್ತಾರೆ. ಬೇಗ ಚೇತರಿಸಿಕೊಳ್ಳಲು ಹಾರೈಸುತ್ತಾರೆ,ಪ್ರಾರ್ಥಿಸುತ್ತಾರೆ. ಇಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಬಗ್ಗೆ ತಿಳಿದಾಗ ಪ್ರವಾದಿ ಜೀವನದಲ್ಲಿ ನಡೆದ ಘಟನೆಯೊಂದು ನೆನಪಲಿ ಮೂಡಿತು.
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕದ ನಿಶಾಂತ್ನನ್ನು ರಕ್ಷಿಸಲು ಪೆರ್ನಾಳ್ನ ಸಂಭ್ರಮದಲ್ಲಿರುವ ಮುಹಮ್ಮದ್, ಸಮೀರ್,ಝಾಹಿದ್,ತೌಸೀಫ್ ಮತ್ತು ಆರೀಫ್ ಪಿ.ಜೆ ಎಂಬ ಮುಸ್ಲಿಂ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಹಾರಿ ನದಿಯ ಆಳದಿಂದ ನಿಶಾಂತ್ನನ್ನು ಮೇಲೆಕೆತ್ತಿ ತುಟಿಗೆ ತುಟಿ ಇಟ್ಟು ಕೃತಕ ಗಾಳಿ ನೀಡುತ್ತಾರೆ,ದುರಾದೃಷ್ಟವಶಾತ್ ನಿಶಾಂತ್ ಕೊನೆಯುಸಿರೆಳೆಯುತ್ತಾನೆ. ಪಾಪ.!
ನಿಶಾಂತ್ನನ್ನು ಉಳಿಸಲು ಮುಸ್ಲಿಂ ಯುವಕರು ಪಟ್ಟ ಶ್ರಮ ಅಪ್ರತಿಮ. ಸಾಹಸಿಗ ಯುವಕರ ಈ ಮಾನವೀಯ ಗುಣ ನೋಡಿದಾಗ,ತರಕಾರಿ ಅಂಗಡಿಗಳಲ್ಲಿ ಭಗವಧ್ವಜ ಕಟ್ಟಿದವರು, ತಳ್ಳುಗಾಡಿ ಮುಸ್ಲಿಂ ತರಕಾರಿ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದವರು,ಹಿಂದೂಗಳ ಬಾಹುಳ್ಯ ಪ್ರದೇಶಗಳಿಗೆ ಮುಸ್ಲಿಮರನ್ನು ನಿರ್ಬಂಧಿಸಲಾಗಿದೆ ಎಂದು ಪೋಸ್ಟರ್ ಲಗತ್ತಿಸಿದವರು ಮತ್ತು ಕೊರೋನ ವೈರಸ್ನಲ್ಲಿ ಧರ್ಮ ಹುಡುಕಲು ಹೊರಟವರು ನೆನಪಿಗೆ ಬರುತ್ತಾರೆ. ಅಂದಹಾಗೆ ಕೋಮುವಾದಿಗಳ ಕಾರ್ಖಾನೆ ಕಲ್ಲಡ್ಕಕ್ಕೆ ಒಂದೊಳ್ಳೆಯ ಮೆಸೇಜ್ ಈದ್ ದಿನ ತಲುಪಿದೆ. ಇಸ್ಲಾಂ ವಿರೋಧಿಗಳು ಹೇಗೆ ಸ್ವೀಕರಿಸುತ್ತಾರೋ. ಕಾದು ನೋಡ ಬೇಕಾಗಿದೆ.
ಪ್ರವಾದಿವರ್ಯರ ಮೇಲಿನ ಜೀವನ ಚರಿತ್ರೆ, ಯಾವೊಬ್ಬ ಅಕ್ರಮಿಯು ಕೂಡ ಅನ್ಯಾಯವಾಗಿ ಸಾಯ ಬಾರದು ಎಂಬುದರ ತಾತ್ಫರ್ಯವಾಗಿದೆ ಅದನ್ನು ಇಂದು ಮುಸ್ಲಿಂ ಯುವಕರು ಸಾಕ್ಷಾತ್ಕರಿದ್ದಾರೆ. ಇದು ಇಸ್ಲಾಂ. ಕೋಮುವಾದ ಅಳಿಯಲಿ ಮಾನವೀಯತೆ ಬೆಳೆಯಲಿ.
-ಇಸ್ಹಾಕ್ ಸಿ.ಐ.ಫಜೀರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.