ಕೋಲಾರ (www.vknews.com) : ಕೆರೆ ಒತ್ತುವರಿ ಬಗ್ಗೆ ಮನವಿ ಸಲ್ಲಿಸುವ ಸಮಯದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ, ಹೆಣ್ಣು ಮಗಳಿಗೆ ಆಗೌರವ ತೋರಿರುವ ಕಾನೂನು ಮತ್ತು ಸಣ್ಣ ನೀರಾವರಿ ಇಲಾಖೆ ಮಂತ್ರಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಹೆಣ್ಣುಮಕ್ಕಳ ಗೌರವವನ್ನು ಉಳಿಸಿಕೊಡಬೇಕೆಂದು ಪಲ್ಲವಿ ವೃತ್ತದಲ್ಲಿ ರೈತ ಸಂಘದಿಂದ ಹೋರಾಟ ಮಾಡಿ ಅಗ್ರಹಿಸಲಾಯಿತು.
ಹೋರಾಟ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸತ್ಯ ಎಂಬುದು ಅಡವಿ ಸೇರಿಕೊಂಡು ಅಸತ್ಯ, ದೌರ್ಜನ್ಯ, ದಬ್ಬಾಳಿಕೆ ಎಂಬುದು ಇಂದು ವಿಧಾನಸೌಧದಲ್ಲಿ ಸೇರಿಕೊಂಡಿದೆ ಎಂಬುದಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವ ಕಾನೂನು ಮಂತ್ರಿ ಸಣ್ಣ ನೀರಾವರಿ ಇಲಾಖೆ ಸಚಿವರಾದ ಮಾದುಸ್ವಾಮಿ ರವರ ಹೆಣ್ಣ ಮಕ್ಕಳ ಮೇಲಿನ ದಬ್ಬಾಳಿಕೆಯೆ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನಸೇವಕರಾಗಿರುಬೇಕು. ಅದನ್ನು ಬಿಟ್ಟು ನಾನು ಕೆಟ್ಟ ಮನುಷ್ಯ, ಹೇ ಬಾಯಿ ಮುಚ್ಚು ರ್ಯಾಸ್ಕೆಲ್ ಎಂದು ಸಾರ್ವಜನಿಕವಾಗಿ ಹೆಣ್ಣು ಮಗಳಿಗೆ ಅಗೌರವ ತೋರುವ ಜೊತೆಗೆ ಇಡೀ ರಾಜ್ಯದ ಹೆಣ್ಣು ಮಕ್ಕಳನ್ನು ಅವಮಾನ ಮಾಡಿರುವ ಇಂತಹ ನೀಚ, ಸಭ್ಯತೆಯಿಲ್ಲದೆ ರಾಜಕಾರಣಿ ಪವಿತ್ರವಾದ ವಿಧಾನಸೌಧದಲ್ಲಿ ಸರ್ಕಾರ ನಡೆಸುವ ಮಾನ್ಯ ಮುಖ್ಯಮಂತ್ರಿಗಳ ಸಂಪುಟದಲ್ಲಿ ಇರಬೇಕೇ?. ಕೆಟ್ಟ ಮನುಷ್ಯ ಯಾವಾಗಲೂ ಸಭ್ಯತೆಯಿರುವ ಜನರ ಮಧ್ಯದಲ್ಲಿರಬಾರದು ಕೂಡಲೇ ಇವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ರವರು ಜಿಲ್ಲೆಯ ಕೆÀಸಿವ್ಯಾಲಿ ಹರಿಯುವ ನೀರಿನ ಚೆಕ್ಡ್ಯಾಂ, ಕೆರೆಗಳ ವೀಕ್ಷಣೆಗೆ ಆಗಮಿಸಿದ್ದ ಮಾನ್ಯ ಸಚಿವರಿಗೆ ಎಸ್.ಅಗ್ರಹಾರ ಕೆರೆ ವೀಕ್ಷಣೆಗೆ ಬಂದಾಗ ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಸಚಿವರಿಗೆ ಕೆರೆಗಳ ವಾಸ್ತವಾಂಶ ಹಾಗೂ ಜನರ ತೆರಿಗೆಯಲ್ಲಿ ನಿರ್ಮಿಸಿರುವ ಚೆಕ್ಡ್ಯಾಂಗಳು ಮತ್ತು ಪೂರ್ವಾಜರು ಕಟ್ಟಿರುವ ಕೆರೆ, ಕೋಡಿಗಳನ್ನು ಯಾವುದೇ ಕಾರಣಕ್ಕೂ ಹಾನಿ ಮಾಡದ ಜೊತೆಗೆ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ರೈತರ ಜೀವನಾಡಿಗಳನ್ನ ಉಳಿಸಿಕೊಡಿ ಎಂದು ಸಚಿವರಿಗೆ ಮನವಿ ಮಾಡುವಾಗ ಅದನ್ನು ಸೌಜನ್ಯದಿಂದ ಕೇಳಿಸಿಕೊಳ್ಳದ ಸಚಿವರು ಏಕಾಏಕಿ ಈ ರೀತಿ ನಡೆದುಕೊಳ್ಳವುದು ಯಾವ ನ್ಯಾಯ. ಇನ್ನು ನಮ್ಮ ಪಕ್ಷದ ಸಚಿವರು ಮಾಡಿದ ಘನಂದಾರಿ ಕೆಲಸಕ್ಕೆ ಚೆನ್ನೆಲುಬಾಗಿ ಅಲ್ಲಿಯೇ ಇದ್ದ ಅವರ ಬೆಂಬಲಿಗರು ನಿಲ್ಲುವ ಜೊತೆಗೆ ಇನ್ನು ಜಿಲ್ಲಾಡಳಿತ ನಾವು ಇರುವುದೇ ರಾಜಕಾರಣಿಗಳು ಹೇಳಿದ ಹಾಗೆ ಕೆಲಸ ಮಾಡುವುದಕ್ಕೆ ಎಂಬಂತೆ ಯಾರೂ ತುಟಿ ಬಿಚ್ಚದೆ ಮೌನವಾಗಿರುವುದಕ್ಕೆ ಸಾಕ್ಷೀಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹೋರಾಟದಲ್ಲಿ ಹುಲ್ಕೂರು ಹರಿಕುಮಾರ್, ಬಂಗವಾದಿ ನಾಗರಾಜ್, ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಅನುಶ್ರೀ, ಪವಿತ್ರ, ಕಾವ್ಯಾಂಜಲಿ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟಶಪ್ಪ, ವೇಣು, ಐತಾಂಡಹಳ್ಳಿ ಮಂಜುನಾಥ್, ಸುಪ್ರೀಂಚಲ, ಶಿವ, ನಾರಾಯಣ್, ನವೀನ್, ಮುರಳಿ, ಮುಂತಾದವರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.