ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಕಾರ್ಯಕರ್ತರಿಗೆ ಉಚಿತ ಹೊಮಿಯೋಪತಿ ಔಷಧಿ ವಿತರಣೆ ಕಾರ್ಯಕ್ರಮ ದಿನಾಂಕ 23-05-2020 ರಂದು ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೇರಿಹಿಲ್ ಮಂಗಳೂರು ಇಲ್ಲಿ ನಡೆಯಿತು.
ಈ ಔಷಧಿ ವಿತರಣೆಯ ಪ್ರಾಯೋಜಕತ್ವವನ್ನು ದಕ್ಷಿಣ ಕನ್ನಡ ಜಿಲ್ಲಾ ಹೋಮಿಯೋಪತಿ ವೈದ್ಯರ ಸಂಘ ವಹಿಸಿಕೊಂಡಿತ್ತು. ಹೊಸದಾಗಿ ಆಯ್ಕೆಯಾದ ಎಲ್ಲಾ 30 ಮಂದಿ ಪೌರರಕ್ಷಣಾ ಕಾರ್ಯಕರ್ತರಿಗೆ ಉಚಿತ ಹೋಮಿಯೋಪತಿ ಔಷಧಿಯನ್ನು ಜಿಲ್ಲಾ ಪೌರರಕ್ಷಣಾ ದಳದ ಚೀಫ್ ವಾರ್ಡನ್ ಡಾ: ಮುರಲೀ ಮೋಹನ್ ಚೂಂತಾರು ಅವರು ನೀಡಿದರು.
ಡಾ: ಚೂಂತಾರವರು ಮಾತನಾಡಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಪೌರರಕ್ಷಣಾ ಕಾರ್ಯಕರ್ತರು ಸಮಾಜದ ರಕ್ಷಣೆಗೆ ಧಾವಿಸುತ್ತಿದ್ದಾರೆ. ಈ ಸಂಧರ್ಭದಲ್ಲಿ ಈ ಪೌರರಕ್ಷಣಾ ಕಾರ್ಯಕರ್ತರ ರೋಗ ರಕ್ಷಣಾ ವ್ಯವಸ್ಥೆ ಬಲಿಷ್ಠಗೊಳಿಸಲು ಹೋಮಿಯೋಪತಿ ಔಷಧಿ ನೀಡಲಾಗುತ್ತಿದೆ ಎಂದರು. ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುವ ಪೌರರಕ್ಷಣಾ ಕಾರ್ಯಕರ್ತರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶ್ರೀ ಸಂತೋಷ್ ಪೀಟರ್ ಡಿಸೋಜ, ನಿತಿನ್ ಸುವರ್ಣ, ದಿವಾಕರ್, ಮಹೇಶ್, ಲಿಂಗಪ್ಪ ಡಾ: ನಿತಿನ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.