ಮಂಗಳೂರು ಕೋಟೆಕಾರ್ (www.vknews.com) : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಸರಕಾರ ನೀಡಿದ ಅಲ್ಪ ರಿಯಾಯಿತಿಯನ್ನು ದುರುಪಯೋಗಪಡಿಸದೆ ರವಿವಾರ ಕೋಟೆಕಾರ್ ಹಿದಾಯತ್ ನಗರ ಅಜ್ಜಿನಡ್ಕ ಕೆ.ಸಿ.ರೋಡ್ ಕೆ.ಸಿ.ನಗರ ತಲಪಾಡಿ ಪಂಜಲ ಪಿಲಿಕೂರ್ ಕಿನ್ಯ ಸುತ್ತಲ ಪರಿಸರದ ಮುಸ್ಲಿಮರು ಅತ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಿದರು.
ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಯಾರು ಮಸೀದಿಗೆ ತೆರಳದೆ ಬಹುತೇಕ ಮನೆಗಳಲ್ಲೂ ಕುಟುಂಬದ ಯಜಮಾನನ ನೇತೃತ್ವದಲ್ಲಿ ಅವರವರ ಮನೆಯಲ್ಲೇ ಈದ್ ನಮಾಜ್ ನಿರ್ವಹಿಸಿದರು. ಸಾರ್ವಜನಿಕವಾಗಿ ತಕ್ಬೀರ್ ಧ್ವನಿ ಮೊಳಗಿಸದೆ, ಖಬರ್ ಸ್ಥಾನವನ್ನು ಸಂದರ್ಶಿಸದೆ ಮೌನವಾಗಿಯೇ ಈದ್ ಹಬ್ಬವನ್ನು ಆಚರಿಸಿ ಬಹುತೇಕ ಮುಸ್ಲಿಮರು ಇರುವುದರಲ್ಲೇ ಶುಭ್ರವಾದ ವಸ್ತ್ರ ದರಿಸಿ ಹಬ್ಬ ಆಚರಿಸಿದರು ಪುಟಾಣಿ ಮಕ್ಕಳಲ್ಲಿಯೂ ಹೆಚ್ಚಿನ ಸಂಭ್ರಮ ಕಂಡುಬರಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.