(www.vknews.com) : ಕರ್ಫ್ಯೂ ನಿಮಿತ್ತ ಮನೆಯಲ್ಲೇ ಇದ್ದೆ. ಪೋಲೀಸ್ ವಾಹನ,ಪಂಚಾಯತ್ ವಾಹನಗಳು ಧ್ವನಿವರ್ಧಕ ಗಳ ಮೂಲಕ ಆಗಾಗ ಸದ್ದು ಮಾಡುತ್ತಲೇ ಇದ್ದವು.ಪೋಲೀಸರು ಆಗಾಗ ಲಾಠಿಚಾರ್ಜ್ ಮಾಡುತ್ತಾ ಜನರ ಗುಂಪುಗಳನ್ನು ಚದುರಿಸುತ್ತಲೇ ಇದ್ದರು. ಅಂಗಡಿ ಮುಂಗಟ್ಟುಗಳ ಮುಂದೆ ಸೇರಬೇಡಿ,ಗುಂಪುಗೂಡಬೇಡಿ, ಮನೆಯಲ್ಲೇ ಉಳಿಯಿರಿ,ಕೈಗಳನ್ನು ಆಗಾಗ ತೊಳೆಯುತ್ತಾ ಇರಿ, ಪರಸ್ಪರ ಅಂತರ ಕಾಯ್ದುಕೊಳ್ಳಿ ,ಶುಚಿತ್ವ ಕಾಪಾಡಿ ಮುಂತಾದ ಅಮೂಲ್ಯ ಸಲಹೆಗಳನ್ನು ನೀಡುತ್ತಲೇ ಇದ್ದರು.ಇದು ಇವತ್ತು ಒಂದು ಏರಿಯಾಕ್ಕೆ ಸೀಮಿತವಲ್ಲ.ಜಿಲ್ಲೆ, ರಾಜ್ಯ, ದೇಶ ವ್ಯತ್ಯಾಸ ವಿಲ್ಲದೆ ವಿಶ್ವದಾದ್ಯಂತ ಕೇಳಿ ಬರುತ್ತಿರುವ ಏಕಸ್ವರದ ಘೋಷಣೆಯಾಗಿದೆ.
ಆದರೆ ಮಾನವನ ಆರೋಗ್ಯಕರ ಬದುಕಿಗೆ ಈ ಘೋಷಣೆ ಬಹಳ ಮುಖ್ಯವೆಂದು ಹದಿನಾಲ್ಕು ಶತಮಾನಗಳ ಹಿಂದೆಯೇ ಸವಿಸ್ತಾರವಾಗಿ ಕಲಿಸಿಕೊಟ್ಟ ಮಾನವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಸಿದ್ದಾಂತ ಎಷ್ಟೊಂದು ಸುಂದರ ಹಾಗೂ ಪ್ರಸ್ತುತ ಎಂಬ ಚಿಂತನೆ ತಾನರಿಯದೇ ನನ್ನ ಮನಸ್ಸಿನಲ್ಲಿ ಹಾದು ಹೋದವು. ಸುಚಿತ್ವವಿಲ್ಲದೆ ವಿಶ್ವಾಸ ಅಪೂರ್ಣ.ಜೀವನದ ಪ್ರತಿಯೊಂದು ಹಂತದಲ್ಲೂ ಶುಚಿತ್ವವೇ ಪರಮ ಮಂತ್ರ ದೇಹ,ಸ್ಥಳ,ವಸ್ತ್ರ ಆಹಾರ, ಪಾನೀಯ ಗಳೆಲ್ಲದರಲ್ಲೂ ಶುದ್ದಿಗೇ ಪ್ರಾಧಾನ್ಯತೆ.
ದಿನದ ಐದು ಸಮಯದ ಕಡ್ಡಾಯ ಅಂಗಶುಧ್ಧಿಯಲ್ಲಿ ಕೈ, ಬಾಯಿ,ಮುಖ,ಕಿವಿ,ಕಾಲು ಮುಂತಾದ ಶರೀರದ ಮುಖ್ಯ ಭಾಗಗಳನ್ನು ಪ್ರತಿಬಾರಿ ಯೂ ಮೂರು ಬಾರಿ ತೊಳೆದು ಮಾತ್ರವಲ್ಲ ಮೂಗಿನ ಒಳಭಾಗ ಸೇರಿದಂತೆ ದಿನದಲ್ಲಿ ಕನಿಷ್ಠ ಹದಿನೈದು ಸಲ ಶುದ್ಧೀಕರಿಸಬೇಕು.ದಿನದಲ್ಲಿ ಕನಿಷ್ಠ ಹದಿನೈದು ಬಾರಿ ಹಲ್ಲುಜ್ಜಬೇಕು.ಅನ್ನ ಪಾನೀಯಗಳ ಮೊದಲು ಹಾಗೂ ನಂತರ ಕೈತೊಳೆಯಬೇಕು.ಹಲ್ಲುಜ್ಜಬೇಕು.ಮಲವಿಸರ್ಜಣೆ ಮಾತ್ರವಲ್ಲ ಮೂತ್ರ ಮಾಡುವಾಗಲೂ ಸರಿಯಾಗಿ ಮೂತ್ರದ ಕೊನೆಯ ಹಣಿಯೂ ವಿಸರ್ಜನೆಯಾಗಿದೆ ಎಂದು ಖಾತರಿ ಪಡಿಸಿಕೊಂಡು ತೊಳೆದು ಶುಚಿಗೊಳಿಸಬೇಕು.ಸ್ನಾನ ಮಾಡುವಾಗಲೂ ದೇಹದ ಪ್ರತಿಯೊಂದು ಭಾಗಕ್ಕೆ ನೀರು ಮುಟ್ಟಿ ಶುಚಿಯಾಗಿದೆ ಎಂದು ಖಾತ್ರಿ ಮಾಡಿಕೊಳ್ಳಬೇಕು.ಮೂತ್ರವು ಸೇರಿ ಯಾವುದೇ ರೀತಿಯ ಗಲೀಜು ಶರೀರದ ಯಾವುದೇ ಒಂದು ಭಾಗಕ್ಕೆ ತಾಗಿದಲ್ಲಿ ತಕ್ಷಣ ಸರಿಯಾಗಿ ತೊಳೆದು ಶುಚಿಗೊಳಿಸಬೇಕು.ಮನೆ,ಅಂಗಳ,ಪರಿಸರ ಎಲ್ಲವೂ ಶುಚಿಯಾಗಿರಬೇಕು.
ರೋಗಗಳು, ಗಾಯಗಳು ಉಲ್ಬಣ ಗೊಂಡ ತಕ್ಷಣ ಚಿಕಿತ್ಸೆ ಪಡೆದು ಶುಚಿಯಾಗಿರಬೇಕು.ಸಾಂಕ್ರಾಮಿಕ ರೋಗಗಳು ಉಲ್ಬಣ ಗೊಂಡಲ್ಲಿ ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು.ಸಾಂಕ್ರಾಮಿಕ ಅಂಟು ರೋಗಗಳು ಉಲ್ಬಣಗೊಂಡ ಪ್ರದೇಶಗಳಿಗೆ ಹೋಗಬಾರದು.ಆ ಪ್ರದೇಶದವರು ಹೊರಗೆ ಹೋಗಬಾರದು.ಹಿಜರಿ ಹದಿನೇಳನೇ ವರ್ಷ ಹಝ್ರತ್ ಉಮರ್ ರಳಿಯಲ್ಲಾಹು ಅನ್ಹುರವರು ಸಹಾಬಿಗಳ ದೊಡ್ಡ ದಂಡಿನೊಂದಿಗೆ ಸಿರಿಯಾ(ಶಾಮ್)ಗೆ ಯಾತ್ರೆ ಹೊರಟರು.ದಾರಿ ಮದ್ಯೆ ಸಿರಿಯಾ ದಲ್ಲಿ ಮಹಾಮಾರಿ ಅಂಟು ರೋಗ ವ್ಯಾಪಿಸಿರುವುದಾಗಿ ವಿವರ ಲಭಿಸುತ್ತದೆ.ಉಮರ್ ರಳಿಯಲ್ಲಾಹು ಅನ್ಹು ಸಹಾಬಿಗಳನ್ನು ಸೇರಿಸಿ ಸಮಾಲೋಚನೆ ನಡೆಸುತ್ತಾರೆ.ದೊಡ್ಡ ವಾದ ವಿವಾದಗಳೇ ನಡೆದು ಅಬೂ ಉಬೈದ್ ರಳಿಯಲ್ಲಾಹು ಅನ್ಹು ರಂತವರು ನಾವು ಉತ್ತಮ ಗುರಿಯೊಂದಿಗೆ ಹೊರಟು ಬಂದವರಾಗಿರುವುದರಿಂದ ಹಿಂತಿರುಗದೇ ಯಾತ್ರೆ ಮುಂದುವರಿಸ ಬೇಕೆಂದು ಹಠ ಹಿಡಿದರು.ಕೊನೆಗೆ ಹಿರಿಯ ಸ್ವಹಾಬಿ ವರ್ಯರಾದ ಅಬ್ದುರ್ರಹ್ಮಾನ್ ಬಿನ್ ಔಫ್ ರಳಿಯಲ್ಲಾಹು ಅನ್ಹುರವರು ಬಂದು ಹೇಳುತ್ತಾರೆ. ನನ್ನ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಹೇಳುವದನ್ನು ನನ್ನ ಈ ಎರಡು ಕಿವಿಗಳಿಂದ ಕೇಳಿದ್ದೇನೆ. ಯಾವುದಾದರೂ ಒಂದು ಪ್ರದೇಶದಲ್ಲಿ ಮಹಾಮಾರಿ ಸಾಂಕ್ರಾಮಿಕ ರೋಗ ಹರಡಿರುವುದಾಗಿ ತಿಳಿದರೆ ಆ ಪ್ರದೇಶಕ್ಕೆ ಯಾರೂ ಪ್ರವೇಶಿಸಬಾರದು.ಆ ಪ್ರದೇಶದಿಂದ ಯಾರೂ ಹೊರ ಹೋಗಲೂ ಬಾರದು. ಅದ್ದರಿಂದ ನಾವು ಈ ಯಾತ್ರೆಯನ್ನು ಇಲ್ಲಿ ಮೊಟಕು ಗೊಳಿಸ ಬೇಕೆಂದರು. ಇಷ್ಟು ಕೇಳಿದ ತಕ್ಷಣ ಉಮರ್ ರಳಿಯಲ್ಲಾಹು ಅನ್ಹುರವರು ನಾವು ಮದೀನಾಕ್ಕೆ ಹಿಂದಿರುಗುವುದಾಗಿ ಘೋಷಿಸಿ ಬಿಟ್ಟರು.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
ಸಾಂಕ್ರಾಮಿಕ ರೋಗಗಳನ್ನು ತಡೆಯುವುದರಲ್ಲಿ ಮುಖ್ಯ ಪಾತ್ರ ಯಾತ್ರಾ ದಿಗ್ಬಂಧನ ದ್ದಾಗಿದೆ ಎಂದು ವಿಜ್ಞಾನದ ಬಾಲ ಪಾಠವೂ ತಿಳಿದಿರದ ಹದಿನಾಲ್ಕು ಶತಮಾನಗಳ ಹಿಂದೆಯೇ ಕಲಿಸಿ ಕೊಟ್ಟ ಮಹಾ ವಿಜ್ಞಾನಿಯಾಗಿರುತ್ತಾರೆ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಂ. ಈ ಅತಿವೈಜ್ಞಾನಿಕ ಸಿದ್ದಾಂತವನ್ನು ದಮನಿಸಲು ಹಾಗೂ ಸರ್ವನಾಶ ಮಾಡಲು ಜೀವಮಾನ ಪೂರ್ತಿ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಜಗತ್ತಿನ ಸ್ವಯಂಘೋಷಿತ ಹಿರಿಯಣ್ಣ ಕಿರಿಯಣ್ಣರೆಲ್ಲರೂ ಸೋಲೊಪ್ಪಿ ಕೈಚೆಲ್ಲಿ ಆಕಾಶಕ್ಕೆ ಕೈತೋರಿಸುವ ದೃಶ್ಯ ಕಾಣುತ್ತಿರುವ ಈ ಸನ್ನಿವೇಶದಲ್ಲಿ ಓ ಪ್ರವಾದಿ ವರ್ಯರೇ ತಾವೆಷ್ಟು ಸತ್ಯವಂತರು. ತಮ್ಮ ಸಿದ್ದಾಂತ ವೆಷ್ಟು ಸುಂದರ. ತಮ್ಮ ಆದರ್ಷ ವೆಷ್ಟು ಪ್ರಾಯೋಗಿಕ ಸಾರ್ವಕಾಲಿಕ. ಸ್ವದಖ್ತ ಯಾ ರಸೂಲ್ಲಾ:
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.