(www.vknews.com) : ಈದುಲ್ ಫಿತ್ರ್ ಹಬ್ಬವನ್ನು ಲೆಕ್ಕಿಸದೇ ನಿನ್ನೆ ನೇತ್ರಾವತಿ ನದಿ ನೀರಿನಲ್ಲಿ ನಿಶಾಂತ್ ಎಂಬ ಕಲ್ಲಡ್ಕದ ಯುವಕ ಮುಳುಗುತ್ತಿರುವ ದೃಶ್ಯ ಕಂಡು ತಕ್ಷಣವೇ ಕಾರ್ಯ ಪ್ರೇರಿತರಾಗಿ ತಮ್ಮ ಜೀವದ ಹಂಗನ್ನು ತೊರೆದು ನದಿಗೆ ಹಾರಿ ಮಾನವ ಶರೀರವನ್ನು ಮೇಲೆತ್ತಿ ಭಯಾನಕ ರೋಗಕ್ಕೆ ತುತ್ತಾಗಿ ರುವ ಈ ಸಂದರ್ಭದಲ್ಲಿ ಬಾಯಿಂದ ಬಾಯಿಗೆ ಶ್ವಾಸ ಕೊಟ್ಟು ಜೀವ ರಕ್ಷಿಸಲು ತ್ಯಾಗ ಮಾಡಿದ ನೇತ್ರಾವತಿ ವೀರಯೋಧರೇ ನಿಮಗೆ ವಾಯ್ಸ್ ಆಫ್ ಮಂಗಳೂರು ವಾಟ್ಸಪ್ ಗ್ರೂಫ್ ನ ಮಹಾಪೂರ ಅಭಿನಂದನೆಗಳು. ಆದರೆ ದೇವರ ಲೆಕ್ಕ ಬೇರೆಯಾಗಿತ್ತು.
ನಿಮ್ಮ ಈ ಸಾಹಸ ಹಲವಾರು ಯುವಕರಿಗೆ ಮಾರ್ಗದರ್ಶನ ಆಗಲಿ ಮತ್ತು ಜಾತಿ ಧರ್ಮ ಭೇದ ವಿಲ್ಲದೇ ಕಷ್ಟದಲ್ಲಿ ಇರುವ ಎಲ್ಲಾರನ್ನು ಕಾಪಾಡುವ ಜವಾಬ್ದಾರಿ ನಿಮ್ಮಿಂದ ಅಗಲಿ ಈ ವೀರ ಜೀವರಕ್ಷಕ ಯೋಧರಿಗೆ ಲೈಫ್ ಜಾಕೆಟ್, ಆಕ್ಸಿಜನ್ ಕಿಟ್, ಬೋಟ್, ಇತರ ರಕ್ಷಣಾ ಸಲಕರಣೆ ನೀಡಿ ಅವರನ್ನು ಅಭಿನಂದಿಸಿ ಶೌರ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗುವಂತೆ ಮಾಡಬೇಕು. ಎಂದು ವಾಯ್ಸ್ ಆಫ್ ಮಂಗಳೂರು ವಾಟ್ಸಪ್ ಗ್ರೂಪ್ ನ ಅಡ್ಮಿನ್ ಬಳಗ ಹಾಗೂ ಸದಸ್ಯರೆಲ್ಲರೂ ಕರಾವಳಿ ಭಾಗದ, ಸಂಸದರು ಶಾಸಕರು , ಉಸ್ತುವಾರಿ ಸಚಿವರು ಹಾಗೂ ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತಿದ್ದೇವೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.