(www.vknews.com) : ನಿಶಾಂತ್ ಎಂಬ ಹಿಂದೂ ಸಹೋದರನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದಾಗ ಅದನ್ನು ನೋಡಿದ ಸ್ಥಳೀಯ ಮುಸ್ಲಿಂ ಯುವಕರು ತಮ್ಮ ಜೀವದ ಹಂಗನ್ನು ತೊರೆದು ನದಿಗೆ ದುಮುಕಿ ಆತನನ್ನು ರಕ್ಷಿಸಲು ಪ್ರಯತ್ನಿಸಿದ ತೌಸಿಫ್ , ಶಮೀರ್ ಮಹಮ್ಮದ್, ಆರಿಫ್ ಹೈವೇ ,ಅಕ್ಕರಂಗಡಿಯ ಮುಖ್ತಾರ್,ಝಹೀದ್ ಜಾಯಿ ರವರಿಗೆ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆ ಅಭಿನಂದನೆ ಸಲ್ಲಿಸುತ್ತದೆ.
ಕೋವಿಡ್ -19 ಹಿನ್ನೆಲೆಯಲ್ಲಿ ಆಡಳಿತ ಕರ್ಫ್ಯೂ ಹೇರಿರುವ ಈ ಸಂದರ್ಭದಲ್ಲಿ ನಿಶಾಂತ್ ಎಂಬ ಹಿಂದೂ ಸಹೋದರನ ತುಟಿಗೆ ತುಟಿಯನ್ನು ಸೇರಿಸಿ ಉಸಿರನ್ನು ತುಂಬಲು ಪ್ರಯತ್ನ ಪಡುತ್ತಿದ್ದ ಮುಸ್ಲಿಂ ಯುವಕನ ದೃಶ್ಯವು ಹದಗೆಟ್ಟ ಸಮಾಜದ ನಡುವೆಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬ ಸಂದೇಶ ಸಾರುವಂತಿತ್ತು .
ಈದ್ ಉಲ್ ಫಿತ್ರ್ ಹಬ್ಬದ ಸಂಭ್ರಮದ ನಡುವೆ ನೇತ್ರಾವತಿ ವೀರರು ಇಸ್ಲಾಂ ಧರ್ಮವು ಶಾಂತಿ ,ಸೌಹಾರ್ದತೆ ಸಹಬಾಳ್ವೆಯ ಧರ್ಮ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಕೆಮ್ಮಾರ ಇದರ ಅದ್ಯಕ್ಷರಾದ ಅಝೀಝ್ ಬಿ.ಕೆ ತಿಳಿಸಿದರು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.