(www.vknews.com) : ಕೋಗಿಲೆ ಹಾಡುದನ್ನು ಯಾರು ಕೇಳುತ್ತಾರೆ. ಆದರೆ ಕೋಗಿಲೆಯ ಇಂಪು ಆ ಮಾದುರ್ಯ ಆ ಸ್ವರ ಆಲಾಪನೆ, ಆ ಗಾಂಭೀರ್ಯ, ಎಲ್ಲವೂ ಇವರ ಧ್ವನಿಯಲ್ಲಿ ಉಳಿದಿದೆ. ಯುಗ ಪುರಷನಾಗಿ ಯಕ್ಷಗಾನ ಲೋಕದ ಅಮರನಾಗಿ ಇಂದು ಯಕ್ಷ ಅಭಿಮಾನಿಗಳ ಮನೆ ಮನಗಳಲ್ಲಿ ತುಂಬಿ ತುಳುಕುವ ಹೆಸರು ಕಾಳಿಂಗ ನಾವುಡರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ಅಜ್ಜನವರಿಗೆ ಕೇಳಿದರು ಈ ಮಾಹಾನ್ ದ್ರುವತಾರೆಯ ಹೆಸರು ಗೊತ್ತಿಲ್ಲದೆ ಇಲ್ಲ. ಕೇವಲ ನಾಲ್ಕೈದು ದಶಕಗಳ ಇವರ ಸಾದನೆ ಹೇಳತ್ತೀರದು. ಆ ಸ್ವರ ಮೈ ರೋಮಾಂಚನ, ಮಾಧುರ್ಯತೆ, ಸೋಜಿಗವು ಎಲ್ಲವೂ ಅಡಗಿದೆ. ಶಾರದೆಯನ್ನು ನಾವು ಜೀವಂತ ನೋಡಿಲ್ಲ. ಆ ಶಾರದೆ ವರವಾಗಿ ಇಟ್ಟ ಪುತ್ರರತ್ನರನ್ನು ನಾವೋಂದು ಹೆಬ್ರಿಯಲ್ಲಿ ಸಂಪೂರ್ಣ ಕುರುಕ್ಷೇತ್ರ ಆಟದಲ್ಲಿ ನೋಡಿದೇನು.
ನನಗೆ ಮೊದಲಿಂದಲೂ ಯಕ್ಷಗಾನ ಅಭಿರುಚಿ ಜಾಸ್ತಿ. ಆಗ ನಾನು ಎಳೆಂಟು ವರುಷದ ಸಣ್ಣ ಹುಡುಗ. ಮನೆಯ ಹತ್ತಿರ ದೇಗುಲದ ವಠಾರದಲ್ಲಿ ಮಡಾಮಕ್ಕಿ ಮೇಳದ ಆಟ ವರುಷಕ್ಕೂ ಅಜ್ಜ ಮತ್ತು ಊರವರ ಒಟ್ಟಿಗೆ ಹಣ ಸಂಗ್ರಹಿಸಿ ಆಟ ಆಡಿಸುತ್ತಿದ್ದರು. ಆಗ ನಾನು ಭಾಗವತರ ಹಿಂದೆ ಶೃತಿ ಪೆಟ್ಟಿಗೆ ಹಿಡಿದು ರಂಗದಲ್ಲಿ ಕುಳಿತ್ತೀದ್ದೆ. ಅಷ್ಟು ಆಟ ಚಟ ನನಗಿತ್ತು. ಹೀಗೆ ಹೆಬ್ರಿಯಲ್ಲಿ ಸಂಪೂರ್ಣ ಕುರುಕ್ಷೇತ್ರದಲ್ಲಿ ಗೋಡೆಯವರ ಕೌರವ ಮತ್ತು ನಾವುಡರ ಬೆಳಗಿನ ಜಾವದ ಹಾಡು ನಾನು ನೆಲದಲ್ಲಿ ಕುಳಿತು ಆಟ ನೋಡುತ್ತೀದ್ದೆ. ನನಗೆ ಜೀವನದಲ್ಲಿ ಯಕ್ಷಗಾನದ ರಂಗಮಂಚದಲ್ಲಿ ನಾವುಡರನ್ನ ಕಂಡಿದ್ದು ಅದೇ ಮೊದಲು ಅದೇ ಕೊನೆ. ಅಂತಹ ಸಣ್ಣವನಾದ ನನ್ನ ಮೇಲೆ ಇಷ್ಟು ಪ್ರಭಾವ ಬೀರಿದ ವ್ಯಕ್ತಿ ಕೀರ್ತಿ ಶೇಷ ಕಾಳಿಂಗ ನಾವುಡರು.
ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಿ ಶಕ್ತಿಯಾಗಿ ಯಕ್ಷ ಪ್ರಪಂಚದ ದ್ರುವತಾರೆಯಾಗಿ, ಮಿನುಗುವ ಲೋಕದ ನಕ್ಷತ್ರವಾಗಿ, ಎಲ್ಲರ ಮನೆಯಲ್ಲೂ ಮನದಲ್ಲು ಅಮರನಾಗಿ, ಯಕ್ಷರಸಿಕರಿಗೆ ಪ್ರಾತಃ ಸ್ಮರಣೀಯರಾಗಿ, ಕಳೆದ ಮೂವತ್ತು ವರುಷವಾಗಿದೆ. ಇಂದು ನಾವೇನಾದರೂ ಕಿಂಚಿತ ಯಕ್ಷಗಾನದಲ್ಲಿ ಸೇವೆ ಹೆಸರು ಬಂದದ್ದು ಈ ಮಹಾನ್ ಪ್ರೇರಣೆ ಗುರು ನಾವುಡರೇ. ಅವರ ಹೆಸರು ಮಾತ್ರ ಸೂರ್ಯ ಚಂದ್ರ ಭೂತಾಯಿ ಇರುವವರೆಗೂ ಶಾಶ್ವತ ಅಮರವಾಗಲಿ
✍️ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.