ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್) : ನಗರ ಸೇರಿದಂತೆ ತಾಲೂಕಿನಾದ್ಯಂತ ಗುಡುಗು ಸಹಿತ ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ ಆದರೇ ತಗ್ಗು ಪ್ರದೇಶದಲ್ಲಿ ಮಾತ್ರ ಜನಜೀವನ ಅಸ್ತವ್ಯಸ್ತವಾಗಿದೆ.
ನಗರದಲ್ಲಿ ಗುಡುಗು-ಗಾಳಿ ಸಹಿತ ಸುರಿದ ಮಳೆಯಿಂದ ತಗ್ಗು ಪ್ರದೇಶ ಜಲಾವೃತಗೊಂಡರೇ ಇನ್ನೂ ನಗರದ ಮಯೂರ ಸರ್ಕಲ್ ಸಮೀಪ ಮನೆಯೊಂದರ ಬಾಲ್ಕನಿಗೆ ಸಿಡಿಲು ಬಡಿದಿದ್ದು ಇಡೀ ಪ್ರದೇಶದ ಜನ ಆತಂಕಗೊಂಡ ಘಟನೆ ವರದಿಯಾಗಿದೆ ಆದರೇ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಸಂಜೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಣ್ಣಿನ ಮನೆಗಳು ಕುಸಿದು ಬೀಳುವ ಆತಂಕ ಮನೆ ಮಾಡಿದೆ.
ಮಳೆಯ ಆರ್ಭಟಕ್ಕೆ ನಗರದ ತಗ್ಗುಪ್ರದೇಶಗಳಾದ ಕಾರ್ಮಿಕ ನಗರದಲ್ಲಿ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ದೃಶ್ಯ ಸಾಮಾನ್ಯವಾಗಿ ಕಂಡುಬಂದಿದೆ ನಗರಸಭೆಯ ವ್ಯಾಪ್ತಿಯಲ್ಲಿ ಬಹುತೇಕ ಚರಂಡಿಗಳಲ್ಲಿ ತ್ಯಾಜ್ಯ ತುಂಬಿತುಳಕಾಡುತ್ತಿದ್ದು ಮಳೆ ಬಂದಾಗ ಮಾತ್ರ ಅದು ಸ್ವಯಂ ಸ್ವಚ್ಚಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ನಗರಸಭೆಗೆ ಸರ್ಕಾರದಿಂದ ಒಂದು ಜೆಸಿಬಿ ಮಂಜೂರಾಗಿದೆ ಆದರೇ ಅದಕ್ಕೆ ಚಾಲಕರು ಇಲ್ಲದೆ ಜೆಸಿಬಿ ಇದ್ದರು ಸಹ ಇಲ್ಲದಂತಾಗಿದೆ ಇನ್ನೂ ಒಳಚರಂಡಿ ಸ್ವಚ್ಛಗೊಳಿಸಲು ಓಬೆರಾಯನ ಕಾಲದ ವಾಹನವನ್ನು ಆಶ್ರಯಿಸಿಕೊಂಡು ಕೆಲಸ ಮಾಡುವ ಪರಿಸ್ಥಿತಿ ಬಂದೂದಗಿದೆ.
ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಮಳೆಯಿಂದ ಆಗುವ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತ್ಯಾಜ್ಯದಿಂದ ತುಂಬಿತುಳಕಾಡುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಜೆಸಿಬಿ ವಾಹನಕ್ಕೆ ಚಾಲಕನನ್ನು ನೇಮಕ ಮಾಡಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದಜೇಗೇರಿರುವ ಶಿಡ್ಲಘಟ್ಟ ನಗರಕ್ಕೆ ಮತ್ತೊಂದು ಒಳಚರಂಡಿಗಳನ್ನು ಸ್ವಚ್ಛವಾಗಿಡಲು ಹೊಸ ವಾಹನವನ್ನು ಖರೀದಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.