ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದ.ಕ. ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ ಪೌರರಕ್ಷಣಾ ಕಾರ್ಯಕರ್ತರು ನಗರದ ಪಡೀಲಿನಲ್ಲಿರುವ ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಕೆಲಸಗಾರರಿಗೆ ಆರೋಗ್ಯ ಮಾಹಿತಿ ಶಿಬಿರ ನಡೆಸಿದರು.
ದ.ಕ. ಜಿಲ್ಲಾ ಗೃಹರಕ್ಷಕ ದಳ ಇದರ ಸಮಾದೇಷ್ಟರು ಮತ್ತು ದ.ಕ.ಜಿಲ್ಲಾ ನಾಗರೀಕ ರಕ್ಷಣಾ ಪಡೆ ಇದರ ಚೀಫ್ವಾರ್ಡನ್ ಡಾ|| ಮುರಲೀ ಮೋಹನ ಚೂಂತಾರು ಇವರ ನೇತೃತ್ವದಲ್ಲಿ ಈ ಮಾಹಿತಿ ಶಿಬಿರ ನಡೆಯಿತು. ಬಿಹಾರ, ಉತ್ತರಪ್ರದೇಶ ಜಾರ್ಖಂಡ್ ಇಲ್ಲಿನ ವಲಸೆ ಕಾರ್ಮಿಕರೇ ಹೆಚ್ಚಾಗಿರುವ ಪ್ರದೇಶಗಳಿಗೆ ನಿರ್ಮಾಣದ ಹಂತದಲ್ಲಿರುವ ಕಟ್ಟಡಗಳಿಗೆ ಪೌರರಕ್ಷಣಾ ಕಾರ್ಯಕರ್ತರು ಭೇಟಿ ನೀಡಿ ಕೋವಿಡ್-19 ರೋಗದ ಬಗ್ಗೆ ಮಾಹಿತಿ ನೀಡಿದರು.
ರೋಗ ತಡೆಗಟ್ಟುವ ಬಗ್ಗೆ ಸ್ಯಾನಿಟೈಸರ್ ಬಳಕೆ ಬಗ್ಗೆ ಸೋಪು ಬಳಸಿ ಕೈತೊಳೆಯುವುದರಿಂದ ಉಂಟಾಗುವ ಲಾಭದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ಸುಮಾರು 40 ಮಂದಿ ಕೆಲಸಗಾರರಿಗೆ ಪೌರರಕ್ಷಣಾ ತಂಡದ ಸದಸ್ಯರು ಮನೆಯಲ್ಲಿ ತಯಾರಿಸಿದ ಬಟ್ಟೆಯ ಮುಖಕವಚವನ್ನು ಉಚಿತವಾಗಿ ಹಂಚಲಾಯಿತು. ಪೌರರಕ್ಷಣಾ ತಂಡದ ಅಂಜನ್, ನಿತಿನ್, ಸುಹಾನ್, ಸುದೀಫ್ , ಸಂಜಯ್, ಗೃಹರಕ್ಷಕರಾದ ಲಿಂಗಪ್ಪ, ಮಹೇಶ್, ದಿವಾಕರ ಇವರುಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.