ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕೊರೋನ ಸಂಕಷ್ಟದ ಲಾಕ್ಢೌನ್ ಅವಧಿಯು ಜನಸಾಮನ್ಯರನ್ನು ಕಷ್ಟದ ಕೂಪಕ್ಕೆ ತಳ್ಳಿದೆ, ತಮ್ಮ ದೈನಂದಿನ ಖರ್ಚಿಗಾಗಿ ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಒಂದೊತ್ತಿನ ಊಟಕ್ಕಾಗಿ ಕೈಚಾಚುವ ಸ್ಥಿತಿ ನಿರ್ಮಾಣಗೊಂಡಿದೆ. ಇದ್ದ ಉಳಿತಾಯದ ಅಲ್ಪ ಸ್ವಲ್ಪ ಹಣವು ಈ ಸಮಯದಲ್ಲಿ ಬರಿಗೈಗೊಂಡಿದೆ. ಇಂತಹ ಸಂದರ್ಭದಲ್ಲಿ ಎರಡು ತಿಂಗಳ ವಿಪರೀತ ಏರಿಕೆಗೊಂಡ ವಿದ್ಯುತ್ ಬಿಲ್ಲು ಕೂಡಾ ಜನರ ಕೈಸೇರಿದೆ.
ಈ ಎರಡು ತಿಂಗಳ ವಿದ್ಯುತ್ ಬಿಲ್ಲು ಪಾವತಿಸುವ ಕುರಿತಂತೆ ಜನರು ಬಹಳಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಮೀಟರ್ ರೀಡರುಗಳು ಮನೆಗೆ ಬರಲು ಸಾದ್ಯವಾಗದೆ ಹಿಂದಿನ ಬಳಕೆಯ ಸರಾಸರಿಯನ್ನು ಆದರಿಸಿ ಎರಡು ತಿಂಗಳ ಬಿಲ್ಲು ನೀಡಲಾಗಿತ್ತು. ಆದರೆ ಬಹುತೇಕ ಜನರಿಗೆ ಹಲವು ಪಟ್ಟು ಏರಿಕೆಗೊಂಡ ದುಬಾರಿ ಬಿಲ್ ನೀಡಲಾಗಿದೆ. ಈ ವಿಪರೀತ ದರಗಳಿಗೆ ಸಂಬಂದಿಸಿದ ಗೊಂದಲ ಬಗೆಹರಿಸಿ ಬಿಲ್ ಗಳನ್ನು ಕ್ರಮಬದ್ಧಗೊಳಿಸುವ ಕುರಿತು ಮೆಸ್ಕಾಂ ಅಧಿಕಾರಿಗಳು ಈ ವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಬದಲಿಗೆ ಎರಡು ತಿಂಗಳ ಕಾಲ ಬಿಲ್ ಪಾವತಿಗೆ ಅವಧಿ ವಿಸ್ತರಣೆ ಮಾಡಿರುತ್ತಾರೆ ಇದು ಏನೇನೂ ಸಾಲದು ಇದರ ಬದಲಿಗೆ ಮಾಪಕಗಳನ್ನು ಕ್ರಮಬದ್ದಗೊಳಿಸಬೇಕು.
ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೈಯಲ್ಲಿ ಬಿಡಿಗಾಸು ಇಲ್ಲದೇ ಜೀವನ ನಡೆಸುವುದೇ ದುಸ್ತರವಾಗಿರುವ ಸಂಧರ್ಭದಲ್ಲಿ ಜನರಿಗೆ ವಿದ್ಯುತ್ ಬಿಲ್ ಪಾವತಿಸಲು ಕಷ್ಟಸಾದ್ಯವಾಗಿದೆ. ಮೆಸ್ಕಾಂ ಸಂಸ್ಥೆ ಜನಸಾಮಾನ್ಯರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಜೀವನ ನಡೆಸುವ ಹೋರಾಟದಲ್ಲಿರುವ ಜನರ ಜೊತೆ ನಿಲ್ಲಬೇಕಾಗಿದೆ. ಮೆಸ್ಕಾಂ ಈ ವರೆಗೆ ಜಿಲ್ಲೆಯಲ್ಲಿ ಲಾಭದಾಯಕವಾಗಿ ಮುನ್ನಡೆದಿದೆ. ವಿದ್ಯುತ್ ಅನ್ನೋದು ಸೇವಾ ಕ್ಷೇತ್ರ ಈ ಸಂಧರ್ಭದಲ್ಲಾದರೂ ಮೆಸ್ಕಾಂ ಸೇವಾ ಮನೋಭಾವನೆಯಿಂದ ವರ್ತಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಮೆಸ್ಕಾಂ ಸಂಸ್ಥೆಯು ಜನಸಾಮಾನ್ಯರ ಮೂರು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕು ಹಾಗೂ ಆರು ತಿಂಗಳವರೆಗೆ ಬಿಲ್ಲು ಪಾವತಿಸಲು ಬಲವಂತಪಡಿಸದೇ ಸಮಯಾವಕಾಶ ನೀಡಬೇಕೆಂದು ಒತ್ತಾಯಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ಮೆಸ್ಕಾಂ ಸಹಾಯಕ ಕಾರ್ಯನಿವಾಹಕ ಅಧಿಕಾರಿಗಳಿಗೆ ಮನವಿ ನೀಡಲಾಯಿತು.
ನಿಯೋಗದಲ್ಲಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಅಧ್ಯಕ್ಷರಾದ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್.ಎಂ. ಸಲಹೆಗಾರರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಮುಖಂಡರಾದ ಇರ್ಪಾನ್ ಒಕ್ಕೆತ್ತೂರು, ಆರೀಫ್.ಬಿ.ಕೆ, ಸಲೀಂ ಮಲಿಕ್,ನೌಷಾದ್ ಪಾತ್ರತೋಟ, ಖಲೀಲ್ ಮುಂತಾದವರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.