(www.vknews.com) : ಜಗದೆಲ್ಲೆಡೆ ಕೊರೋನಾ ಭೀತಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಕಾಲದಲಿ, ಕೂಲಿಕೆಲಸಗಾರರು ಕೆಲಸ ಇಲ್ಲದೆ ಅಲೆದಾಡುತ್ತಿರುವಾಗ ಉದ್ಯೋಗ ಖಾತ್ರಿ ಕಾಯ್ದೆ ಜನರ ಜೀವಕ್ಕೆ ಉಸಿರು ನೀಡಿದೆ. ಉದ್ಯೋಗ ಖಾತ್ರಿ ಕಾಯ್ದೆ ಜಾರಿಯಾದಾಗಿನಿಂದ ಅದರ ಸಮರ್ಪಕ ಜಾರಿಗಾಗಿ ಅವಿರತವಾಗಿ ದುಡಿಯುತ್ತಿರುವ ಜನವಾದಿ ಮಹಿಳಾ ಸಂಘಟನೆಯ ನೀಲಾ ಕೆ ಅವರು ಇಂದು ತಾಜಸುಲ್ತಾನಪೂರ ಕೆರೆಗೆ ಭೇಟಿ ನೀಡಿದರು.
ನೀಲಾ ಕೆ ಮಾತನಾಡುತ್ತ: ತಾಜಸುಲ್ತಾನಪೂರದಲ್ಲಿ ಪ್ರತಿವರ್ಷ ಸುಮಾರು ಸಾವಿರ ಜನ ಕೆಲಸ ಪಡೆದುಕೊಳ್ಳುತ್ತಾರೆ. ಕೆಲಸ ಕೊಡುವಲ್ಲಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ಜನವಾದಿ ಮಹಿಳಾ ಸಂಘಟನೆ ಪಾತ್ರ ದೊಡ್ಡದು. ಇವತ್ತು ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರಲ್ಲಿರುವ ಹೋರಾಟದ ಪವೃತ್ತಿ ಮತ್ತು ಸಂಘಟನಾ ಜಾಗೃತಿ ಕಾರಣ. ಈ ಮೂಲಕ ಜನವಾದಿ ಮಹಿಳಾ ಸಂಘಟನೆ ಸರ್ಕಾರಕ್ಕೆ ಆಗ್ರಹಿಸುವದೆನೆಂದರೆ ಇಂತಹ ಭೀಕರ ಸಮಯದಲ್ಲಿ ಕೂಲಿಕಾರರು ಬೀದಿ ಬೀದಿ ಹೆಣವಾಗಿ ಹೋಗುತ್ತಿದ್ದಾರೆ. ಅನ್ನಕ್ಕೆ ದಿಕ್ಕಿಲ್ಲದೆ ಸತ್ತ ನಾಯಿಯ ಮಾಂಸ ತಿನ್ನುತ್ತಿದ್ದಾರೆ. ಸರ್ಕಾರವು ಕೂಲಿಕಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 7500/- ರೂ. ಕೊಡಬೇಕು. ಸರ್ಕಾದ ವತಿಯಿಂದ ಮನೆಗೆ ಬೇಕಾಗುವ ದವಸ ಧಾನ್ಯ ಕೊಡಬೇಕು ಮತ್ತು ಉದ್ಯೋಗ ಖಾತ್ರಿ ಕೂಲಿಯನ್ನು 600 ರೂಪಾಯಿಗೆ ಹೆಚ್ಚಳ ಮಾಡಬೇಕು. ನಗರದಿಂದ ವಲಸೆ ಬಂದ ಕೂಲಿಕಾರ್ಮಿಕರ ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಕೊರೋನಾ ಜಾಗೃತಿ ಮೂಡಿಸಲು ನಗರದ ಎಚ್.ಕೆ.ಇ ಸಂಸ್ಥೆಯ ಡಾ. ಮಲ್ಕರೆಡ್ಡಿ ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಕಲಬುರಿಗಿ ವತಿಯಿಂದ ಇಂದು ತಾಜಸುಲ್ತಾನಪೂರ ಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರ ಕುರಿತು ಜಾಗೃತಿ ಮೂಡಿಸಿದರು. ಎ.ಆರ್.ಎಸ್. ಎ.ಎಲ್.ಬಿ 30 ಬೈ ಎಂಬ ಗುಳಿಗೆಗಳನ್ನು ಎಚ್ ಕೆ ಇ ಕಾಲೇಜಿನ/ ಸಂಸ್ಥೆಯ ಪ್ರಾಶುಂಪಾಲರಾ ಡಾ. ಸಂಪತರಾವ್ ಮತ್ತು ಮೆಡಿಕಲ್ ಸೂಪರಿಂಡೆಂಟ್ ಡಾ. ರಾಜೇಂದ್ರ ಪಾಟೀಲ್ ಹರವಾಳ ಅವರು ವಿತರಿಸಿ ಜನರಿಗೆ ಅರಿವು ಮೂಡಿಸಿದರು. ಅನಿತಾ ಮಹಿಳಾ ಸಂಘದ ವನಿತೆಯರು ಹಾಡು ಹಾಡಿದರು ಜನವಾದಿ ಮಹಿಳಾ ಸಂಘಟನೆಯ ಅಶ್ವಿನಿ ಮದನಕರ, ಕಾಯಕ ಸಹಾಯಕ ಪ್ರೇಮ್ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರಾದ ಕವಿತಾ, ರೇಖಾ, ಮಹಾನಂದ, ಗುರುಬಾಯಿ, ಕಸ್ತೂರಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.