(www.vknews.com) : ಲಾಕ್ ಡೌನ್ ನಮ್ಮನ್ನೆಲ್ಲಾ ನಿಂತಲ್ಲೇ ನಿಲ್ಲುವಂತೆ ಮಾಡಿಬಿಟ್ಟಿದೆ.ವ್ಯಾಪಾರ ,ವಹಿವಾಟು ಎಲ್ಲವೂ ಸ್ತಬ್ಧ.ಆಚರಣೆ ಆರಾಧನೆ ಎಲ್ಲದಕ್ಕೂ ನಿರ್ಬಂಧ! ಎಲ್ಲರ ಮುಖದಲ್ಲೂ ನೀರಸ ಮೌನ! ಮೊದಲಿನ ಹುಮ್ಮಸ್ಸು, ಉತ್ಸಾಹ ಲವಲವಿಕೆ ಇಲ್ಲದ ದಿನಗಳು, ಸಭೆ ಸಮಾರಂಭಗಳು ಇಲ್ಲದ ವಾರಗಳು,ಜನಜಂಗುಳಿ ಯಲ್ಲಿ ಸೇರದೇ ಕಳೆದುಹೋದ ತಿಂಗಳುಗಳು!
ಕೊರೋನ ಎಲ್ಲರನ್ನೂ ದಂಗು ಬಡಿಸಿತು.ಕಂಗಾಲಾಗಿಸಿತು.ಆಹಾರ ಪೊಟ್ಟಣ ಗಳಿಗಾಗಿ ಕೈ ಚಾಚುವ ಪರಿಸ್ಥಿತಿ ಯನ್ನು ತಂದೊಡ್ಡಿತು. ನಾನು ಕಂಡಂತೆ ಈ ಕೊರೋನ ಯಾರನ್ನೂ ಬಿಡಲಿಲ್ಲ.ಬಡವ ಬಲ್ಲಿದ, ಕುಬೇರ ಕುಚೇಲ,ಶ್ರೀಮಂತ ದರಿದ್ರ ಎಂಬ ಭೇದವಿಲ್ಲದೆ ಕಾಡಿತು ಈ ರೋಗ. ಜನರ ಬಾಳಿನಲ್ಲಿ ಕರಾಳತೆಯ ಕರಿ ನೆರಳು ಮೂಡಿಸಿ ಸಂತೋಷ, ನೆಮ್ಮದಿಯನ್ನು ದೂರ ಮಾಡಿಬಿಟ್ಟಿತು. ಆದರೆ ಈ ಮಧ್ಯೆ ನಾನಿರುವ ಮಸೀದಿಯ ಪಕ್ಕದಲ್ಲಿ ಒಂದು ಕುಟುಂಬ ಕೊರೋನ ದ ಎಲ್ಲಾ ದಿಗಿಲು,ಆತಂಕ ದಿಂದ ಮುಕ್ತ ವಾಗಿ ತನ್ನ ಪಾಡಿಗೆ ಸಂತೋಷದಿಂದ ದಿನಗಳನ್ನು ಎದುರು ನೋಡುತ್ತಿತ್ತು.
ಸುಮಾರು ಮೂರು ವರ್ಷಗಳ ಬಳಿಕ ಆ ಕುಟುಂಬ ಸ್ವಂತ ಮನೆ ಸೇರುವ ತವಕ.ಹೌದು ಮೂರು ವರ್ಷಗಳ ಮೊದಲು ಒಂದು ದಿನ ಮಣ್ಣಿನ ಗೋಡೆ ಬಿದ್ದು ಮನೆ ನಾಶವಾಗಿ ಕಂಗಾಲಾದ ಕುಟುಂಬ.ನಂತರ ಏನೆಲ್ಲಾ ಮಾಡಿದರೂ ಮನೆಯನ್ನು ಕಟ್ಟಿ ಪೂರ್ತಿ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಗುರಿಯಾಯಿತು. ಹಲವರೊಂದಿಗೆ ಕೇಳಿಕೊಂಡರೂ ಸಮಯ ಕೂಡಿಬರಲಿಲ್ಲ.ಪ್ರತಿದಿನ ಮಸೀದಿಯ ಹರಕೆ ಡಬ್ಬಿ ಯಲ್ಲಿ ಏನಾದರೂ ಚಿಲ್ಲರೆ ಹಾಕಿ ಕೈ ಎತ್ತಿ ಅಲ್ಲಾಹನೊಂದಿಗೆ ಪ್ರಾರ್ಥನೆ ಮಾಡುತ್ತಿತ್ತು ಆ ಕುಟುಂಬದ ಗ್ರಹಿಣಿ.ಈ ಸಂದರ್ಭದಲ್ಲಿ ನೆರವಿಗೆ ಬಂದವರೇ ಸಮುದಾಯದ ಅನುಗ್ರಹಿತ ಶ್ರೀಮಂತ ಉದ್ಯಮಿಗಳಾದ ಡೆಕ್ಕನ್ ಪ್ಲಾಸ್ಟಿಕ್ ಸಂಸ್ಥೆಯ ಮಾಲೀಕರಾದ ಸಹೋದರದ್ವಯರು, ಅಸ್ಗರ್ ಹಾಜಿ ಮತ್ತು ಬಶೀರ್ ಹಾಜಿ.ಅದು ಕೂಡಾ ನಾನವರೊಂದಿಗೆ ಮಾಡಿದ ಒಂದೇ ಒಂದು ಮನವಿಯ ಮೇರೆಗೆ ಆಗಿತ್ತು.
ಮಳೆ ಬೀಳದಂತೆ ಮಾಡು ಆಗಿದ್ದರೆ ಚಿಮಿನಿ ಹೊತ್ತಿಸಿ ಯಾದರೂ ಅದರಲ್ಲಿ ಕೂರಬಹುದಿತ್ತು ಎಂದು ಹೇಳುತ್ತಿದ್ದ ಆ ಮನೆಯ ಹೆಂಗಸು ಇಂದು ಎಲ್ಲಾ ಕೆಲಸ ಪೂರ್ಣ ಗೊಂಡ ಸುಂದರ ಮನೆಯಲ್ಲಿ ಇಂದಿನಿಂದ ವಾಸ ಮಾಡಲಿದ್ದಾರೆ.ಇದಕ್ಕೆ ಮೊದಲು ಜೋಕಟ್ಟೆಯಲ್ಲಿ ಇವರೇ ನಿರ್ಮಿಸಿಕೊಟ್ಟ ಎರಡು ಮನೆಗಳ ಗ್ರಹಪ್ರವೇಶ ಕಾರ್ಯಕ್ರಮ ದಲ್ಲಿ ನಾನು ಭಾಗಿಯಾಗಿದ್ದೆ.ನಿರ್ಗತಿಕ ಬಡಬಗ್ಗರಿಗೆ ಸೂರನ್ನು ಕಟ್ಟಿಕೊಟ್ಟು ಹೃದಯ ಶ್ರೀಮಂತಿಕೆಯ ಸರದಾರರಾಗಿ ಮೂಡಿಬರುತ್ತಿರುವ ಸಹೋದರರು ಸಮುದಾಯದ ಎಲ್ಲಾ ಶ್ರೀಮಂತ ವರ್ಗಕ್ಕೆ ಮಾದರಿಯಾಗಲಿ ಎಂಬುದೇ ನನ್ನ ಪ್ರಾರ್ಥನೆ.
ಇಂದು ಆ ಮನೆಯ ಕೀ ಹಸ್ತಾಂತರ ಕಾರ್ಯ ವು ಹಿರಿಯ ಸಹೋದರ ಫ್ಯಾನ್ಸಿ ಅಝೀಝ್ ರವರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಿ ,ಎಮ್, ಮುಮ್ತಾಜ್ ಅಲಿ,ಅಬ್ದುನ್ನಾಸಿರ್ ಲಕ್ಕಿಸ್ಟಾರ್,ಬಶೀರ್ ಬೈಕಂಪಾಡಿ,ಶುಭಾಶಯ ಕೋರಿದರು.ಯುವ ಉದ್ಯಮಿ ಫಾರೂಖ್ ಎಸ್ ಕೆ ,ಮುಸ್ತಫಾ ಎಸ್ ಕೆ,ಸುರತ್ಕಲ್, ಆಸಿಫ್ ಸೂಫಿಕಾನ್,ಯೂಸುಫ್ ಹಾಜಿ ಹೈವೇ,ಬಶೀರ್ ಚೊಕ್ಕಬೆಟ್ಟು,ಸಹೋದರ ಮಕ್ಕಳಾದ ಬಾಸಿತ್ ಹುಸೈನ್,ಅವ್ಶಾಫ್ ಹುಸೈನ್ ,ಬಾಶ್ವಿಲ್ ಖಾದರ್, ಮಾಸ್ಟರ್ ಮುಹಮ್ಮದ್ ಹಫೀಫ್,ಮುಂತಾದವರು ಭಾಗವಹಿಸಿದ್ದರು.
ಮತ್ತೊಂದು ಪುಣ್ಯ ಕಾರ್ಯಕ್ಕೆ ಮುಂದಾದ ಉದ್ಯಮಿಗಳು :
ಕಾರ್ಯಕ್ರಮದ ಬಳಿಕ ಕೆಲಸಕಾರ್ಯ ಪೂರ್ತಿಯಾಗದೇ ಇದ್ದ ವಿಧವೆಯೋರ್ವರ ಮನೆಯನ್ನು ಪರಿಶೀಲನೆ ಮಾಡಿ ಅದರ ಕೆಲಸವನ್ನು ಪೂರ್ತಿಮಾಡುವ ಜವಾಬ್ದಾರಿ ಯನ್ನು ಮುಮ್ತಾಜ್ ಅಲಿ ಬಿ ಎಮ್ ,ಅಬ್ದುನ್ನಾಸಿರ್ ಲಕ್ಕಿಸ್ಟಾರ್,ಆಸಿಫ್ ಉದ್ಯಮಿ ಮಂಗಳೂರು ಇವರುಗಳು ವಹಿಸಿಕೊಂಡರು.ಅಲ್ಲಾಹನು ಆ ಪುಣ್ಯ ಕಾರ್ಯವನ್ನು ಆದಷ್ಟು ಬೇಗ ಪೂರ್ತಿಗೊಳಿಸಲು ಅನುಗ್ರಹಿಸಲಿ.
ಈ ಎಲ್ಲಾ ಕಾರ್ಯಗಳಿಗೂ ಅಲ್ಲಾಹನು ಅನುಗ್ರಹಿಸಲಿ.ಅಝೀಝ್ ಫ್ಯಾನ್ಸಿ ,ಅಸ್ಗರ್ ಮತ್ತು ಬಶೀರ್ ಸಹೋದರರಿಗೂ ಅವರ ಮಡದಿ ಮಕ್ಕಳಿಗೂ ಕುಟುಂಬಸ್ಥರಿಗೂ ಸ್ವರ್ಗ ದಲ್ಲಿ ರಮ್ಯ ಮನೋಹರ ವಾದ ಮನೆಯನ್ನು ಅಲ್ಲಾಹನು ನೀಡಲಿ.ಅವರ ಮಾತಾಪಿತರಿಗೆ ಅತ್ಯುನ್ನತ ಸ್ಥಾನವನ್ನು ಸ್ವರ್ಗದಲ್ಲಿ ಕರುಣಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್.
– ಮೌಲಾನಾ ಯು ಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.