ಚಿಕ್ಕಬಳ್ಳಾಪುರ (ವಿಶ್ವ ಕನ್ನಡಿಗ ನ್ಯೂಸ್): ಕೊರೋನಾ ಎಂಬ ಮಹಾಮಾರಿಯಿಂದ ಸರ್ಕಾರ ಸೂಚಿಸಿದ ಲಾಕ್ಡೌನ್ ಹಾಗೂ ಸೀಲ್ ಡೌನ್ ನಿಂದ ಎಲ್ಲಾ ವರ್ಗದ ಜನರಿಗೆ ತುಂಬಾ ತೊಂದರೆಯುಂಟಾಗಿದೆ, ಇದನ್ನು ಮನಗೊಂಡು ರಾಜ್ಯ ಬಿಜೆಪಿ ಸರ್ಕಾರವು ಕೂಲಿಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಅಸಂಘಟಿತ ಕಾರ್ಮಿಕರಿಗೆ ಜೀವನ ನಿರ್ವಹÀಣೆಗಾಗಿ ಸಹಾಯ ಧನ ನೀಡಿರುವುದು ಶ್ಲಾಘನೀಯ ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎನ್.ಬಾಲಕೃಷ್ಣ (ಮೊಬೈಲ್ ಬಾಬು) ರವರು ಇಂದು ಅಪರ ಜಿಲ್ಲಾಧಿಕಾರಿಯವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಸಂದರ್ಭದಲ್ಲಿ ತಿಳಿಸಿದರು.
ಆಟೋ ಚಾಲನೆ ಮಾಡುವ ಚಾಲಕರು ಮತ್ತು ಮಾಲೀಕರು ಲಾಕ್ಡೌನ್ ಸಮಯದಲ್ಲಿ ಆಟೋ ವಾಹನ ಸಂಚಾರವನ್ನು ನಿಲ್ಲಿಸಲಾಗಿತ್ತು, ಇದರಿಂದ ಸದರಿ ಮಾಲೀಕರು ಮತ್ತು ಚಾಲಕರು ಜೀವನ ನಡೆಸಲು ತೊಂದರೆಯುಂಟಾಗಿರುತ್ತದೆ, ಇದನ್ನೇ ನಂಬಿ ಜೀವನ ಸಾಗಿಸುವ ಕುಟುಂಬಗಳಿಗೆ ಸರ್ಕಾರ ದಾರಿ ದೀಪವಾಗಬೇಕು ಎಂದು ನಮ್ಮ ಸಂಘದ ವತಿಯಿಂದ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 6000 ಕ್ಕಿಂತ ಹೆಚ್ಚು ಆಟೋ ಚಾಲಕರಿರುತ್ತಾರೆ, ಇವರಲ್ಲಿ ಕೇವಲ ಶೇ. 20% ರಷ್ಟು ಚಾಲಕ ಮತ್ತು ಮಾಲೀಕರಾಗಿರುತ್ತಾರೆ. ಉಳಿದ ಶೇ.80% ರಷ್ಟು ಚಾಲಕರು ಜೀವನ ನಿರ್ವಹಣೆಗಾಗಿ ಚಾಲಕರಾಗಿರುತ್ತಾರೆ, ಸ್ವಂತ ಆಟೋ ಸಹ ಹೊಂದಿರುವುದಿಲ್ಲ, ಶೇ. 90% ಚಾಲಕರು ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ, ಇದರಿಂದ ಜೀವನ ನಡೆಸಲು ತುಂಬಾ ತೊಂದÀರೆಯುಂಟಾಗಿದೆ ಎಂದು ತಿಳಿಸಿದರು.
ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಿ ಪರಿಹಾರವನ್ನು ನೀಡುತ್ತಿರುವುದು ಸರಿಯಷ್ಟೇ, ಆದರೆ ಆಟೋ ಚಾಲನೆ ಮಾಡುವವರು ಅವಿದ್ಯಾವಂತರಾಗಿರುತ್ತಾರೆ, ಸರಿಯಾಗಿ ಕಾನೂನು ತಿಳಿಯದವರಾಗಿರುತ್ತಾರೆ, ಆದ್ದರಿಂದ ಆಟೋ ಚಾಲಕರಿಗೆ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆಟೋ ಭಾವಚಿತ್ರಗಳನ್ನು ಮಾತ್ರ ಒದಗಿಸಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಸರ್ಕಾರವು ಸಂಕಷ್ಟದಲ್ಲಿ ಸಿಲುಕಿ ಜೀವನ ನಿರ್ವಹಣೆ ಮಾಡಲು ಆರ್ಥಿಕ ಸಹಾಯಧನವನ್ನು ಮಂಜೂರು ಮಾಡಿದ್ದು ಸ್ವಾಗತಾರ್ಹ ಅದೇರೀತಿ ಆಟೋ ಚಾಲಕರಿಗೆ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರು ಆರ್. ಶ್ರೀನಿವಾಸ್ (ಡಾಂಬೂ) ಉಪಸ್ಥಿತರಿದ್ದರು. ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ರವರು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.